ಕರೀಮುಲ್ಲಾ ಖಾದ್ರಿ ದರ್ಗಾದ ವಕ್ಫ್ ಆಸ್ತಿ ರಕ್ಷಣೆಗೆ ಎಸ್ ಡಿಪಿಐ ಒತ್ತಾಯ

ರಾಯಚೂರು: ನಗರದ ಸರ್ವೆ ನಂಬರ್ 1179/1 ರ ಸೈಯದ್ ಶಾ ಕರೀಮುಲ್ಲಾ ಖಾದ್ರಿ ದರ್ಗಾದ ಆಸ್ತಿ ರಕ್ಷಣೆ ಮಾಡುವಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ವಿಫಲವಾಗಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ವತಿಯಿಂದ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ಶಾ ಅಲಿ ಅಲ್ ಹುಸೇನಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವಕ್ಫ್ ಮಂಡಳಿ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡ ಬಗ್ಗೆ ಪಕ್ಷದಿಂದ ಮನವಿ ಸಲ್ಲಿಸಿ ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ವಕ್ಫ್ ಆಸ್ತಿಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪಕ್ಷದ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ರಾಜ್ಯ ನಾಯಕ ಅಕ್ಬರ್ ಹುಸೇನ್ ನಾಗುಂಡಿ, ಜಿಲ್ಲಾ ಉಪಾಧ್ಯಕ್ಷ ಮತೀನ್ ಅನ್ಸಾರಿ, ತೌಸೀಫ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ಶೇಖ್ ದಾವೂದ್, ಜಿಲ್ಲಾ ನಾಯಕರಾದ ಸೈಯದ್ ಅಬ್ದುಲ್ ಅಜೀಜ್, ಸೈಯದ್ ಇರ್ಫಾನ್, ಹಫೀಜ್ ಮೆಹಮೂದ್, ಸೈಯದ್ ಫರೀದುಲ್ಲಾ ಯಮಾನಿ, ಮುಹಮ್ಮದ್ ಶಾಫಿ, ಶೇಖ್ ಉಜೈರ್, ನಗರ ಅಧ್ಯಕ್ಷ ಸಾದಿಕ್ ಬೇಗ್, ರಫಿಯುದ್ದೀನ್ ಉಪಸ್ಥಿತರಿದ್ದರು.





