ಸಿಂಧನೂರು | ಧರ್ಮಗಳು ಮಾನವನನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತವೆ: ಸಿದ್ದಬಸವ ಮಹಾಸ್ವಾಮಿಗಳು

ಸಿಂಧನೂರು: ಧರ್ಮಗಳು ಮಾನವನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ವದ ಸಾಧನಗಳಾಗಿವೆ ಎಂದು ಸೂಗೂರು, ಹಳೆಕೋಣೆ ಹಾಗೂ ಬಳಗಾನೂರ ಮಠದ ಸಿದ್ದಬಸವ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲೂಕಿನ ಮಾಡಸಿರವಾರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಈದ್ಗಾ ಮೈದಾನದ ಉದ್ಘಾಟನೆ ಹಾಗೂ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಧರ್ಮಗಳ ನಿಜವಾದ ಸಾರವನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಫೀಜ್ ಚಾಂದ್ ಪಾಷಾ ಉಪವಾಸದ ಮಹತ್ವವನ್ನು ವಿವರಿಸಿ, ಅದು ಕೇವಲ ಆಹಾರ ತ್ಯಾಗವಲ್ಲದೆ ಶಿಸ್ತು ಮತ್ತು ಆತ್ಮಸಂಯಮ ಬೆಳೆಸುವ ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಫೀಜ್ ಕೈಸರ್ ಸಾಬ್, ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ, ಜೆಡಿಎಸ್ ಯುವ ಮುಖಂಡ ಅಭಿಷೇಕ್ ನಾಡಗೌಡ, ಜನಾಬ್ ಅಲಿ ಮೂರ್ತುಜಾ, ಹಾರೂನ್ ಪಾಷಾ ಜಾಹಗೀರದಾರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ನಯಿಮ್ ಪಾಷಾ, ಜೆಐಎಚ್ ಗ್ರಾಮೀಣ ವಿಭಾಗದ ಸಂಚಾಲಕ ನೂರ್ ಸಾಬ್ ಮುಳುಗುಂದ್, ಚಾಂದ್ ಪಾಷಾ ಜಾಗಿರ್ದಾರ್, ಕಲಂದರ್ ಪಾಷಾ, ಜಾಕಿರ್ ಹುಸೇನ್ ಮದೀನ, ನಯಿಮ್ ಇರ್ಫಾನ್, ನಬೀಸಾಬ್, ಅತ್ತರ್ ಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




