Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ರಂಗಾಯಣದಿಂದ ನಿವೃತ್ತಿ ಅಂಚಲ್ಲಿ ಗೀತಾ...

ರಂಗಾಯಣದಿಂದ ನಿವೃತ್ತಿ ಅಂಚಲ್ಲಿ ಗೀತಾ ಮೋಂಟಡ್ಕ

ಗಣೇಶ ಅಮೀನಗಡಗಣೇಶ ಅಮೀನಗಡ9 May 2025 12:02 PM IST
share
ರಂಗಾಯಣದಿಂದ ನಿವೃತ್ತಿ ಅಂಚಲ್ಲಿ ಗೀತಾ ಮೋಂಟಡ್ಕ
ರಂಗಾಯಣದಲ್ಲಿ 200ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ಗೀತಾ ಮೋಂಟಡ್ಕರಿಗೆ ಇಷ್ಟವಾದ ನಾಟಕಗಳು; ಕುಸುಮಬಾಲೆ, ಚೆಕ್‌ಮೇಟ್, ಹೌಸ್ ಆಫ್ ಬರ್ನಾಡ್, ಕನಸಿ ಕನಸು, ಶೂದ್ರ ತಪಸ್ವಿ, ಮಲೆಗಳಲ್ಲಿ ಮದುಮಗಳು, ಅಲೆಗಳಲ್ಲಿ ರಾಜಹಂಸ, ಚೆರ್ರಿತೋಟ, ಮಿಡ್‌ಸಮ್ಮರ್ ನೈಟ್ಸ್, ರಾಮಾಯಣ ದರ್ಶನಂ, ಪರ್ವ. ನಟನೆ ಜೊತೆಗೆ ಗಾಯಕಿ, ಕ್ರೀಡಾಪಟುವಾಗಿರುವ ಅವರು ಯಕ್ಷಗಾನ ಕಲಾವಿದೆ ಕೂಡಾ. ಕನ್ನಡ ಹಾಗೂ ಅರೆಭಾಷೆ ಲೇಖಕಿ ಕೂಡಾ ಹೌದು. ಅಲ್ಲದೆ ಮೈಸೂರು ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದೆ.

ಮೈಸೂರು ರಂಗಾಯಣದ ಕಲಾವಿದೆ ಗೀತಾ ಮೋಂಟಡ್ಕ ಈ ತಿಂಗಳು ಅಂದರೆ ಮೇ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ‘‘35 ವರ್ಷಗಳ ರಂಗಾಯಣದ ಸುದೀರ್ಘ ಪಯಣದಲ್ಲಿ ಅನುಭವಿಸಿದ ನೋವು-ನಲಿವು, ಸುಖ-ದುಃಖ, ಬೇಕು-ಬೇಡ ಎಲ್ಲದರ ಮಿಶ್ರಣ ಸಿಕ್ಕಿದೆ. ಇವನ್ನೆಲ್ಲ ಅನುಭವಿಸಿದ್ದರಿಂದ ಯಾವುದನ್ನಾದರೂ ಎದುರಿಸಬಲ್ಲೆ ಎಂಬ ಧೈರ್ಯ ಬಂದಿದೆ. ಒಂಟಿಯಾಗಿ ಎದುರಿಸಿದ್ದರಿಂದ ಧೈರ್ಯ ಹೆಚ್ಚು. ಹೀಗಾಗಿ ಸೋತು ಗೆದ್ದವಳು’’ ಎಂದು ರಂಗಾಯಣದ ಚಿಣ್ಣರ ಮೇಳದ ಮಕ್ಕಳ ನಾಟಕೋತ್ಸವದಲ್ಲಿ ಪಾತ್ರ ನಿರ್ವಹಿಸುವ ಮಕ್ಕಳಿಗೆ ಮೇಕಪ್ ಮಾಡುತ್ತಲೇ ಮಾತನಾಡಿದರು.

ಅವರು ರಂಗಾಯಣದಿಂದ ನಿವೃತ್ತರಾಗುತ್ತಿದ್ದಾರಷ್ಟೇ; ಅಭಿನಯದಿಂದಲ್ಲ. ಅಭಿನಯ ಹಾಗೂ ನಿರ್ದೇಶನಕ್ಕೆ ಅವಕಾಶ ಬಂದಾಗ ಬಳಸಿಕೊಳ್ಳುವ ಉದ್ದೇಶವಿದೆ. ಅಲ್ಲದೆ ತಾವೇ ಬರೆದ ಮಕ್ಕಳ ನಾಟಕಗಳನ್ನು ಪುಸ್ತಕಗಳಾಗಿ ಪ್ರಕಟಿಸುವ ಯೋಜನೆಯೂ ಅವರಿಗಿದೆ. ಹಾಗೆಯೇ ರಂಗಾನುಭವಗಳನ್ನು ದಾಖಲಿಸಲಿದ್ದಾರೆ; ಆತ್ಮಕಥೆಯನ್ನಲ್ಲ.

ಇಂಥ ಗೀತಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಮಡ್ನೂರು- ಅಮರಪಡ್ನೂರು ಗ್ರಾಮದ ಹೆಸರಾಂತ ಮೋಂಟಡ್ಕ ಮನೆತನದವರು. ಬಿ.ಎ. ಓದುವುದರ ಜೊತೆಗೆ ಟೈಪಿಂಗ್, ಶಾರ್ಟ್‌ಹ್ಯಾಂಡ್ ಕಲಿತಿದ್ದರು. ಇದರಿಂದ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದೂವರೆ ವರ್ಷ ಕ್ಲರ್ಕ್ ಆಗಿ ಕೆಲಸ ನಿರ್ವಹಿಸಿದರು. ನಂತರ ಸರಕಾರದ ತೂಕ ಮತ್ತು ಅಳತೆ ಇಲಾಖೆಗೆ ಕ್ಲರ್ಕ್ ಆಗಿ ನೇಮಕಗೊಂಡರು. ಅಲ್ಲಿದ್ದಾಗಲೇ ಮೈಸೂರು ರಂಗಾಯಣದ ಕಲಾವಿದರಿಗಾಗಿ ಅರ್ಜಿ ಕರೆದಾಗ ಸಲ್ಲಿಸಿದರು. ಇದೂ ಸರಕಾರದ್ದು ಎಂದು ಮನೆಯವರಿಗೆ ಹೇಳಿದ್ದರು. ರಂಗಾಯಣಕ್ಕೆ ಕಲಾವಿದೆಯಾಗಿ ಆಯ್ಕೆಯಾದ ನಂತರ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಶಾಲಾ, ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರ ತಾಯಿ ವೆಂಕಮ್ಮ ಹಾಡುತ್ತಿದ್ದರು. ತಂದೆ ಶೇಷಪ್ಪ ಗೌಡ ಮಗ್ಗದ ಮೇಷ್ಟ್ರು. ಅವರ ಸೋದರಮಾವ ಶಿವಣ್ಣ ಪಾಲ್ತಾಡು ಚೆನ್ನಾಗಿ ಹಾಡುತ್ತಿದ್ದರು. ರೇಡಿಯೊ ಕೇಳಿ ಹಾಡುತ್ತಿದ್ದ ಅವರ ತಾಯಿಯ ಪ್ರಭಾವ ಗೀತಾ ಅವರ ಮೇಲಾಯಿತು. ಮುಖ್ಯವಾಗಿ ಅವರ ತಂದೆ ನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಸಿದರು.

ಅವರ ಅಣ್ಣ ಕಲಾವಿದ ಜಯಪ್ರಕಾಶ್ ಮೋಂಟಡ್ಕ ಅವರ ಪ್ರಭಾವದ ಜೊತೆಗೆ ಸುಳ್ಯದ ಅಭಿನಯ ತಂಡದಲ್ಲಿ ಕಲಾವಿದೆಯಾಗಿದ್ದರು. ಈ ತಂಡದಲ್ಲಿ ಮೋಹನ್ ಸೋನ, ಪುರುಷೋತ್ತಮ ಬಿಳಿಮಲೆ, ಜಿ.ಎಸ್.ಉಬರಡ್ಕ, ಪ್ರಭಾಕರ ಶಿಶಿಲ, ಚಂದ್ರಶೇಖರ ದಾಮ್ಲೆ, ಎಚ್.ಎಂ. ಕುಮಾರಸ್ವಾಮಿ ಅವರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಮಿಮಿಕ್ರಿ ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ‘‘ಮನೆಯ ಬಡತನ ನೋಡಿ, ದೈಹಿಕ ಆಕಾರ, ಬಣ್ಣ ನೋಡಿ ಹಂಗಿಸಿದ ನಮ್ಮ ಜನಗಳ ಎದುರೇ ಸವಾಲು ಹಾಕಿದೆ. ಮಹಿಳೆಯರಿಗೆ ಯಾವುದೂ ಅಸಾಧ್ಯವಿಲ್ಲವೆಂದು ಕಷ್ಟಪಟ್ಟು ಮಿಮಿಕ್ರಿ ಕಲಿತೆ. ಆಗ ನನ್ನ ತಾಯಿಯ ಎದುರೇ ಕಣ್ಣೀರು ಹಾಕಿ ಶಪಥ ಮಾಡಿದೆ; ನಮ್ಮ ಬಡತನ ನೋಡಿ ನಕ್ಕವರು ನನ್ನನ್ನು ಒಪ್ಪುವ ಹಾಗೆ ಬೆಳೆವೆ’’ ಎಂದು. ಈಗ ಗೀತಾ ಹಂಗೆ ಬದುಕಬೇಕು ಎಂದು ಉದಾಹರಣೆ ಕೊಡುತ್ತಾರೆ. ಮಿಮಿಕ್ರಿ ಕಲಿತಿದ್ದರಿಂದ 600ಕ್ಕೂ ಅಧಿಕ ಮಿಮಿಕ್ರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ರಂಗಾಯಣಕ್ಕೆ ಸೇರಿದ ನಂತರ ಬಿ.ವಿ. ಕಾರಂತರ ನೇರ ಶಿಷ್ಯರಾದರು. ‘‘ಸತತವಾದ ಅಭ್ಯಾಸ, ಕಠಿಣ ಶ್ರಮ, ಸಾಧಿಸುವ ಗುರಿ, ಸತತ ಪ್ರಯತ್ನ ಇವನ್ನೆಲ್ಲ ಬೆಳೆಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ. ಕಷ್ಟವಾದ ಕಲೆಯೆಂದರೆ ನಟನೆ. ಅದನ್ನು ಮಾಡಲು ಬರದು. ಸತತ ಪ್ರಯತ್ನ ಬೇಕು. ಈಗೆಲ್ಲ ನಾಟಕದ ತರಬೇತಿ ಶಿಬಿರ ಇಲ್ಲವೇ ನಾಟಕಕ್ಕೆ ಸೇರಿದರೆ ಸಾಕು, ದೊಡ್ಡ ನಟ/ನಟಿ ಎಂದು ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸೀರಿಯಲ್, ಸಿನೆಮಾದ ಕನಸು ಕಾಣುತ್ತಾರೆ. ಇದೆಲ್ಲ ಯಾಕಾಗುತ್ತದೆ ಎಂದರೆ, ರಂಗಭೂಮಿ ಕಲಿಸುವ ಪಾಠ, ರೀತಿ-ನೀತಿ, ಶಿಸ್ತು ಈಗಿನ ಯುವತಲೆಮಾರಿಗೆ ಇಲ್ಲ. ಬೇಕಾಗಿಯೂ ಇಲ್ಲ. ಬದುಕಿಗೆ ಶಿಸ್ತು ಕಲಿಸುವುದು ರಂಗಭೂಮಿ. ಇಂಜಿನಿಯರಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಹುಡುಗನೊಬ್ಬ ಹೇಳಿದ-ಚಪ್ಪಲಿಯನ್ನು ನೀಟಾಗಿ ಬಿಡುವುದನ್ನು ಕಲಿತಿದ್ದು, ಕಚೇರಿಯಲ್ಲಿ ಶಿಸ್ತಾಗಿ ಕೆಲಸ ಮಾಡುವುದನ್ನು ಕಲಿತಿದ್ದು ರಂಗಭೂಮಿಯಿಂದ ಎಂದು ಹೇಳಿದ್ದು ಮರೆಯಲಾಗದು’’ ಎನ್ನುವ ಅವರು ‘‘ಬಿ.ವಿ. ಕಾರಂತರಿಂದ ಅಭಿನಯದ ಜೊತೆಗೆ ಸೆಟ್ಟು, ಮೇಕಪ್, ಪ್ರಾಪರ್ಟಿ... ಹೀಗೆ ಯಾವುದೇ ವಿಷಯದಲ್ಲಿ ನಾವೇ ಪರಿಣತರಾಗಬೇಕೆಂದು ಕಲಿಸಿದರು. ಇದರಿಂದ ಯಾವುದೇ ನಾಟಕವನ್ನು ನಾವೇ ನಿರ್ವಹಿಸುತ್ತೇವೆ’’ ಎನ್ನುವ ಹೆಮ್ಮೆ ಅವರಿಗೆ.

ರಂಗಾಯಣದಲ್ಲಿ 200ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ಅವರಿಗೆ ಇಷ್ಟವಾದ ನಾಟಕಗಳು; ಕುಸುಮಬಾಲೆ, ಚೆಕ್‌ಮೇಟ್, ಹೌಸ್ ಆಫ್ ಬರ್ನಾಡ್, ಕನಸಿ ಕನಸು, ಶೂದ್ರ ತಪಸ್ವಿ, ಮಲೆಗಳಲ್ಲಿ ಮದುಮಗಳು, ಅಲೆಗಳಲ್ಲಿ ರಾಜಹಂಸ, ಚೆರ್ರಿತೋಟ, ಮಿಡ್‌ಸಮ್ಮರ್ ನೈಟ್ಸ್, ರಾಮಾಯಣ ದರ್ಶನಂ, ಪರ್ವ. ನಟನೆ ಜೊತೆಗೆ ಗಾಯಕಿ, ಕ್ರೀಡಾಪಟುವಾಗಿರುವ ಅವರು ಯಕ್ಷಗಾನ ಕಲಾವಿದೆ ಕೂಡಾ. ಕನ್ನಡ ಹಾಗೂ ಅರೆಭಾಷೆ ಲೇಖಕಿ ಕೂಡಾ ಹೌದು. ಅಲ್ಲದೆ ಮೈಸೂರು ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದೆ. ಮೈಸೂರಿನ ಇನ್ನರ್‌ವೀಲ್ ಕ್ಲಬ್ ಐಸಿರಿ ಮತ್ತು ಮೈಸೂರು-ಕೊಡಗು ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಮಾಜದ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ನಿವೃತ್ತಿ ನಂತರ ಮೈಸೂರಿನಲ್ಲಿಯೇ ನೆಲೆ ನಿಲ್ಲುವ ಅವರ ಪತಿ ಡಿ.ಎಂ.ಗಣೇಶ್. ಕೊಡಗಿನ ದೇವಜನ ಮನೆತನದವರು. ರೈಲಿನ ಗೇರ್ ಬಾಕ್ಸ್ ನಿರ್ಮಿಸುವ ಸ್ಯಾಂಡ್ ಲುಕೊಮೊಟಿಯಾ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಗಣೇಶ್ ಅವರು ನಿವೃತ್ತಿಯಾಗಿದ್ದಾರೆ. ಗೀತಾ ಅವರ ಪುತ್ರಿ ಜಗತಿ ಎಂಬಿಎ ಮುಗಿಸಿ, ಎಲ್ ಆಂಡ್ ಟಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ.

ಗೀತಾ ಅವರ ನಿವೃತ್ತಿಯ ಬದುಕು ಚೆನ್ನಾಗಿರಲಿ. ಹಾಗೆಯೇ ಅವರ ಬಣ್ಣದ ಬದುಕು ನಿರಂತರವಾಗಿರಲಿ ಎಂದು ಹಾರೈಸುವೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X