Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ನೀನಾಸಂ ತಿರುಗಾಟ; ಹೊಸ ಗಾಳಿ ತರಬಲ್ಲದೆ?

ನೀನಾಸಂ ತಿರುಗಾಟ; ಹೊಸ ಗಾಳಿ ತರಬಲ್ಲದೆ?

ಗಣೇಶ ಅಮೀನಗಡಗಣೇಶ ಅಮೀನಗಡ13 Jan 2024 11:23 AM IST
share
ನೀನಾಸಂ ತಿರುಗಾಟ; ಹೊಸ ಗಾಳಿ ತರಬಲ್ಲದೆ?

ನಾಟಕ: ಹುಲಿಯ ನೆರಳು

ರಚನೆ: ಚಂದ್ರಶೇಖರ ಕಂಬಾರ

ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ

ಬಿ.ವಿ.ಕಾರಂತರು ನಿರ್ದೇಶಿಸಿದ ಪುತಿನ ಅವರ ‘ಗೋಕುಲ ನಿರ್ಗಮನ’ ನಾಟಕವು ನಮ್ಮೊಳಗಿನ ಭಾವದ ತಂತುಗಳನ್ನು ಮೀಟುತ್ತದೆ. ಈ ನಾಟಕದ ಕೊಳಲು ಮಹಾತ್ಮಾ ಗಾಂಧಿ, ಅಂಬೇಡ್ಕರ್, ರವೀಂದ್ರನಾಥ್ ಟಾಗೋರ್ ಅವರನ್ನು ಸಂಕೇತಿಸುತ್ತದೆ. ಅವರೆಲ್ಲ ನಮ್ಮ ಕಣ್ಣಮುಂದೆಯೇ ಹಾದುಹೋಗುತ್ತಾರೆ ಜೊತೆಗೆ ನಮ್ಮ ತಾಯಿ, ಅಕ್ಕಮಹಾದೇವಿ ಕಾಣುತ್ತಾಳೆ. ಹೀಗೆ ನಾಟಕವೊಂದು ಬೇರೆ ಬೇರೆ ಭಾವ ಹಾಗೂ ಮಜಲುಗಳನ್ನು ದಾಟಬೇಕು. ಹಾಗೆ ದಾಟದಿದ್ದರೆ ನಾಟಕ ತಟ್ಟುವುದಿಲ್ಲ. ಹೀಗೆಂದಾಗ ಬಿ.ವಿ.ಕಾರಂತರ ನಾಟಕಗಳು ಮಾತ್ರ ಕಾಣುತ್ತವೆ ಎಂಬ ಆರೋಪ ಹೊರಿಸದಿರಿ. ಈಚೆಗೆ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ದಕ್ಲ ಕಥಾ ದೇವಿಕಾವ್ಯ’ ನಾಟಕ ಉದಾಹರಿಸಬಹುದು. ಹೀಗೆಯೇ ಮೈಸೂರಿನ ರಂಗಾಯಣದ ಅನೇಕ ನಾಟಕಗಳನ್ನು ಉದಾಹರಿಸಬಹುದು; ‘ಗಾಂಧಿ ವರ್ಸಸ್ ಗಾಂಧಿ’, ‘ಚಿರೇಬಂದಿವಾಡೆ’, ‘ಹ್ಯಾಮ್ಲೆಟ್’, ‘ಮಲೆಗಳಲ್ಲಿ ಮದುಮಗಳು’ ಮೊದಲಾದವು. ಈ ನಾಟಕಗಳು ನೆನಪಲ್ಲಿ ಉಳಿದಿದ್ದರೆ ಕಲಾವಿದರ ಅಭಿನಯವೇ ಕಾರಣ.

ಉರು ಹೊಡೆದ ಸಂಭಾಷಣೆ, ವೇಗವಾಗಿ ಮಾತುಗಳನ್ನು ಒಪ್ಪಿಸುವ ಗಡಿಬಿಡಿ, ಪಾತ್ರಗಳನ್ನು ಅನುಭವಿಸದೆ ಅಭಿನಯಿಸಿದ ಪರಿಣಾಮ, ಪರಿಣಾಮ ಬೀರದ ನೀನಾಸಂ ನಾಟಕಗಳು ಎನ್ನುವುದನ್ನು ವಿಷಾದದಿಂದ ಹೇಳುವೆ. ಹೀಗೆಂದಾಗ ನಿರ್ದೇಶಕರಾದ ಕೆ.ಜಿ.ಕೃಷ್ಣಮೂರ್ತಿ ಹಾಗೂ ಎಚ್.ಕೆ.ಶ್ವೇತಾರಾಣಿ ಅವರನ್ನು ಅಲ್ಲಗಳೆಯುತ್ತಿಲ್ಲ. ನೀನಾಸಂಗೆ ಆಯ್ಕೆಗೊಂಡ ನಂತರದ ಒಂದು ವರ್ಷದ ತರಬೇತಿ ಬಳಿಕ ತಿರುಗಾಟಕ್ಕೆ ಅಣಿಯಾಗುವಲ್ಲಿನ ಪ್ರಯಾಣ ಇದ್ದೇ ಇರುತ್ತದೆ. ಈ ಪ್ರಯಾಣದಲ್ಲಿ ನಟರಿಗೆ ಧ್ವನಿವ್ಯಾಯಾಮ ಸಿಕ್ಕಿರುತ್ತದೆ. ಜೊತೆಗೆ ಅಭಿನಯಕ್ಕೆ ಪೂರಕವಾದ ತರಬೇತಿಯೂ ಸಿಕ್ಕಿರುತ್ತದೆ. ಇಷ್ಟಾದರೂ ನಟರ ಅಭಿನಯಕ್ಕೆ ಒತ್ತು ಕೊಡುವುದು ಕಡಿಮೆಯಾಗುತ್ತಿದೆಯೇ? ನೀನಾಸಂನ ಒಳ್ಳೆಯ ನಾಟಕಗಳನ್ನು ಲಾಗಾಯ್ತಿನಿಂದ ನೋಡುತ್ತ ಬಂದಿರುವ ನನಗೆ ಈ ಬಾರಿಯ ನಾಟಕಗಳು ನಿರಾಸೆಯುಂಟು ಮಾಡಿದವು ಎಂದು ಬೇಸರದಿಂದಲೇ ಹೇಳುವೆ. ಇದಕ್ಕೆ ಕಲಾವಿದರು ಮಾತ್ರ ಕಾರಣರು ಎಂದು ಹೇಳುತ್ತಿಲ್ಲ. ಈ ಕುರಿತು ಅಲ್ಲಿನ ಪ್ರಾಂಶುಪಾಲರಾದ ಎಂ.ಗಣೇಶ್ ಮುಖ್ಯವಾಗಿ ಕೆ.ವಿ.ಅಕ್ಷರ ಅವರು ಗಮನ ಹರಿಸಬೇಕೆಂದು ಕೋರುವೆ.

ನೀನಾಸಂ ಕಲಾವಿದರಾಗಿದ್ದ, ತಿರುಗಾಟದ ವ್ಯವಸ್ಥಾಪಕರಾಗಿದ್ದ ವಿ.ಡಿ.ಮಧುಸೂದನ್ ಅವರು ನಾಟ್ಯಲೇಖ ರಂಗಸಮೂಹ ಎಂಬ ಸಂಸ್ಥೆ ಕಟ್ಟಿಕೊಂಡು, ರಂಗವಲ್ಲಿ ತಂಡದ ಸಹಯೋಗದಲ್ಲಿ ಮೈಸೂರಿನಲ್ಲಿ ಕಳೆದ ವಾರ ನೀನಾಸಂ ತಿರುಗಾಟದ ಎರಡು ನಾಟಕಗಳನ್ನು ಪ್ರದರ್ಶಿಸಿದಾಗ ಥಟ್ಟನೆ ಅನ್ನಿಸಿದ್ದು ಮೇಲಿನಂತೆ. ನೀನಾಸಂನ ಪರಿಚಯ ಪತ್ರದಲ್ಲಿ ‘ಹೊಸ ಪ್ರಯೋಗಗಳ ಮೂಲಕ ಹಳೆಯ ನಾಟಕಗಳ ಪುನರ್‌ಮೌಲ್ಯಮಾಪನವಾಗುವಂತೆ ಪ್ರಯತ್ನಿಸುವುದು’ ಎಂದಿದೆ. ಹೀಗೆಂದು ಚಂದ್ರಶೇಖರ ಕಂಬಾರ ಅವರ ‘ಹುಲಿಯ ನೆರಳು’ ನಾಟಕವನ್ನು ಆಯ್ದುಕೊಂಡಿರಬಹುದು. ಈಗಾಗಲೇ ಹಲವಾರು ತಂಡಗಳು ಆಡಿರುವ ಈ ನಾಟಕವು ‘ಈಡಿಪಸ್ ಕಾಂಪ್ಲೆಕ್ಸ್’ ಕುರಿತು ಹೇಳುತ್ತದೆ.

ಇನ್ನೊಂದು ನಾಟಕ; ‘ಆ ಲಯ ಈ ಲಯ’. ಒಂದುಮುಕ್ಕಾಲು ಗಂಟೆಯ ಈ ನಾಟಕದ ಆರಂಭದಲ್ಲಿ ಹೋರಾಟದ ಕಿಚ್ಚಿನ ಹಾಡು, ಮಾತು, ಭಾಷಣ ಇವೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಪರಿಣಾಮಕಾರಿಯಾಗಿ ಬಂದಿವೆ. ತೆರೆಯ ಮುಂದೆ ಪೊಲೀಸರು, ತೆರೆಯ ಹಿಂದೆ ಪ್ರತಿಭಟನಾಕಾರರು. ಅವರ ನೆರಳು-ಬೆಳಕಿನಡಿಯ ದೃಶ್ಯಗಳು ಗಮನ ಸೆಳೆಯುತ್ತವೆ. ಈ ದೃಶ್ಯಗಳ ನಂತರ ಸ್ಟೂಡೆಂಟ್ಸ್ ಕ್ಲಬ್‌ನಲ್ಲಿ ನಡೆಯುವ ದೃಶ್ಯಗಳು; ಕುಡಿತ, ಪ್ರಣಯ, ಮೋಜುಮಸ್ತಿಯಿಂದಾಗಿ ನಾಟಕವು ಏನನ್ನು ಕಟ್ಟಿಕೊಡುತ್ತದೆ ಎನ್ನುವುದು ಮುಖ್ಯ. ಏಕೆಂದರೆ ಪ್ರತಿಭಟನೆಯ ನಂತರ ಕುಡಿತ ಸಾಮಾನ್ಯ ಎನ್ನುವುದನ್ನು ಬಿಂಬಿಸಲು ನಾಟಕ ಹೊರಟಂತಿದೆ. ಈಮೂಲಕ ಈ ನಾಟಕ ನೋಡುವ ಯುವತಲೆಮಾರು ಇದೇ ಬಗೆಯಾಗಿ ಸ್ಟೂಡೆಂಟ್ಸ್ ಕ್ಲಬ್ ಇರಬೇಕು ಎಂದು ತಿಳಿದಾರು. ಕುಡಿತದ ದೃಶ್ಯದಲ್ಲಿ ತಿರುಗಾಟದ ವ್ಯವಸ್ಥಾಪಕ ಮಂಜುನಾಥ ಹಿರೇಮಠ ಅವರು ತಮ್ಮ ಮ್ಯಾನರಿಸಂನಿಂದ ನೆನಪಲ್ಲಿ ಉಳಿಯುತ್ತಾರೆ. ಆದರೆ ಸಂಭಾಷಣೆ ನಡೆದಿರುವಾಗಲೇ ಇತರ ಕಲಾವಿದರ ಚಟುವಟಿಕೆಗಳೇ ಹೆಚ್ಚು ಗಮನಸೆಳೆಯುತ್ತವೆ. ಇದರಿಂದ ಮಾತನಾಡುವ ಕಲಾವಿದರತ್ತ ಲಕ್ಷ್ಯ ವಹಿಸಬೇಕೇ? ಮಾತನಾಡದಿರುವ ಕಲಾವಿದರತ್ತ ಗಮನ ಹರಿಸಬೇಕೇ ಎಂಬ ಗೊಂದಲ ಮೂಡುತ್ತದೆ.

ಮೈಸೂರು ರಂಗಾಯಣ ಪ್ರಸ್ತುತಪಡಿಸುವ ‘ಗಾಂಧಿ ವರ್ಸಸ್ ಗಾಂಧಿ’ ನಾಟಕದ ಮೊದಲ ದೃಶ್ಯದಲ್ಲಿ ಗಾಂಧಿ ಹಾಗೂ ಅವರ ಮಗ ಹರಿಲಾಲ್ ಸ್ವರ್ಗದಲ್ಲಿ ಭೇಟಿಯಾಗುತ್ತಾರೆ. ಆಗ ಗಾಂಧಿ ‘ನಿನ್ನ ಯೌವನವನ್ನು ಹೀಗೆ ಗಾಳಿಗೆ ತೂರಿಬಿಡಬೇಡವೆಂದು ಹೇಳಿದ್ದೆ’ ಎಂದು ಸ್ಮರಿಸಿಕೊಳ್ಳುತ್ತಾರೆ. ಇದನ್ನೇ ಈ ಬಾರಿಯ ತಿರುಗಾಟದ ಕಲಾವಿದರಿಗೆ ಅನ್ವಯಿಸಿ ಹೇಳುವುದಾದರೆ, ನಿಮ್ಮ ಯೌವನವನ್ನು ಅಂದರೆ ಎನರ್ಜಿಯನ್ನು ಸದುಪಯೋಗಪಡಿಸಿಕೊಳ್ಳಿ ಅಂದರೆ ಕೇವಲ ಮಾತಿನ ಓಘ, ಅಬ್ಬರದ ನಡುವೆ ಕಳೆದುಹೋಗದಿರಿ ಎಂದು. ಸದ್ದುಗದ್ದಲದ ನಡುವೆ ಕೇಳದ ಮಾತುಗಳೇ ಹೆಚ್ಚಾಗುವ ಬದಲು ಸಮಾಧಾನದಿಂದ ಮಾತುಗಳನ್ನು ಆಡಿರಿ. ಮೌನವೂ ಪ್ರತಿಭಟನೆ.

ನಾಟಕ: ಆ ಲಯ ಈ ಲಯ

ಮೂಲ: ಲೂಯಿ ನಕೋಸಿ

ಕನ್ನಡಕ್ಕೆ: ನಟರಾಜ ಹೊನ್ನವಳ್ಳಿ

ನಿರ್ದೇಶನ: ಎಚ್.ಕೆ. ಶ್ವೇತಾರಾಣಿ

ಬಿ.ವಿ.ಕಾರಂತರು ನಿರ್ದೇಶಿಸಿದ ಪುತಿನ ಅವರ ‘ಗೋಕುಲ ನಿರ್ಗಮನ’ ನಾಟಕವು ನಮ್ಮೊಳಗಿನ ಭಾವದ ತಂತುಗಳನ್ನು ಮೀಟುತ್ತದೆ. ಈ ನಾಟಕದ ಕೊಳಲು ಮಹಾತ್ಮಾ ಗಾಂಧಿ, ಅಂಬೇಡ್ಕರ್, ರವೀಂದ್ರನಾಥ್ ಟಾಗೋರ್ ಅವರನ್ನು ಸಂಕೇತಿಸುತ್ತದೆ. ಅವರೆಲ್ಲ ನಮ್ಮ ಕಣ್ಣಮುಂದೆಯೇ ಹಾದುಹೋಗುತ್ತಾರೆ ಜೊತೆಗೆ ನಮ್ಮ ತಾಯಿ, ಅಕ್ಕಮಹಾದೇವಿ ಕಾಣುತ್ತಾಳೆ. ಹೀಗೆ ನಾಟಕವೊಂದು ಬೇರೆ ಬೇರೆ ಭಾವ ಹಾಗೂ ಮಜಲುಗಳನ್ನು ದಾಟಬೇಕು. ಹಾಗೆ ದಾಟದಿದ್ದರೆ ನಾಟಕ ತಟ್ಟುವುದಿಲ್ಲ. ಹೀಗೆಂದಾಗ ಬಿ.ವಿ.ಕಾರಂತರ ನಾಟಕಗಳು ಮಾತ್ರ ಕಾಣುತ್ತವೆ ಎಂಬ ಆರೋಪ ಹೊರಿಸದಿರಿ. ಈಚೆಗೆ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ದಕ್ಲ ಕಥಾ ದೇವಿಕಾವ್ಯ’ ನಾಟಕ ಉದಾಹರಿಸಬಹುದು. ಹೀಗೆಯೇ ಮೈಸೂರಿನ ರಂಗಾಯಣದ ಅನೇಕ ನಾಟಕಗಳನ್ನು ಉದಾಹರಿಸಬಹುದು; ‘ಗಾಂಧಿ ವರ್ಸಸ್ ಗಾಂಧಿ’, ‘ಚಿರೇಬಂದಿವಾಡೆ’, ‘ಹ್ಯಾಮ್ಲೆಟ್’, ‘ಮಲೆಗಳಲ್ಲಿ ಮದುಮಗಳು’ ಮೊದಲಾದವು. ಈ ನಾಟಕಗಳು ನೆನಪಲ್ಲಿ ಉಳಿದಿದ್ದರೆ ಕಲಾವಿದರ ಅಭಿನಯವೇ ಕಾರಣ.

ಉರು ಹೊಡೆದ ಸಂಭಾಷಣೆ, ವೇಗವಾಗಿ ಮಾತುಗಳನ್ನು ಒಪ್ಪಿಸುವ ಗಡಿಬಿಡಿ, ಪಾತ್ರಗಳನ್ನು ಅನುಭವಿಸದೆ ಅಭಿನಯಿಸಿದ ಪರಿಣಾಮ, ಪರಿಣಾಮ ಬೀರದ ನೀನಾಸಂ ನಾಟಕಗಳು ಎನ್ನುವುದನ್ನು ವಿಷಾದದಿಂದ ಹೇಳುವೆ. ಹೀಗೆಂದಾಗ ನಿರ್ದೇಶಕರಾದ ಕೆ.ಜಿ.ಕೃಷ್ಣಮೂರ್ತಿ ಹಾಗೂ ಎಚ್.ಕೆ.ಶ್ವೇತಾರಾಣಿ ಅವರನ್ನು ಅಲ್ಲಗಳೆಯುತ್ತಿಲ್ಲ. ನೀನಾಸಂಗೆ ಆಯ್ಕೆಗೊಂಡ ನಂತರದ ಒಂದು ವರ್ಷದ ತರಬೇತಿ ಬಳಿಕ ತಿರುಗಾಟಕ್ಕೆ ಅಣಿಯಾಗುವಲ್ಲಿನ ಪ್ರಯಾಣ ಇದ್ದೇ ಇರುತ್ತದೆ. ಈ ಪ್ರಯಾಣದಲ್ಲಿ ನಟರಿಗೆ ಧ್ವನಿವ್ಯಾಯಾಮ ಸಿಕ್ಕಿರುತ್ತದೆ. ಜೊತೆಗೆ ಅಭಿನಯಕ್ಕೆ ಪೂರಕವಾದ ತರಬೇತಿಯೂ ಸಿಕ್ಕಿರುತ್ತದೆ. ಇಷ್ಟಾದರೂ ನಟರ ಅಭಿನಯಕ್ಕೆ ಒತ್ತು ಕೊಡುವುದು ಕಡಿಮೆಯಾಗುತ್ತಿದೆಯೇ? ನೀನಾಸಂನ ಒಳ್ಳೆಯ ನಾಟಕಗಳನ್ನು ಲಾಗಾಯ್ತಿನಿಂದ ನೋಡುತ್ತ ಬಂದಿರುವ ನನಗೆ ಈ ಬಾರಿಯ ನಾಟಕಗಳು ನಿರಾಸೆಯುಂಟು ಮಾಡಿದವು ಎಂದು ಬೇಸರದಿಂದಲೇ ಹೇಳುವೆ. ಇದಕ್ಕೆ ಕಲಾವಿದರು ಮಾತ್ರ ಕಾರಣರು ಎಂದು ಹೇಳುತ್ತಿಲ್ಲ. ಈ ಕುರಿತು ಅಲ್ಲಿನ ಪ್ರಾಂಶುಪಾಲರಾದ ಎಂ.ಗಣೇಶ್ ಮುಖ್ಯವಾಗಿ ಕೆ.ವಿ.ಅಕ್ಷರ ಅವರು ಗಮನ ಹರಿಸಬೇಕೆಂದು ಕೋರುವೆ.

ನೀನಾಸಂ ಕಲಾವಿದರಾಗಿದ್ದ, ತಿರುಗಾಟದ ವ್ಯವಸ್ಥಾಪಕರಾಗಿದ್ದ ವಿ.ಡಿ.ಮಧುಸೂದನ್ ಅವರು ನಾಟ್ಯಲೇಖ ರಂಗಸಮೂಹ ಎಂಬ ಸಂಸ್ಥೆ ಕಟ್ಟಿಕೊಂಡು, ರಂಗವಲ್ಲಿ ತಂಡದ ಸಹಯೋಗದಲ್ಲಿ ಮೈಸೂರಿನಲ್ಲಿ ಕಳೆದ ವಾರ ನೀನಾಸಂ ತಿರುಗಾಟದ ಎರಡು ನಾಟಕಗಳನ್ನು ಪ್ರದರ್ಶಿಸಿದಾಗ ಥಟ್ಟನೆ ಅನ್ನಿಸಿದ್ದು ಮೇಲಿನಂತೆ. ನೀನಾಸಂನ ಪರಿಚಯ ಪತ್ರದಲ್ಲಿ ‘ಹೊಸ ಪ್ರಯೋಗಗಳ ಮೂಲಕ ಹಳೆಯ ನಾಟಕಗಳ ಪುನರ್‌ಮೌಲ್ಯಮಾಪನವಾಗುವಂತೆ ಪ್ರಯತ್ನಿಸುವುದು’ ಎಂದಿದೆ. ಹೀಗೆಂದು ಚಂದ್ರಶೇಖರ ಕಂಬಾರ ಅವರ ‘ಹುಲಿಯ ನೆರಳು’ ನಾಟಕವನ್ನು ಆಯ್ದುಕೊಂಡಿರಬಹುದು. ಈಗಾಗಲೇ ಹಲವಾರು ತಂಡಗಳು ಆಡಿರುವ ಈ ನಾಟಕವು ‘ಈಡಿಪಸ್ ಕಾಂಪ್ಲೆಕ್ಸ್’ ಕುರಿತು ಹೇಳುತ್ತದೆ.

ಇನ್ನೊಂದು ನಾಟಕ; ‘ಆ ಲಯ ಈ ಲಯ’. ಒಂದುಮುಕ್ಕಾಲು ಗಂಟೆಯ ಈ ನಾಟಕದ ಆರಂಭದಲ್ಲಿ ಹೋರಾಟದ ಕಿಚ್ಚಿನ ಹಾಡು, ಮಾತು, ಭಾಷಣ ಇವೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಪರಿಣಾಮಕಾರಿಯಾಗಿ ಬಂದಿವೆ. ತೆರೆಯ ಮುಂದೆ ಪೊಲೀಸರು, ತೆರೆಯ ಹಿಂದೆ ಪ್ರತಿಭಟನಾಕಾರರು. ಅವರ ನೆರಳು-ಬೆಳಕಿನಡಿಯ ದೃಶ್ಯಗಳು ಗಮನ ಸೆಳೆಯುತ್ತವೆ. ಈ ದೃಶ್ಯಗಳ ನಂತರ ಸ್ಟೂಡೆಂಟ್ಸ್ ಕ್ಲಬ್‌ನಲ್ಲಿ ನಡೆಯುವ ದೃಶ್ಯಗಳು; ಕುಡಿತ, ಪ್ರಣಯ, ಮೋಜುಮಸ್ತಿಯಿಂದಾಗಿ ನಾಟಕವು ಏನನ್ನು ಕಟ್ಟಿಕೊಡುತ್ತದೆ ಎನ್ನುವುದು ಮುಖ್ಯ. ಏಕೆಂದರೆ ಪ್ರತಿಭಟನೆಯ ನಂತರ ಕುಡಿತ ಸಾಮಾನ್ಯ ಎನ್ನುವುದನ್ನು ಬಿಂಬಿಸಲು ನಾಟಕ ಹೊರಟಂತಿದೆ. ಈಮೂಲಕ ಈ ನಾಟಕ ನೋಡುವ ಯುವತಲೆಮಾರು ಇದೇ ಬಗೆಯಾಗಿ ಸ್ಟೂಡೆಂಟ್ಸ್ ಕ್ಲಬ್ ಇರಬೇಕು ಎಂದು ತಿಳಿದಾರು. ಕುಡಿತದ ದೃಶ್ಯದಲ್ಲಿ ತಿರುಗಾಟದ ವ್ಯವಸ್ಥಾಪಕ ಮಂಜುನಾಥ ಹಿರೇಮಠ ಅವರು ತಮ್ಮ ಮ್ಯಾನರಿಸಂನಿಂದ ನೆನಪಲ್ಲಿ ಉಳಿಯುತ್ತಾರೆ. ಆದರೆ ಸಂಭಾಷಣೆ ನಡೆದಿರುವಾಗಲೇ ಇತರ ಕಲಾವಿದರ ಚಟುವಟಿಕೆಗಳೇ ಹೆಚ್ಚು ಗಮನಸೆಳೆಯುತ್ತವೆ. ಇದರಿಂದ ಮಾತನಾಡುವ ಕಲಾವಿದರತ್ತ ಲಕ್ಷ್ಯ ವಹಿಸಬೇಕೇ? ಮಾತನಾಡದಿರುವ ಕಲಾವಿದರತ್ತ ಗಮನ ಹರಿಸಬೇಕೇ ಎಂಬ ಗೊಂದಲ ಮೂಡುತ್ತದೆ.

ಮೈಸೂರು ರಂಗಾಯಣ ಪ್ರಸ್ತುತಪಡಿಸುವ ‘ಗಾಂಧಿ ವರ್ಸಸ್ ಗಾಂಧಿ’ ನಾಟಕದ ಮೊದಲ ದೃಶ್ಯದಲ್ಲಿ ಗಾಂಧಿ ಹಾಗೂ ಅವರ ಮಗ ಹರಿಲಾಲ್ ಸ್ವರ್ಗದಲ್ಲಿ ಭೇಟಿಯಾಗುತ್ತಾರೆ. ಆಗ ಗಾಂಧಿ ‘ನಿನ್ನ ಯೌವನವನ್ನು ಹೀಗೆ ಗಾಳಿಗೆ ತೂರಿಬಿಡಬೇಡವೆಂದು ಹೇಳಿದ್ದೆ’ ಎಂದು ಸ್ಮರಿಸಿಕೊಳ್ಳುತ್ತಾರೆ. ಇದನ್ನೇ ಈ ಬಾರಿಯ ತಿರುಗಾಟದ ಕಲಾವಿದರಿಗೆ ಅನ್ವಯಿಸಿ ಹೇಳುವುದಾದರೆ, ನಿಮ್ಮ ಯೌವನವನ್ನು ಅಂದರೆ ಎನರ್ಜಿಯನ್ನು ಸದುಪಯೋಗಪಡಿಸಿಕೊಳ್ಳಿ ಅಂದರೆ ಕೇವಲ ಮಾತಿನ ಓಘ, ಅಬ್ಬರದ ನಡುವೆ ಕಳೆದುಹೋಗದಿರಿ ಎಂದು. ಸದ್ದುಗದ್ದಲದ ನಡುವೆ ಕೇಳದ ಮಾತುಗಳೇ ಹೆಚ್ಚಾಗುವ ಬದಲು ಸಮಾಧಾನದಿಂದ ಮಾತುಗಳನ್ನು ಆಡಿರಿ. ಮೌನವೂ ಪ್ರತಿಭಟನೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X