Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಇದು ಸಾಧ್ಯವೆ?

ಇದು ಸಾಧ್ಯವೆ?

ವಾರ್ತಾಭಾರತಿವಾರ್ತಾಭಾರತಿ7 May 2025 8:33 AM IST
share
ಇದು ಸಾಧ್ಯವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರೌಡಿ ಶೀಟರ್ ಒಬ್ಬನ ಹತ್ಯೆಯ ಬಳಿಕ, ದಕ್ಷಿಣ ಕನ್ನಡ ಜಿಲ್ಲೆ ರಾಜಕಾರಣಿಗಳ ಪಾಲಿಗೆ ಮತ್ತೆ ‘ಪ್ರವಾಸಿ ತಾಣ’ವಾಗಿ ಬದಲಾಗಿದೆ. ಅಪರೂಪಕ್ಕೆ ಅಪರೂಪವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೂ ಭೇಟಿ ನೀಡಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಕೆಲವು ರಾಜಕಾರಣಿಗಳಂತೂ ಹೆಣಗಳನ್ನು ಕಂಡು ಸಂಭ್ರಮಿಸಿ ದಾಳಿಯಿಡುವ ರಣಹದ್ದುಗಳಂತಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಸೌಹಾರ್ದದ ಬದುಕಿನ ಮೇಲಾದ ಗಾಯಗಳಿಗೆ ಉಪ್ಪು ಸವರಲೆಂದೇ ಬಂದ ನಾಯಕರು ಹಲವರು. ಹತ್ಯೆ ಮಾಡಿದವರೂ, ಹತ್ಯೆಗೀಡಾದವನೂ ಕ್ರಿಮಿನಲ್ ಹಿನ್ನೆಲೆಯವರೇ ಹೊರತು, ಅವರು ಯಾವ ಧರ್ಮವನ್ನು ಪ್ರತಿನಿಧಿಸುವವರಲ್ಲ. ಯಾವುದೇ ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಈ ಕೊಲೆ ನಡೆದಿಲ್ಲ ಅಥವಾ ಕೊಲೆಯಾದವನೂ ಯಾವುದೇ ಧಾರ್ಮಿಕ ಮೌಲ್ಯಗಳಿಗಾಗಿ ಕೊಲೆಯಾಗಿಲ್ಲ. ಇಷ್ಟಾದರೂ ಕೊಲೆ ಮಾಡಿದವರನ್ನು, ಕೊಲೆಯಾದವನನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಯತ್ನವನ್ನು ಗರಿಷ್ಠ ಮಟ್ಟದಲ್ಲಿ ಕೆಲವರು ಮಾಡುತ್ತಿದ್ದಾರೆ. ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಒಂದು ರಾಜಕೀಯ ಪಕ್ಷ ಅದೆಷ್ಟು ಪ್ರಯತ್ನ ಪಟ್ಟರೂ ವಾಸ್ತವವೇನು ಎನ್ನುವುದು ಜನರ ಕಣ್ಣಿಗೆ ರಾಚುವಂತಿತ್ತು. ಕೊಲೆಯಾದವನು ಈ ಹಿಂದೆ ಹಿಂದೂಧರ್ಮಕ್ಕೆ ಸೇರಿದ ತನ್ನದೇ ಜಾತಿಯ ರೌಡಿಯನ್ನು ಕೊಂದು ಕುಖ್ಯಾತನಾಗಿದ್ದ. ದಲಿತರ ಮೇಲೆ ದೌರ್ಜನ್ಯವೆಸಗಿದ ಆರೋಪವೂ ಆತನ ಮೇಲಿತ್ತು. ದಾಂಧಲೆಗಳು, ಹಪ್ತಾ ವಸೂಲಿ ಇತ್ಯಾದಿಗಳು ಈತ ಎಸಗಿರುವ ಇನ್ನಿತರ ಸಮಾಜಸೇವಾ ಕಾರ್ಯಗಳು. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಅಧಿಕಾರಾವಧಿಯಲ್ಲಿ ಈತನ ಮೇಲೆ ರೌಡಿಶೀಟರ್ ದಾಖಲಾಗಿತ್ತು. ಇದೀಗ ಅದೇ ಬಿಜೆಪಿ ಸರಕಾರದೊಳಗಿದ್ದ ರಾಜಕೀಯ ನಾಯಕರು ಈತನ ಹತ್ಯೆಗೆ ಧರ್ಮದ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊಂದವರೂ ಕ್ರಿಮಿನಲ್ ಹಿನ್ನೆಲೆಯವರೇ ಹೊರತು, ಯಾವುದೇ ಧಾರ್ಮಿಕ ಮೌಲ್ಯಗಳ ಉಳಿವಿಗಾಗಿ ಈ ಕೃತ್ಯವನ್ನು ಎಸಗಿಲ್ಲ. ಜೊತೆಗೆ ಕೊಲೆ ಆರೋಪಿಗಳಲ್ಲಿ ಎಲ್ಲ ಧರ್ಮದವರು ಸೇರಿಕೊಂಡಿದ್ದಾರೆ. ಕೊಲೈಗೈದವರಾಗಲಿ, ಹತ್ಯೆಯಾದವರಾಗಲಿ ಯಾವುದೇ ಧರ್ಮಕ್ಕೆ ಮಾದರಿಗಳಲ್ಲ. ಇವರು ತಮ್ಮ ಮಕ್ಕಳಿಗೆ ಮಾದರಿಯಾಗಲಿ ಎಂದು ಯಾವ ಪೋಷಕರೂ ಬಯಸುವುದಿಲ್ಲ. ಇಷ್ಟಾದರೂ ಇವರನ್ನು ವೈಭವೀಕರಿಸುವ ಪ್ರಯತ್ನವನ್ನು ಕೆಲವು ರಾಜಕೀಯ ನಾಯಕರು ಮಾಡಿದ್ದಾರೆ. ಕೊಲೆಗೈದ ಪಾತಕಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಹಾನಿಗಿಂತಲೂ ಹೆಚ್ಚಿನದನ್ನು ಬೆಂಗಳೂರಿನಿಂದ ಬಂದ ರಾಜಕಾರಣಿಗಳು ಮಾಡಿ ಹೋಗಿದ್ದಾರೆ.

ಈ ರೌಡಿಯ ಹತ್ಯೆ ನಡೆಯುವ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಕೇರಳ ಮೂಲದ ಒಬ್ಬ ಅಮಾಯಕನನ್ನು 30ಕ್ಕೂ ಅಧಿಕ ಮಂದಿ ಸೇರಿ, ಯಾವ ಕಾರಣವೂ ಇಲ್ಲದೆ ಕೊಂದು ಹಾಕಿದರು. ಅಲ್ಲಿ ನಿಜಕ್ಕೂ ಕೊಲೆಗೆ ಕಾರಣ ಅಮಾಯಕನ ಭಾಷೆ ಮತ್ತು ಧರ್ಮವಾಗಿತ್ತು. ಈ ಸಂದರ್ಭದಲ್ಲಿ ಗೃಹ ಸಚಿವರು ತಕ್ಷಣವೇ ಮಂಗಳೂರಿಗೆ ಧಾವಿಸಿ, ಇಲ್ಲಿನ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಪೊಲೀಸ್ ಇಲಾಖೆಗೆ ನಿರ್ದೇಶನಗಳನ್ನು ನೀಡಬೇಕಾಗಿತ್ತು. ವಿಪರ್ಯಾಸವೆಂದರೆ, ಈ ಗುಂಪು ಹತ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಗೃಹ ಸಚಿವರೇ ಗೊಂದಲದ ಹೇಳಿಕೆ ನೀಡಿ, ತನಿಖೆಯ ದಾರಿ ತಪ್ಪಿಸಲು ನೆರವಾದರು. ಗುಂಪು ಹತ್ಯೆ ನಡೆದು ಮೃತ ದೇಹ ಹಲವು ಗಂಟೆಗಳ ಕಾಲ ಮೈದಾನದಲ್ಲೇ ಬಿದ್ದುಕೊಂಡಿದ್ದರೂ ಅದನ್ನು ಆಸ್ಪತ್ರೆಗೆ ತಲುಪಿಸುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಪ್ರಕರಣ ಬೆಳಕಿಗೆ ಬಂದ ಬಳಿಕವೂ ಸುಮಾರು ಎರಡು ದಿನಗಳ ಕಾಲ ‘ಗುಂಪು ಹತ್ಯೆ’ಯನ್ನು ಮುಚ್ಚಿಡುವ ಪ್ರಯತ್ನವನ್ನು ಪೊಲೀಸ್ ಇಲಾಖೆಯೇ ನಡೆಸಿತು. ಗುಂಪು ಹತ್ಯೆ ಬೆಳಕಿಗೆ ಬಂದ ಬೆನ್ನಿಗೇ ಕೆಲವು ಸಂಘಟನೆಗಳು ದುಷ್ಕರ್ಮಿಗಳ ಕೃತ್ಯವನ್ನು ಸಮರ್ಥಿಸುವ ಉದ್ದೇಶದಿಂದ ‘ಮೃತನು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರಿಂದ ಗುಂಪು ಆತನ ಮೇಲೆ ದಾಳಿ ಮಾಡಿತು’ ಎಂಬ ವದಂತಿಯನ್ನು ಹರಡಿದವು. ಆತ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾನೆ ಎನ್ನುವುದಕ್ಕೆ ಕೃತ್ಯ ಎಸಗಿದ ಆರೋಪಿಗಳ ಹೇಳಿಕೆ ಬಿಟ್ಟರೆ ಬೇರೆ ಸಾಕ್ಷಿಗಳೇ ಇರಲಿಲ್ಲ. ಗೃಹ ಸಚಿವರು ಈ ವದಂತಿಯನ್ನೇ ನಂಬಿ, ಪತ್ರಿಕೆಗೆ ಹೇಳಿಕೆಯನ್ನು ನೀಡಿದರು. ಗೃಹ ಸಚಿವರ ಹೇಳಿಕೆಯನ್ನೇ ದುಷ್ಕರ್ಮಿಗಳು ತಮಗೆ ಪೂರಕವಾಗಿ ಬಳಸಿಕೊಂಡರು.

ಇದೇ ಸಂದರ್ಭದಲ್ಲಿ ಕೇರಳದಿಂದ ಕೂಲಿ ಕೆಲಸಕ್ಕೆಂದು ಬಂದ, ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ ಅಮಾಯಕನನ್ನು ಗುಂಪು ಬರ್ಬರವಾಗಿ ಕೊಂದು ಹಾಕಿದಾಗ ಜಿಲ್ಲೆಯತ್ತ ತಿರುಗಿಯೂ ನೋಡದ ವಿರೋಧ ಪಕ್ಷದ ನಾಯಕರು, ರೌಡಿಗಳ ನಡುವಿನ ‘ಗ್ಯಾಂಗ್‌ವಾರ್’ನಿಂದ ಮೃತಪಟ್ಟವನ ನೆತ್ತರಲ್ಲಿ ಧರ್ಮವನ್ನು ಹುಡುಕುತ್ತಾ ಹಿಂದೂ ಧರ್ಮದ ಮೌಲ್ಯಗಳಿಗೆ ಕಳಂಕವನ್ನು ತಂದರು. ಸಂಘಪರಿವಾರವು ದಕ್ಷಿಣ ಕನ್ನಡ ಜಿಲ್ಲೆಯ ಬಂದ್‌ಗೆ ಕರೆಕೊಟ್ಟಿತು. ಬಂದ್‌ಗೆ ಕರೆ ನೀಡಿದ ಸಂಘಟನೆಗಳ ಮೇಲೆ ಈವರೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಇದರ ಬೆನ್ನಿಗೇ ಹಲವು ರಾಜಕೀಯ ನಾಯಕರು ಜಿಲ್ಲೆಯ ಹಲವೆಡೆ ದ್ವೇಷ ಭಾಷಣಗಳನ್ನು ಮಾಡಿದರು. ಈ ಭಾಷಣಗಳು ಕರಾವಳಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳ ಬೆಳೆಗೆ ಗೊಬ್ಬರವಾಗಿತ್ತು.

ತಡವಾಗಿಯಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಗೃಹ ಸಚಿವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆಗಳನ್ನು ರಚಿಸುವ ಬಗ್ಗೆ ಭರವಸೆ ನೀಡಿದರು. ಆದರೆ ಈ ಭರವಸೆಯನ್ನು ಸರಕಾರ ಈ ಹಿಂದೆ ಹಲವು ಬಾರಿ ನೀಡಿತ್ತು. ಈ ಭರವಸೆಗಳನ್ನು ಅಣಕಿಸುವಂತೆ ರಾಜಕಾರಣಿಗಳು ತಮ್ಮ ದ್ವೇಷ ಭಾಷಣಗಳನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಕೋಮುದ್ವೇಷಕ್ಕೆ ತುಪ್ಪ ಸುರಿಯುತ್ತಲೇ ಇವೆ. ಪೊಲೀಸರು ಕಣ್ಣಿದ್ದೂ ಕುರುಡರಾಗಿದ್ದಾರೆ, ಕಿವಿಯಿದ್ದೂ ಕಿವುಡರಾಗಿದ್ದಾರೆ.

ಇದೀಗ ಗೃಹ ಸಚಿವರ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ಘೋಷಣೆಯನ್ನು ಅಣಕಿಸುವಂತೆ ಬೆಳ್ತಂಗಡಿ ಕ್ಷೇತ್ರದ ಶಾಸಕರೊಬ್ಬರು ತಮ್ಮ ಕ್ಷೇತ್ರದೊಳಗಿರುವ ತೆಕ್ಕಾರು ಎಂಬಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆ ಊರಿನ ಎರಡೂ ಧರ್ಮಗಳನ್ನು ಎತ್ತಿಕಟ್ಟುವ ರೀತಿಯಲ್ಲಿ ಭಾಷಣವನ್ನು ಮಾಡಿದ್ದಾರೆ. ಆ ಊರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿರುವುದು ಈ ಶಾಸಕರಿಗೆ ಸಮಸ್ಯೆಯಾಗಿ ಕಂಡಿದೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸೌಲಭ್ಯಗಳನ್ನು ಒದಗಿಸಿದ್ದ ಸ್ಥಳೀಯ ಮುಸ್ಲಿಮರು ಈ ಶಾಸಕರಿಗೆ ಅಪರಾಧಿಗಳಂತೆ ಕಂಡಿದ್ದಾರೆ. ಒಂದಾಗಿ ಬಾಳಬೇಡಿ ಎಂದು ವೇದಿಕೆಯಲ್ಲಿ ನಿಂತು ಹಿಂದೂಗಳಿಗೆ ಈತ ಕರೆ ನೀಡಿದ್ದಾರೆೆ. ಹೀಗೆ ಭಾಷಣ ಮಾಡಿದ ಬೆನ್ನಿಗೇ ಈತನ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕಾಗಿತ್ತು. ಆದರೆ ಅಂತಹದೇನೂ ನಡೆಯಲಿಲ್ಲ.

ಇಂದು ಕರಾವಳಿಯಲ್ಲಿ ಜನಸಾಮಾನ್ಯರು ಕೋಮುಹಿಂಸೆಯನ್ನು ಬಯಸುತ್ತಿಲ್ಲ. ಯಾರೂ ಇನ್ನೊಂದು ಧರ್ಮದ ವಿರುದ್ಧ ಕತ್ತಿ ಮಸೆಯುತ್ತಾ ತಿರುಗಾಡುತ್ತಲೂ ಇಲ್ಲ. ಉಭಯ ಧರ್ಮಗಳ ಹೆಸರುಗಳನ್ನು ಹೊಂದಿರುವ ಒಂದಿಷ್ಟು ರೌಡಿಗಳು ತಮ್ಮ ಗ್ಯಾಂಗ್ ವಾರ್‌ಗಳಿಗೆ ಧರ್ಮದ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ‘ಭೂಗತ ಮಾಫಿಯಾ’ದೊಂದಿಗೆ ಗುರುತಿಸಿಕೊಂಡವರು ಇಂದು ‘ಧರ್ಮ’ದ ಮುಖವಾಡ ಹಾಕಿಕೊಂಡು ತಮ್ಮ ಕ್ರಿಮಿನಲ್ ಚಟುವಟಿಕೆಗಳ ಮೂಲಕ ಸಮಾಜದೊಳಗೆ ಅಶಾಂತಿಯನ್ನು ಬಿತ್ತುತ್ತಿದ್ದಾರೆ ಮತ್ತು ಅವರ ಬೆನ್ನಿಗೆ ರಾಜಕೀಯ ನಾಯಕರು ನಿಂತಿದ್ದಾರೆ. ಈ ರೌಡಿಗಳನ್ನು, ಇವರಿಗೆ ಆಶ್ರಯ ಕೊಡುತ್ತಿರುವ ರಾಜಕೀಯ ನಾಯಕರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಂಡರೆ ಸಾಕು. ರೌಡಿಗಳ ತಲವಾರಿಗಿಂತಲೂ ಹರಿತ ಮತ್ತು ವಿಷಪೂರಿತವಾಗಿದೆ ರಾಜಕಾರಣಿಗಳ ನಾಲಗೆ. ಪೊಲೀಸರು ಯಾವತ್ತು ಈ ನಾಲಗೆಗೆ ಕಡಿವಾಣ ಹಾಕುತ್ತಾರೆಯೋ ಆಗ ಈ ಜಿಲ್ಲೆಯಲ್ಲಿ ಕತ್ತಿ, ತಲವಾರುಗಳು ಬಲ ಕಳೆದುಕೊಳ್ಳುತ್ತವೆ. ಹಾಗೆಯೇ ಸಾಮಾಜಿಕ ಜಾಲತಾಣದ ಮರೆಯಲ್ಲಿ ಕುಳಿತು ವದಂತಿಗಳನ್ನು ಹರಡುವ, ದ್ವೇಷದ ವಿಷ ಕಾರುವವರನ್ನು ಗುರುತಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗೃಹ ಸಚಿವರ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ಗೆ ಅದು ಸಾಧ್ಯವಾದ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X