Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಪಹಲ್ಗಾಮ್ ಭದ್ರತಾ ವೈಫಲ್ಯಗಳ ಹಣೆಗೆ...

ಪಹಲ್ಗಾಮ್ ಭದ್ರತಾ ವೈಫಲ್ಯಗಳ ಹಣೆಗೆ ಆಪರೇಷನ್ ಸಿಂಧೂರ

ವಾರ್ತಾಭಾರತಿವಾರ್ತಾಭಾರತಿ8 May 2025 8:00 AM IST
share
ಪಹಲ್ಗಾಮ್ ಭದ್ರತಾ ವೈಫಲ್ಯಗಳ ಹಣೆಗೆ ಆಪರೇಷನ್ ಸಿಂಧೂರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸುವಂತಹ ಅನಿವಾರ್ಯವನ್ನು ಭಾರತಕ್ಕೆ ಸೃಷ್ಟಿಸಿದ್ದು ಸ್ವತಃ ಪಾಕಿಸ್ತಾನವೇ ಆಗಿದೆ. ಸದ್ಯದ ಜಾಗತಿಕ ಸನ್ನಿವೇಶವನ್ನು ಗಮನಿಸಿದರೆ, ಭಾರತ, ಪಾಕಿಸ್ತಾನಗಳೆರಡೂ ದೇಶಗಳು ಯುದ್ಧ, ಹಿಂಸೆಗಳಿಗೆ ಬೆನ್ನು ಮಾಡಿ, ಅಮೆರಿಕದಂತಹ ಶ್ರೀಮಂತ ದೇಶಗಳ ಆರ್ಥಿಕ ಸವಾಲುಗಳನ್ನು ಎದುರಿಸುವುದಕ್ಕೆ ಕವಾಯತು ನಡೆಸಬೇಕಾಗಿರುವ ಸಮಯ. ಯುದ್ಧವನ್ನು ಆರಂಭಿಸಿದ ದೇಶದ ಬಳಿ ಅದನ್ನು ಕೊನೆಗೊಳಿಸುವ ಆಯ್ಕೆ ಇರುವುದಿಲ್ಲ. ಇಂದು ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಘೋಷಣೆಯಾದರೆ ಅದನ್ನು ಬಲಾಢ್ಯ ದೇಶಗಳು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಉಕ್ರೇನ್-ರಶ್ಯ ನಡುವಿನ ಯುದ್ಧ ನಮಗೆ ಈ ನಿಟ್ಟಿನಲ್ಲಿ ಪಾಠವಾಗಬೇಕಾಗಿದೆ. ಪುಟ್ಟ ರಾಷ್ಟ್ರವಾಗಿರುವ ಉಕ್ರೇನ್ ಜೊತೆಗಿನ ಯುದ್ಧದಿಂದ ರಶ್ಯವೂ ಸಾಕಷ್ಟು ಕಳೆದುಕೊಂಡಿದೆ. ಇದೇ ಸಂದರ್ಭದಲ್ಲಿ ಉಕ್ರೇನ್‌ನ ಅಸಹಾಯಕತೆಯನ್ನು ಅಮೆರಿಕ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಆರ್ಥಿಕವಾಗಿ ಪತನವಾಗಿರುವ ಪಾಕಿಸ್ತಾನವು, ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪದೇ ಪದೇ ಕುಮ್ಮಕ್ಕು ನೀಡುವ ಮೂಲಕ ತನಗೆ ತಾನೇ ಆನ್ಯಾಯವನ್ನು ಮಾಡಿಕೊಳ್ಳುತ್ತಿದೆ. ಕಾಶ್ಮೀರದ ಹಿಂಸಾಚಾರದಲ್ಲಿ ತನ್ನ ಪಾತ್ರ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆಯಾದರೂ, ಆ ಹೇಳಿಕೆ ವಿಶ್ವಾಸಕ್ಕೆ ಯೋಗ್ಯವಲ್ಲ ಎನ್ನುವುದು ವಿಶ್ವಕ್ಕೆ ಎಂದೋ ಅರ್ಥವಾಗಿದೆ. ಈ ಹಿಂದೆ ಪಠಾಣ್ ಕೋಟ್ ಮತ್ತು ಪುಲ್ವಾಮಾದಲ್ಲಿ ಉಗ್ರರ ಮೂಲಕ ಪಾಕಿಸ್ತಾನವು ಭಾರತದಲ್ಲಿ ನಡೆಸಿದ ಹಿಂಸಾಚಾರ ಸರ್ಜಿಕಲ್ ದಾಳಿ ನಡೆಸುವ ಅನಿವಾರ್ಯ ಸ್ಥಿತಿಯನ್ನು ಭಾರತಕ್ಕೆ ನಿರ್ಮಾಣ ಮಾಡಿತು. ಇದೀಗ ಪಹಲ್ಗಾಮ್‌ನಲ್ಲಿ ಭಾರತದ ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಭಯೋತ್ಪಾದನಾ ದಾಳಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುವ ಅನಿವಾರ್ಯತೆಗೆ ಭಾರತವನ್ನು ದೂಡಿತು.

ಕೇಂದ್ರ ಸರಕಾರವು ಈ ಹಿಂದೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ರಾಜಕೀಯ ಬಣ್ಣವನ್ನು ಪಡೆದುಕೊಂಡಿತ್ತು. ಸೇನೆಯನ್ನು ತನ್ನ ರಾಜಕೀಯಕ್ಕಾಗಿ ಕೇಂದ್ರ ಸರಕಾರ ದುರುಪಯೋಗಗೊಳಿಸುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೆ ಈ ಬಾರಿಯ ‘ಆಪರೇಷನ್ ಸಿಂಧೂರ’ದಲ್ಲಿ ಕೆಲವು ಮುತ್ಸದ್ದಿ ನಡೆಯನ್ನು ಕೇಂದ್ರ ಸರಕಾರ ಪ್ರದರ್ಶಿಸಿದೆ. ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರು ಸಂಪೂರ್ಣ ಸೇನೆಗೆ ಬಿಟ್ಟುಕೊಟ್ಟರು. ರಾತ್ರೋ ರಾತ್ರಿ ನಡೆದ ಕಾರ್ಯಾಚರಣೆಯ ಬಗ್ಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿಯ ನೇತೃತ್ವದಲ್ಲಿ ಸೇನೆಯ ಮುಖ್ಯಸ್ಥರು ಪತ್ರಕರ್ತರಿಗೆ ಮಾಹಿತಿ ನೀಡುವ ಸಂದರ್ಭದಲ್ಲೂ ಬಹಳಷ್ಟು ಎಚ್ಚರಿಕೆಯನ್ನು ವಹಿಸಿದ್ದರು. ‘ಭಾರತ ಯುದ್ಧದ ಬಗ್ಗೆ ಯಾವ ರೀತಿಯಲ್ಲೂ ಉತ್ಸಾಹವನ್ನು ಹೊಂದಿಲ್ಲ. ಅದರ ಗುರಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ’ ಎನ್ನುವುದನ್ನು ಅವರು ಪತ್ರಿಕಾಗೋಷ್ಠಿಯ ಮೂಲಕ ಜಗತ್ತಿಗೆ ತಲುಪಿಸುವ ಪ್ರಯತ್ನವನ್ನು ಮಾಡಿದರು. ಪಾಕಿಸ್ತಾನವು ಉಗ್ರವಾದಿಗಳ ಮೂಲಕ ಭಾರತವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಯತ್ನಿಸಿತು. ‘ಉಗ್ರರು ಧರ್ಮವನ್ನು ವಿಚಾರಿಸಿ ಹತ್ಯೆ ನಡೆಸಿದರು’ ಎನ್ನುವುದರ ಲಾಭವನ್ನು ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲಿಯೂ ಕೆಲವು ದೇಶದ್ರೋಹಿ ರಾಜಕೀಯ ಮನಸ್ಥಿತಿಗಳು ತಮ್ಮದಾಗಿಸಲು ಪ್ರಯತ್ನಿಸಿದವು. ‘ಭಯೋತ್ಪಾದಕರ ಉದ್ದೇಶವೇ ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸುವುದು’ ಎನ್ನುವುದನ್ನು ಸೇನೆ ಸ್ಪಷ್ಟಪಡಿಸಿತು ಮಾತ್ರವಲ್ಲ, ಭಾರತವು ಭಯೋತ್ಪಾದಕರ ಸಂಚನ್ನು ಧರ್ಮಗಳನ್ನು ಮೀರಿ ಎದುರಿಸುತ್ತದೆ ಎನ್ನುವ ಸಂದೇಶವನ್ನು ಜಗತ್ತಿಗೆ ನೀಡಿತು. ಪ್ರವಾಸಿಗರನ್ನು ರಕ್ಷಿಸಲು ಕಾಶ್ಮೀರಿಗಳು ತಮ್ಮ ಜೀವವನ್ನು ಒತ್ತೆಯಿಟ್ಟು ಕಾರ್ಯಾಚರಣೆ ನಡೆಸಿದರು ಮಾತ್ರವಲ್ಲ, ಇದೀಗ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವಿವರಗಳನ್ನು ಭಾರತೀಯ ಸೇನಾಪಡೆಯ ಕರ್ನಲ್ ಸೋಫಿಯಾ ಖುರೇಷಿ ಹಾಗೂ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನೀಡಿದರು. ಸೋಫಿಯಾ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮಹಿಳೆಯಾದರೆ, ವ್ಯೋಮಿಕಾ ಸಿಂಗ್ ಅವರು ಸಿಖ್ ಸಮುದಾಯಕ್ಕೆ ಸೇರಿದವರು. ವಿವಿಧತೆಯಲ್ಲಿ ಭಾರತದ ಏಕತೆಯನ್ನು ಈ ಮೂಲಕ ಸೇನೆ ವಿಶ್ವಕ್ಕೆ ಪ್ರದರ್ಶಿಸಿತು. ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿತು.

ಈ ಕಾರ್ಯಾಚರಣೆಯಲ್ಲಿ ಒಂಭತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. 70ಕ್ಕೂ ಅಧಿಕ ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತವು ಪಾಕಿಸ್ತಾನದ ಯಾವುದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿಲ್ಲ. ಕೇವಲ ಉಗ್ರರನ್ನು ಗುರಿಯಾಗಿಸಿ ಕಾರ್ಯಾಚರಣೆಯನ್ನು ನಡೆಸಿದೆ. ಈ ಮೂಲಕ ನಮಗೆ ಯುದ್ಧ ಬೇಕಾಗಿಲ್ಲ. ಆದರೆ, ಉಗ್ರರನ್ನು ಬಳಸಿಕೊಂಡು ಪಾಕಿಸ್ತಾನವು ಪರೋಕ್ಷ ಯುದ್ಧವನ್ನು ಭಾರತದ ಮೇಲೆ ಹೇರಿದರೆ ಅದನ್ನು ನಾವು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡಿದೆ. ಪಹಲ್ಗಾಮ್‌ನಂತಹ ದುರಂತ ಸಂಭವಿಸಿದ ಬಳಿಕ, ಅದರಿಂದ ಭಾರತಕ್ಕಾಗಿರುವ ಹಾನಿಯನ್ನು, ಆಘಾತವನ್ನು ಸರಿಪಡಿಸಿಕೊಳ್ಳುವುದಕ್ಕೆ, ಕಾಶ್ಮೀರಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವುದಕ್ಕೆ, ಭವಿಷ್ಯದಲ್ಲಿ ಇಂತಹ ಪೈಶಾಚಿಕ ಕೃತ್ಯಕ್ಕೆ ಕೈ ಹಾಕದಂತೆ ಪಾಕಿಸ್ತಾನವನ್ನು ಎಚ್ಚರಿಸುವುದಕ್ಕೆ ಆಪರೇಷನ್ ಸಿಂಧೂರ ಅತ್ಯಗತ್ಯವಿತ್ತು. ಇದೇ ಸಂದರ್ಭದಲ್ಲಿ ತಾನೂ ಭಾರತದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಭಾರತ ಇದನ್ನು ಅಲ್ಲಗಳೆದಿದೆ. ಇದೇ ಸಂದರ್ಭದಲ್ಲಿ ಗಡಿಯಲ್ಲಿ ಪಾಕಿಸ್ತಾನದ ಸೇನೆಯ ಗುಂಡಿನ ದಾಳಿಗೆ ಹತ್ತಕ್ಕೂ ಅಧಿಕ ನಾಗರಿಕರು ಸತ್ತಿದ್ದಾರೆ. ಪಂಜಾಬ್‌ನಲ್ಲಿ ಅಪರಿಚಿತ ವಿಮಾನವೊಂದು ಪತನಗೊಂಡಿದ್ದು, ಇದು ಭಾರತದ ಯುದ್ಧ ವಿಮಾನವೆಂದೂ ಕೆಲವು ವಿದೇಶಿ ಮಾಧ್ಯಮಗಳು ಅನುಮಾನಿಸಿವೆ. ಆದರೆ, ಭಾರತೀಯ ಸೇನೆ ಈ ಎಲ್ಲ ವದಂತಿಗಳನ್ನು ಸ್ಬಷ್ಟವಾಗಿ ಅಲ್ಲಗಳೆದಿದೆೆ.

ಇದೇ ಸಂದರ್ಭದಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯೂ, ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಇಲ್ಲವಾಗಿಸಬಾರದು. ಪಹಲ್ಗಾಮ್‌ನಲ್ಲಿ ಕನಿಷ್ಠ ನಾಲ್ಕು ಮಂದಿ ಯೋಧರನ್ನು ಭದ್ರತೆಗಾಗಿ ನೇಮಿಸಿದ್ದರೂ ಭಯೋತ್ಪಾದಕರು ಹತ್ಯಾಕಾಂಡ ನಡೆಸುವಲ್ಲಿ ವಿಫಲರಾಗುತ್ತಿದ್ದರು. ಅಮಾಯಕರ ಸಾವು ಸಂಭವಿಸುತ್ತಿರಲಿಲ್ಲ ಮಾತ್ರವಲ್ಲ, ಸೇನೆ ‘ಆಪರೇಷನ್ ಸಿಂಧೂರ’ ನಡೆಸುವ ಅಗತ್ಯವೂ ಇರಲಿಲ್ಲ. ಇದೊಂದು ರೀತಿಯಲ್ಲಿ ಸೂಜಿಯಲ್ಲಿ ತೆಗೆಯಬಹುದಾದುದನ್ನು ಕೊಡಲಿಯಲ್ಲಿ ಕತ್ತರಿಸಿ ತೆಗೆದಂತಾಗಿದೆ. ಪುಲ್ಲಾಮಾದಲ್ಲಿಯೂ ಸರಕಾರದ ಭದ್ರತಾ ವೈಫಲ್ಯದ ಪಾತ್ರ ದೊಡ್ಡದಿತ್ತು. ವಾಜಪೇಯಿ ಕಾಲದಲ್ಲಿ ಉಗ್ರರನ್ನು ಭಾರತದ ಕಾರ್ಗಿಲ್ ಪ್ರದೇಶದೊಳಗೆ ಪ್ರವೇಶಿಸಲು ಬಿಟ್ಟು, ಬಳಿಕ ಅವರನ್ನು ಅಲ್ಲಿಂದ ಓಡಿಸುವುದಕ್ಕಾಗಿ ಈ ದೇಶದ ನೂರಾರು ಯೋಧರು ಪ್ರಾಣ ತ್ಯಾಗ ಮಾಡಬೇಕಾಗಿ ಬಂತು. ಈ ಹಿಂದೆ ಪಠಾಣ್‌ಕೋಟ್‌ನಲ್ಲಿ, ಬಳಿಕ ಪುಲ್ವಾಮಾದಲ್ಲಿ, ಇದೀಗ ಪಹಲ್ಗಾಮ್‌ನಲ್ಲಿ ನಡೆದ ಭದ್ರತಾ ವೈಫಲ್ಯಗಳ ಬಗ್ಗೆ ಕೇಂದ್ರ ಸರಕಾರ ದೇಶಕ್ಕೆ ಇನ್ನೂ ಸ್ಪಷ್ಟೀಕರಣವನ್ನು ನೀಡಿಲ್ಲ. ಪಹಲ್ಗಾಮ್ ಭದ್ರತಾ ವೈಫಲ್ಯದ ಹಣೆಗೆ ‘ಆಪರೇಷನ್ ಸಿಂಧೂರ’ವನ್ನು ಅಂಟಿಸಿ ಕೇಂದ್ರ ಸರಕಾರ ನುಣುಚಿಕೊಳ್ಳಬಾರದು. ಪಹಲ್ಗಾಮ್ ಭದ್ರತಾ ವೈಫಲ್ಯದ ತನಿಖೆ ನಡೆದು, ಸಂಬಂಧಪಟ್ಟವರ ತಲೆದಂಡವಾದಾಗ ಮಾತ್ರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಸಮಾಪ್ತಿಯಾಗುತ್ತದೆ. ಸೇನೆ ಪ್ರದರ್ಶಿಸಿದ ಶೌರ್ಯ, ಸಾಹಸ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X