Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ರೆಡ್ಡಿ ಅಕ್ರಮ ಗಣಿಗಾರಿಕೆ: ಶಿಕ್ಷೆಯೆಂಬ...

ರೆಡ್ಡಿ ಅಕ್ರಮ ಗಣಿಗಾರಿಕೆ: ಶಿಕ್ಷೆಯೆಂಬ ಅಣಕ

ವಾರ್ತಾಭಾರತಿವಾರ್ತಾಭಾರತಿ9 May 2025 6:59 AM IST
share
ರೆಡ್ಡಿ ಅಕ್ರಮ ಗಣಿಗಾರಿಕೆ: ಶಿಕ್ಷೆಯೆಂಬ ಅಣಕ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಓಬಳಾಪುರಂ ಮೈನಿಂಗ್ ಕಂಪೆನಿ(ಒಎಂಸಿ) ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿದೆ. ಸುಮಾರು 13 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ, ಈ ತೀರ್ಪು ಹೊರಬಿದ್ದಿದೆ. ಜನಾರ್ದನ ರೆಡ್ಡಿಯ ಹಗರಣದ ವ್ಯಾಪ್ತಿ ಅತ್ಯಂತ ವಿಶಾಲವಾದುದು. ಅವರು ಕನ್ನಡ ನಾಡಿಗೆ ಮಾಡಿರುವ ಹಾನಿಯ ಅಗಾಧತೆಗೆ ಹೋಲಿಸಿದರೆ ಅವರಿಗೆ ಸಿಕ್ಕಿರುವ ಶಿಕ್ಷೆ ತೀರಾ ಅಲ್ಪವಾದುದು. ಗಣಿಗಾರಿಕೆಯಲ್ಲಿ ಅವರು ನಡೆಸಿದ ಸಾಲು ಸಾಲು ಅಕ್ರಮಗಳಿಂದ ಗಳಿಸಿದ ದುಡ್ಡು ಈ ನಾಡಿನ ರಾಜಕೀಯ, ಸಾಮಾಜಿಕ ಕ್ಷೇತ್ರಗಳನ್ನು ಸಂಪೂರ್ಣವಾಗಿ ಹಾಳು ಮಾಡಿತು. ಅವರು ಬಳ್ಳಾರಿಯಲ್ಲಿ ತೋಡಿಟ್ಟ ಬೃಹತ್ ಗಣಿ ಹೊಂಡಗಳಿಂದ ಅಲ್ಲಿನ ಪರಿಸರಗಳು ಸರ್ವನಾಶವಾದರೆ, ಅವರು ಮೊಗೆದು ತೆಗೆದ ಅದಿರಿನ ಹಣ ಈ ನಾಡಿನ ರಾಜಕೀಯ ಕ್ಷೇತ್ರದ ಅಳಿದುಳಿದ ನೈತಿಕತೆಯನ್ನು ಸರ್ವನಾಶ ಮಾಡಿತು. ಇಂದು ಬಿಜೆಪಿಯು ರೆಡ್ಡಿ ಸಹೋದರರಿಂದ ಅಂತರವನ್ನು ಕಾಯ್ದುಕೊಂಡಿರಬಹುದು. ರೆಡ್ಡಿ ಸಹೋದರರು ಬಳ್ಳಾರಿಯನ್ನು ಹಿಂಡಿ ಹಿಪ್ಪೆ ಮಾಡಿ ಎಸೆದರೆ, ಈ ರೆಡ್ಡಿ ಸಹೋದರರನ್ನು ಬಿಜೆಪಿ ಬಳಸಿ ಎಸೆದಿದೆ. ಆಂಧ್ರ-ಕರ್ನಾಟಕ ಗಡಿಭಾಗದಲ್ಲಿ ರೆಡ್ಡಿಗಳು ನಡೆಸಿದ ಗಣಿಗಾರಿಕೆಯಲ್ಲಿ ಅರಣ್ಯ ಇಲಾಖೆ, ಗಣಿ ಇಲಾಖೆಗಳು ಶಾಮೀಲಾಗಿವೆ. ಇಲಾಖೆಗಳು ಶಾಮೀಲಾಗಿವೆ ಎನ್ನುವುದರ ಅರ್ಥವೇ, ಸರಕಾರ ಕೂಡ ಹಗರಣದಲ್ಲಿ ಕೈಜೋಡಿಸಿದೆೆ ಎನ್ನುವುದಾಗಿದೆ. ಆದುದರಿಂದ, ರೆಡ್ಡಿಗೆ ಏಳು ವರ್ಷ ಶಿಕ್ಷೆಯಾಗಿದೆ ಎಂದಾಕ್ಷಣ ಹಗರಣಕ್ಕೆ ಸಂಬಂಧಿಸಿ ನಾಡಿಗೆ ನ್ಯಾಯ ಸಿಕ್ಕಿತು ಎಂದು ಸಂಭ್ರಮಿಸುವಂತಿಲ್ಲ. ರೆಡ್ಡಿಯಿಂದ ಗರಿಷ್ಠ ಪ್ರಯೋಜನ ಪಡೆದ ಅಂದಿನ ಬಿಜೆಪಿ ಸರಕಾರ, ಅದರೊಳಗಿದ್ದ ರಾಜಕೀಯ ನಾಯಕರು ಈಗಲೂ ನಾಯಕರಾಗಿಯೇ ಸಮಾಜದಲ್ಲಿ ಓಡಾಡುತ್ತಿದ್ದಾರೆ. ರೆಡ್ಡಿಗಳ ಅಕ್ರಮಗಳಿಂದ ಗಾಯಗೊಂಡು ಬಿದ್ದಿರುವ ಬಳ್ಳಾರಿ ಸದ್ಯಕ್ಕಂತೂ ಚೇತರಿಸುವ ಸಾಧ್ಯತೆಗಳಿಲ್ಲ.

ರೆಡ್ಡಿ ಸಹೋದರರು ಬಳ್ಳಾರಿಯ ಮೇಲೆ ಮಾಡಿದ ಅತ್ಯಾಚಾರಗಳನ್ನು ಅಲ್ಲಿರುವ ಗಣಿ ಅವಶೇಷಗಳು ಈಗಲೂ ಬಿಕ್ಕುತ್ತಾ ನಾಡಿನ ಮುಂದಿಡುತ್ತಿವೆೆ. ಅರಣ್ಯ ಪ್ರದೇಶಗಳು ಸರ್ವ ನಾಶವಾದುದು ಮಾತ್ರವಲ್ಲ, ಗಣಿಗಾರಿಕೆಯಿಂದ ಪರಿಸರ ಸಂಪೂರ್ಣ ಚಿಂದಿಯಾದವು. ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯ ಮೂಲಕ ಕೋಟ್ಯಂತರ ರೂಪಾಯಿಯನ್ನು ಗಳಿಸುತ್ತಿರುವಾಗಲೇ, ಬಳ್ಳಾರಿಯ ಜನತೆ ಮೂಲಭೂತ ಸೌಕರ್ಯಗಳ ಕೊರತೆಗಳಿಂದ, ಅಪೌಷ್ಟಿಕತೆಯಿಂದ ನರಳುತ್ತಿದ್ದರು. ರೆಡ್ಡಿ ಸಹೋದರರು ಒಂದೆಡೆ ಅಕ್ರಮವಾಗಿ ಗಣಿಗಾರಿಕೆಗಳನ್ನು ನಡೆಸುತ್ತಾ ನಾಡಿಗೆ ವಂಚಿಸಿದರು. ಮಗದೊಂದೆಡೆ, ಆ ಹಣದಿಂದ ಈ ನಾಡಿನ ರಾಜಕೀಯ ಕ್ಷೇತ್ರವನ್ನು ಕೊಂಡುಕೊಂಡರು. ತಮ್ಮ ಅಕ್ರಮಗಳಿಗೆ ಪೂರಕವಾದ ಒಂದು ರಾಜಕೀಯ ವಾತಾವರಣವನ್ನು ಅವರು ಸೃಷ್ಟಿಸಿದರು. ತಮ್ಮ ಹಣ ಬಲದಿಂದ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ಈ ರೆಡ್ಡಿ ಸಹೋದರರು, ಇಂದು ಕೇಂದ್ರವನ್ನು ಅದಾನಿ, ಅಂಬಾನಿ ನಿಯಂತ್ರಿಸುತ್ತಿರುವಂತೆಯೇ ದಶಕಗಳ ಹಿಂದೆ ರಾಜ್ಯ ಸರಕಾರವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಅಡ್ವಾಣಿ ಯುಗದಲ್ಲಿ ಸುಶ್ಮಾ ಸ್ವರಾಜ್ ಅವರ ಮುಂದೆ ಮಂಡಿಯೂರಿದ ರೆಡ್ಡಿ ಸಹೋದರರ ಚಿತ್ರವೊಂದು ಜನಪ್ರಿಯವಾಗಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ರೆಡ್ಡಿ ಸಹೋದರರ ತಲೆಯ ಮೇಲಿದ್ದ ಸುಶ್ಮಾ ಸ್ವರಾಜ್ ಅವರ ಅಭಯ ಹಸ್ತವೇ ಎಲ್ಲವನ್ನೂ ವಿವರಿಸುತ್ತಿತ್ತು. ಪ್ರತೀ ವರ್ಷ ವರ ಮಹಾಲಕ್ಷ್ಮಿಯ ನೆಪದಲ್ಲಿ ಸುಶ್ಮಾ ಸ್ವರಾಜ್ ಅವರು ಬಳ್ಳಾರಿಗೆ ಆಗಮಿಸುತ್ತಿದ್ದುದೇ ರೆಡ್ಡಿ ಸಹೋದರರಿಂದ ವಸೂಲಿ ಮಾಡಿದ ಹಫ್ತಾ ಹಣವನ್ನು ದಿಲ್ಲಿಗೆ ಕೊಂಡೊಯ್ಯಲು ಎಂಬ ವದಂತಿಗಳು ಹರಡಿದ್ದವು. ಅದು ವದಂತಿಯಷ್ಟೇ ಆಗಿರಲಿಲ್ಲ.

‘ಆಪರೇಷನ್ ಕಮಲ’ ಎನ್ನುವ ಅನಿಷ್ಟಕ್ಕೆ ರಾಜ್ಯದಲ್ಲಿ ಚಾಲನೆ ದೊರಕಿದ್ದೇ ರೆಡ್ಡಿ ಸಹೋದರರಿಂದ. ಯಡಿಯೂರಪ್ಪ ಮೊದಲ ಬಾರಿಗೆ ಸರಕಾರ ರಚನೆ ಮಾಡಲು ಮುಂದಾದಾಗ ಶಾಸಕರ ಕೊರತೆಯಿದ್ದಾಗ, ಆ ಕೊರತೆಯನ್ನು ತುಂಬಿದ್ದು ರೆಡ್ಡಿ ಸಹೋದರರು ಬಳ್ಳಾರಿಯಲ್ಲಿ ಕೊಳ್ಳೆ ಹೊಡೆದ ಹಣವಾಗಿತ್ತು. ಪ್ರಜಾಸತ್ತೆಯ ಫಲಿತಾಂಶಗಳನ್ನು ರೆಡ್ಡಿ ಸಹೋದರರು ಬಹಿರಂಗವಾಗಿಯೇ ತಮ್ಮ ಹಣದಿಂದ ಕೊಂಡುಕೊಳ್ಳತೊಡಗಿದರು. ಈ ಮೂಲಕ, ಮರೆಯಲ್ಲಿ ನಿಂತು ಸರಕಾರವನ್ನು ನಿಯಂತ್ರಿಸತೊಡಗಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ಅವರು ರೆಡ್ಡಿ ಸಹೋದರರ ಹಣ ಬಲಕ್ಕೆ ತಲೆಬಾಗುವುದು ಅನಿವಾರ್ಯವಾಗಿತ್ತು. ಬಳ್ಳಾರಿಯು ಶಕ್ತಿ ಕೇಂದ್ರವಾಗಿ ಬದಲಾಯಿತು. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರಿಗೆ ರೆಡ್ಡಿ ಸಹೋದರರು ಉದ್ದಕ್ಕೂ ತಲೆನೋವಾದರು. ಅವರಿಗೆ ಬಿಜೆಪಿಯ ಕೇಂದ್ರ ವರಿಷ್ಠರ ಪೂರ್ಣ ಬೆಂಬಲ ಇರುವುದೇ ಇದಕ್ಕೆ ಕಾರಣವಾಗಿತ್ತು. ರೆಡ್ಡಿ ಸಹೋದರರಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ, ಅಡ್ವಾಣಿಯವರ ಮಾರ್ಗದರ್ಶನದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರ್ಯಾಚರಣೆಗಿಳಿದರು ಎನ್ನಲಾಗುತ್ತದೆ. ಅದೇನೇ ಇರಲಿ, ಲೋಕಾಯುಕ್ತ ವರದಿ ಹೊರಬೀಳುವಷ್ಟರಲ್ಲಿ ಕರ್ನಾಟಕದ ರಾಜಕೀಯವನ್ನು ಈ ರೆಡ್ಡಿ ಸಹೋದರರು ಬಳ್ಳಾರಿಯ ಗಣಿ ಹೊಂಡಗಳಂತೆ ಸರಿಪಡಿಸಲಾಗದಷ್ಟು ಕೆಡಿಸಿದ್ದರು. ರೆಡ್ಡಿಗಳ ಹಣಬಲವನ್ನು ಎದುರಿಸುವ ಹಾದಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪರಮ ಭ್ರಷ್ಟರಾಗಿ ಬೆಳೆದು ನಿಂತರು. ರಾಜ್ಯದಲ್ಲಿ ತಿಂಗಳಿಗೊಬ್ಬ್ಬರಂತೆ ಮುಖ್ಯಮಂತ್ರಿಗಳು ಬದಲಾಗತೊಡಗಿದರು. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡತೊಡಗಿತು.

ಬಳ್ಳಾರಿಗಷ್ಟೇ ಅಲ್ಲ, ಇಡೀ ನಾಡಿಗೇ ರೆಡ್ಡಿ ತಂಡ ಮಾಡಿರುವ ವಂಚನೆಗೆ ಏಳು ವರ್ಷ ಜೈಲು ಶಿಕ್ಷೆ ತೀರ ಸಣ್ಣದಾಗಿದೆ. ಇದೇ ಸಂದರ್ಭದಲ್ಲಿ ರೆಡ್ಡಿಯನ್ನು ಬೆಳೆಸಿದವರು ಯಾರು? ಅವರಿಗೆ ಶಿಕ್ಷೆಯಾಗಬೇಡವೆ? ವಿವಿಧ ಇಲಾಖೆಗಳನ್ನು ವಂಚಿಸಿ ರೆಡ್ಡಿ ಸಹೋದರರಿಗೆ ಅಷ್ಟೊಂದು ಪ್ರಮಾಣದಲ್ಲಿ ಹಗರಣಗಳನ್ನು ನಡೆಸಲು ಹೇಗೆ ಸಾಧ್ಯವಾಯಿತು? ಸರಕಾರದ ಸಹಾಯವಿಲ್ಲದೆ ಹಗರಣಗಳನ್ನು ಮಾಡಲು ಸಾಧ್ಯವೆ? ಅವರೆಲ್ಲರಿಗೂ ಶಿಕ್ಷೆಯಾಗುವುದು ಬೇಡವೆ? ಬ್ರಿಟಿಷರು ಭಾರತದಿಂದ ಸಂಪತ್ತನ್ನು ದೋಚಿ ಒಯ್ದಂತೆಯೇ ಬಿಜೆಪಿಯ ದಿಲ್ಲಿ ವರಿಷ್ಠರು ಕರ್ನಾಟಕದ ಸಂಪತ್ತನ್ನು ರೆಡ್ಡಿ ಸಹೋದರರ ಮೂಲಕ ಸೂರೆಗೈದರು. ಆದರೆ ಅವರೆಲ್ಲರೂ ಇಂದಿಗೂ ರಾಷ್ಟ್ರೀಯ ನಾಯಕರಾಗಿ ಮಿಂಚುತ್ತಿದ್ದಾರೆ. ರೆಡ್ಡಿಗಳ ದುಡ್ಡಿಗೆ ತಮ್ಮನ್ನು ಮಾರಿಕೊಂಡ ಶಾಸಕರು, ಸಚಿವರು ಇಂದಿಗೂ ರಾಜ್ಯದಲ್ಲಿ ಬಿಜೆಪಿ ನಾಯಕರಾಗಿ ಓಡಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಬಿಜೆಪಿ ಉಂಡು ಬಳಸಿ ಎಸೆದ ಬಾಳೆಯೆಲೆ ಅಷ್ಟೇ. ಇಂದು ಆ ಬಾಳೆಯೆಲೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಅದರಲ್ಲಿ ಉಂಡು ಎದ್ದವರಿಗೆ ಎಲ್ಲಿಯವರೆಗೆ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಅಪರಾಧಿಗಳನ್ನು ಪೂರ್ಣ ಪ್ರಮಾಣದಲ್ಲಿ ಶಿಕ್ಷಿಸಿದಂತಾಗುವುದಿಲ್ಲ. ಇಂದು ಒಬ್ಬ ರೆಡ್ಡಿ ಜೈಲು ಪಾಲಾದರೆ, ನಮ್ಮನ್ನಾಳುವವರು ನಾಳೆ ಹೊಸದಾಗಿ ನೂರು ರೆಡ್ಡಿಗಳನ್ನು ಸೃಷ್ಟಿಸುತ್ತಾರೆ, ಅಷ್ಟೇ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X