ಭದ್ರಾವತಿ | ಕ್ರಿಕೆಟ್ ವಿಚಾರವಾಗಿ ಗಲಾಟೆ: ಓರ್ವ ಯುವಕನ ಕೊಲೆ; ಇನ್ನೋರ್ವ ಗಂಭೀರ

ಶಿವಮೊಗ್ಗ : ಕ್ರಿಕೆಟ್ ವಿಚಾರವಾಗಿ ನಡೆದ ಗಲಾಟೆ ಓರ್ವನ ಕೊಲೆಯೊಂದಿಗೆ ಪರ್ಯಾವಸನಗೊಂಡ ಘಟನೆ ಜಿಲ್ಲೆಯ ಭದ್ರಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಅರುಣ್ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.
ಇಲ್ಲಿನ ಯುವಕರ ಗುಂಪು ಸೋಮವಾರ ಸಂಜೆ ಕ್ರಿಕೆಟ್ ಆಡಿದ್ದು, ಆನಂತರ ಕ್ರಿಕೆಟ್ ನ ವಿಚಾರವೊಂದಕ್ಕೆ ಸಂಬಂಧಿಸಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವಿಷಯ ಅಲ್ಲಿಗೆ ಮುಗಿದಿತ್ತಾದರೂ, ಒಂದು ಗುಂಪು ಪುನಃ ರಾತ್ರಿ ಮಾತನಾಡಬೇಕು ಎಂದು ಕರೆದು ತಗಾದೆ ತೆಗೆದಿದೆ. ಅಲ್ಲದೇ ಅರುಣ್ ಹಾಗೂ ಸಂಜಯ್ ಎಂಬವರ ಮೇಲೆ ತೀವ್ರ ಹಲ್ಲೆ ಮಾಡಿದೆ. ಈ ವೇಳೆ ಭರ್ಚಿಯಿಂದ ಇರಿದಿದ್ದರಿಂದ ಅರುಣ್ ಮೃತಪಟ್ಟಿದ್ದಾರೆ. ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅವರು,ಕ್ರಿಕೆಟ್ ವಿಚಾರಕ್ಕೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಪ್ರಕರಣ ಸಂಬಂಧಿಸ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
Next Story