Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಡಾ. ಮನಮೋಹನ್ ಸಿಂಗ್-ನರೇಂದ್ರ ಮೋದಿ...

ಡಾ. ಮನಮೋಹನ್ ಸಿಂಗ್-ನರೇಂದ್ರ ಮೋದಿ ‘ವಿಪರ್ಯಾಸ’ದ ದಾಖಲೆ!

ವಿನಯ್ ಕೆ.ವಿನಯ್ ಕೆ.5 Jan 2024 10:22 AM IST
share
ಡಾ. ಮನಮೋಹನ್ ಸಿಂಗ್-ನರೇಂದ್ರ ಮೋದಿ ‘ವಿಪರ್ಯಾಸ’ದ ದಾಖಲೆ!

ಸ್ಕ್ರಿಪ್ಟ್ ಇಲ್ಲದೆ ಮಾತಾಡುವ ಯಾವ ಸಂದರ್ಭವನ್ನೂ ಎದುರಿಸದ, ಪತ್ರಕರ್ತರಿಂದ ಪ್ರಶ್ನೆಗಳನ್ನೇ ಎದುರಿಸಲಾರದ, ಪ್ರಶ್ನಿಸುವವರನ್ನೇ ಸಹಿಸಲಾರದವರು ನಮ್ಮ ಇಂದಿನ ಪ್ರಧಾನಿ. ಇವರ ಹಿಂಬಾಲಕರು 2014ರಲ್ಲಿ, ಒಬ್ಬ ಪ್ರಧಾನಿಯ ಬಗ್ಗೆ ತೀರಾ ಹಗುರವಾಗಿ ಆಡಿಕೊಳ್ಳುತ್ತಾ ಒಂದು ವ್ಯವಸ್ಥಿತ ಅಪಪ್ರಚಾರ ಅಭಿಯಾನವನ್ನೇ ನಡೆಸಿದರು.

ವಿಪರ್ಯಾಸವೆಂದರೆ ಯಾರನ್ನು ‘ಮೌನ’ ಮೋಹನ್ ಎಂದು ಅಣಕಿಸಲಾಗುತ್ತಿತ್ತೋ ಆ ಮನಮೋಹನ್ ಸಿಂಗ್ ಅವರೇ ಪತ್ರಕರ್ತರ ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರು.

ಭಾರತದ ಪ್ರಧಾನಿಯೊಬ್ಬರು ‘ಪತ್ರಕರ್ತರ ಪ್ರಶ್ನೆಗಳಿಗೆ, ಮೊದಲೇ ಸ್ಕ್ರಿಪ್ಟ್ ಮಾಡಿಕೊಡದ ನೇರಾನೇರ ಪ್ರಶ್ನೆಗಳಿಗೆ’ ಮುಕ್ತವಾಗಿ ಉತ್ತರಿಸಿದ ಕೊನೆಯ ಸಂದರ್ಶನ ನಡೆದು ಬುಧವಾರಕ್ಕೆ ಹತ್ತು ವರ್ಷಗಳು ಕಳೆದಿವೆ.

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ತಾಯಿ ಎಂದೇ ಬಣ್ಣಿಸಲ್ಪಡುವ ಭಾರತದ ಪಾಲಿಗೆ ಇದೊಂದು ‘ಮಹಾ ವಿಪರ್ಯಾಸದ’ ದಾಖಲೆ.

ಭಾರತದ ಪ್ರಧಾನಿಯೊಬ್ಬರ ಕಡೆಯ ಪತ್ರಿಕಾಗೋಷ್ಠಿ ನಡೆದದ್ದು ಹತ್ತು ವರ್ಷಗಳ ಹಿಂದೆ ಜನವರಿ 3ರಂದು. ಅವತ್ತು ಹಾಜರಿದ್ದುದು 100ಕ್ಕೂ ಹೆಚ್ಚು ಪತ್ರಕರ್ತರು. ಅಲ್ಲಿ ಪ್ರಧಾನಿಗೆ ಎದುರಾಗಿದ್ದು ಸ್ಕ್ರಿಪ್ಟೆಡ್ ಆಗಿರದ 62ಕ್ಕೂ ಹೆಚ್ಚು ಪ್ರಶ್ನೆಗಳು ಮತ್ತು ಅವೆಲ್ಲಕ್ಕೂ ಉತ್ತರಿಸಿದ ಆ ಪ್ರಧಾನಿ ಡಾ. ಮನಮೋಹನ್ ಸಿಂಗ್.

ಕಳೆದ ಹತ್ತು ವರ್ಷಗಳಲ್ಲಿ ಎಲ್ಲೆಡೆ ಪ್ರಧಾನಿ ಮೋದಿ ಅವರೇ ಆವರಿಸಿದ್ದಾರೆ. ರಾಜಕೀಯದಲ್ಲಿ ಮಾತ್ರವಲ್ಲ, ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ, ಪೆಟ್ರೋಲ್ ಪಂಪ್‌ಗಳಲ್ಲಿ, ದೊಡ್ಡ ಹೈವೆಗಳಲ್ಲಿ, ಸಣ್ಣ ಹಳ್ಳಿಗಳ ರಸ್ತೆಗಳಲ್ಲಿ, ರಸ್ತೆಗಳೇ ಇಲ್ಲದಿರುವಲ್ಲಿ, ಪೋಸ್ಟರ್‌ಗಳಲ್ಲಿ, ಟಿವಿ ಚಾನಲ್‌ಗಳಲ್ಲಿ, ಪತ್ರಿಕೆಗಳಲ್ಲಿ, ಮೊಬೈಲ್‌ಗಳಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಎಲ್ಲ ಕಡೆ ಕೊನೆಗೆ ಮಂದಿರಗಳಲ್ಲೂ ಅವರೇ ಕಾಣುತ್ತಾರೆ.

ಅಷ್ಟು ಸಾಕಾಗದು ಎಂದು ಈಗ ಅಲ್ಲಲ್ಲಿ ಅವರದೇ ಸೆಲ್ಫಿ ಪಾಯಿಂಟ್ ಕೂಡ ಹಾಕಲಾಗುತ್ತಾ ಇದೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಅವರು ಕಾಣಲೇ ಇಲ್ಲ. ಅದೂ ಒಂದೆರಡಲ್ಲ, ಹತ್ತು ವರ್ಷಗಳ ಕಾಲ ಅವರು ಕಾಣಲಿಲ್ಲ. ಈ ಹತ್ತು ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಎದುರಿಸಲಿಲ್ಲ.

ಒಂದು ಕಡೆ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡದ ದಾಖಲೆ, ಇನ್ನೊಂದು ಕಡೆ ಸಾಲು ಸಾಲು ಕೆಲಸಕ್ಕೆ ಬಾರದ ಸ್ಕ್ರಿಪ್ಟೆಡ್ ಸಂದರ್ಶನಗಳ ದಾಖಲೆ.

ಆ ಸಂದರ್ಶನಗಳಾದರೂ ಎಂಥೆಂಥವು?

2019ರಲ್ಲಿ ಮೋದಿಯನ್ನು ಸಂದರ್ಶಿಸಿದ್ದ ನಟ ಅಕ್ಷಯ್ ಕುಮಾರ್ ಮಾವಿನ ಹಣ್ಣಿನ ಬಗ್ಗೆ ಮೋದಿಗೆ ಪ್ರಶ್ನೆ ಕೇಳಿದ್ದು ಹೇಗೆ ನಗೆಪಾಟಲಿಗೆ ಈಡಾಗಿತ್ತು ಎನ್ನುವುದು ಎಲ್ಲರಿಗೆ ಗೊತ್ತಿದೆ.

ಇನ್ನು ಟಿವಿ ಚಾನೆಲ್‌ಗಳ ಆ್ಯಂಕರ್‌ಗಳು ಪ್ರಧಾನಿಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗಳಿಗಿಂತ ಬಾಲಿಶವಾಗಿದ್ದವು.

ಸುಳ್ಳು ಕಥೆಗಳನ್ನು ರಂಜನೀಯವಾಗಿ ಹೇಳುವವರ ಹಿಂಬಾಲಕರು 2014ರಲ್ಲಿ, ಒಬ್ಬ ಪ್ರಧಾನಿಯ ಬಗ್ಗೆ ತೀರಾ ಹಗುರವಾಗಿ ಆಡಿಕೊಳ್ಳುತ್ತಾ ಒಂದು ವ್ಯವಸ್ಥಿತ ಅಪಪ್ರಚಾರ ಅಭಿಯಾನವನ್ನೇ ನಡೆಸಿದರು.

ಹಾಗೆ ಇಂಥವರ ಲೇವಡಿಗೆ ತುತ್ತಾದವರು ಮನಮೋಹನ್ ಸಿಂಗ್. ಆದರೆ ಯಾರನ್ನು ‘ಮೌನ’ ಮೋಹನ್ ಎಂದು ಅಣಕಿಸಲಾಗುತ್ತಿತ್ತೋ ಆ ಮನಮೋಹನ್ ಸಿಂಗ್ ಅವರೇ ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರು.

ಶ್ವೇತಭವನದಲ್ಲಿ ಮೋದಿ ಅನಿವಾರ್ಯವಾಗಿ ಪತ್ರಕರ್ತರ ಪ್ರಶ್ನೆ ಎದುರಿಸಬೇಕಾಗಿ ಬಂದ ಸಂದರ್ಭದ ಬಗ್ಗೆ ಬರೆಯುತ್ತ ‘ನ್ಯೂಯಾರ್ಕ್ ಟೈಮ್ಸ್’ ಹೇಳಿರುವ ಹಾಗೆ,

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವುದೆಂದರೆ ಇಷ್ಟಪಡುವ, ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಸಂದೇಶ ಕೊಡುವ ಮೋದಿ, ಸ್ಕ್ರಿಪ್ಟ್ ಇಲ್ಲದೆ ಏನೇ ಮಾತಾಡುವ ಸಂದರ್ಭವನ್ನು ಅದಕ್ಕೂ ಮೊದಲು ಎದುರಿಸಿದ್ದೇ ಇಲ್ಲ, ಬಹುಶಃ ಮುಂದೆಯೂ ಎದುರಿಸುವುದಿಲ್ಲ. ಯಾಕೆಂದರೆ ಅವರು ಪ್ರಶ್ನೆಗಳನ್ನೇ ಎದುರಿಸಲಾರದವರು. ಪ್ರಶ್ನೆಗಳನ್ನೇ ಸಹಿಸಲಾರದವರು. ಪ್ರಶ್ನಿಸುವವರನ್ನು ಕೂಡ ಸಹಿಸಲಾರರು.

ದೇಶದ ಪ್ರಧಾನಿ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುವ ಕಾಲ ಒಂದಿತ್ತು. ಈಗ ಪ್ರಧಾನಿ ಪತ್ರಕರ್ತರಿಗೆ ಕೇವಲ ಬಂದು ದರ್ಶನ ಭಾಗ್ಯ ಕೊಡುವ ಕಾಲ.

ಆಗ ನಿರ್ಭೀತವಾಗಿ ಪ್ರಶ್ನಿಸುವ ಪತ್ರಕರ್ತರೂ ಇದ್ದರು. ಈಗ ಅಂಥ ಪತ್ರಕರ್ತರ ಸಂಖ್ಯೆ ತೀರಾ ಇಲ್ಲವೆನ್ನುವಷ್ಟು ಕಡಿಮೆ. ಇದ್ದವರಿಗೂ ಮೋದಿಯವರೆಗೂ ಹೋಗಿ ಪ್ರಶ್ನಿಸಲು ಯಾರು ಬಿಡುತ್ತಾರೆ? ಈಗೇನಿದ್ದರೂ, ಮೋದಿಯವರು ಪತ್ರಕರ್ತರ ಕ್ಯಾಮರಾ ಎದುರು ಕೈ ಬೀಸಿ, ಹೊಗಳುಭಟ ಪತ್ರಕರ್ತರ ಜೊತೆ ಸೆಲ್ಫಿ ತೆಗೆದುಕೊಂಡು ಅವರನ್ನು ಪುನೀತರಾಗಿಸುವ ಕಾಲ.

ಜಿ 20ಯಂತಹ ಅಂತರ್ ರಾಷ್ಟ್ರೀಯ ಶೃಂಗ ಸಭೆ ಭಾರತದ ಅಧ್ಯಕ್ಷತೆಯಲ್ಲೇ ರಾಜಧಾನಿಯಲ್ಲೇ ನಡೆದಾಗಲೂ ಒಂದೇ ಒಂದು ಪತ್ರಿಕಾ ಗೋಷ್ಠಿ ಮಾಡದ ಮಹಾ ದಾಖಲೆ ಪ್ರಧಾನಿ ಮೋದಿಯವರದ್ದು.

ಅದಕ್ಕಿಂತಲೂ ವಿಪರ್ಯಾಸ ಅಂದರೆ ಶೃಂಗ ಸಭೆಯ ಕೊನೆಗೆ ಪ್ರಧಾನಿ ಬಂದು ಸೇರಿದ ನೂರಾರು ಪತ್ರಕರ್ತರಿಗೆ ಕೇವಲ ಕೈ ಬೀಸಿ ಹೋಗಿದ್ದು, ಅಷ್ಟಕ್ಕೇ ನಾವು ಪುನೀತರಾದೆವು ಎಂಬಂತೆ ಇಲ್ಲಿನ ಪತ್ರಕರ್ತರು ವರ್ತಿಸಿದ್ದು.

ಶೃಂಗಸಭೆಗೆ ಬಂದಿದ್ದ ಅಮೆರಿಕ ಅಧ್ಯಕ್ಷ ಅನಿವಾರ್ಯವಾಗಿ ಭಾರತದಿಂದ ಹೊರಟ ಮೇಲೆ ವಿಯೆಟ್ನಾಮ್‌ಗೆ ಹೋಗಿ ಭಾರತದಲ್ಲಿ ಮಾನವ ಹಕ್ಕುಗಳ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮೋದಿಯವರಲ್ಲಿ ಮಾತಾಡಿದೆ ಎಂದು ಹೇಳಬೇಕಾಯಿತು. ಏಕೆಂದರೆ ಅವರಿಗೆ ಇಲ್ಲಿ ಪತ್ರಿಕಾಗೋಷ್ಠಿ ಮಾಡುವ ಅವಕಾಶವನ್ನೇ ಕೊಡಲಿಲ್ಲ. ಇಲ್ಲೀಗ ಪತ್ರಿಕಾಗೋಷ್ಠಿ ಮೇಲೆ ಮಾತ್ರವಲ್ಲ, ಪ್ರಶ್ನೆಗಳ ಮೇಲೆಯೇ ನಿರ್ಬಂಧ ಹಾಕಲಾಗಿದೆ. ಪ್ರಶ್ನೆ ಕೇಳುವ ಪತ್ರಕರ್ತರ ಬಾಯಿ ಮುಚ್ಚಿಸಲಾಗುತ್ತದೆ.

ಮೋದಿಯವರ ಪಕ್ಷ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಪ್ರಶ್ನೆ ಕೇಳುವ ವರದಿಗಾರರ ಮೇಲೆ ಕೇಸುಗಳ ಮೇಲೆ ಕೇಸು ಬೀಳುತ್ತದೆ. ಮಾಧ್ಯಮ ಸಂಸ್ಥೆಗಳ ಸಂಪಾದಕರ ಮೇಲೆ ಭಯೋತ್ಪಾಕರ ವಿರುದ್ಧ ಹಾಕುವ ಯುಎಪಿಎ ಕೇಸು ಹಾಕಲಾಗುತ್ತದೆ. ಪ್ರಶ್ನೆ ಕೇಳುವ, ವಸ್ತುನಿಷ್ಠ ವರದಿಗಾರಿಕೆಯಲ್ಲಿ ತೊಡಗಿರುವ ಪತ್ರಕರ್ತರು ದೇಶಾದ್ಯಂತ ಅಪಾಯದಲ್ಲಿದ್ದಾರೆ.

ವಿಶ್ವಸಂಸ್ಥೆಯಲ್ಲಿಯೂ ಧ್ವನಿಸುವ ಮಟ್ಟಕ್ಕೆ ದೇಶದ ಪತ್ರಕರ್ತರ ಎದುರು ಕರಾಳ ವಾತಾವರಣವಿದೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿರುವ ಪತ್ರಕರ್ತರು ಒಂದೋ ಕೊಲೆಯಾಗುತ್ತಿದ್ದಾರೆ. ಇಲ್ಲವೇ ಹಲ್ಲೆ, ಬೆದರಿಕೆ, ಕೇಸು, ಜೈಲು ಇಂಥವನ್ನು ಎದುರಿಸಬೇಕಾದ ಸ್ಥಿತಿಯಿದೆ.

ಪ್ರಭುತ್ವವನ್ನು ಹಗಲು ರಾತ್ರಿ ಹೊಗಳುವ, ಎಲ್ಲದಕ್ಕೂ ವಿಪಕ್ಷವನ್ನೇ ಪ್ರಶ್ನಿಸುವ ‘ಮಡಿಲ ಮೀಡಿಯಾ’ ದೇಶದ ಬಹುಪಾಲು ಮಾಧ್ಯಮವನ್ನು ಆಕ್ರಮಿಸಿರುವ ಸಂದರ್ಭ ಇವತ್ತಿನದು. ದೇಶ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪಾತಾಳ ಸೇರಿದೆ.

ದೇಶದ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆಯೆಂದರೆ, ಪ್ರಜಾಪ್ರಭುತ್ವವನ್ನು ಕಾಯಬೇಕಿದ್ದ ಸಂಸತ್ತಿನಲ್ಲೇ ಪ್ರಶ್ನೆಗಳನ್ನು ಇಲ್ಲವಾಗಿಸಲಾಗಿದೆ. ಪ್ರಶ್ನಿಸುವ ಸಂಸದರನ್ನು, ಪ್ರತಿಭಟಿಸುವವರನ್ನು ಅಷ್ಟೇ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಅಮಾನತುಗೊಳಿಸಿ, ಪ್ರಜಾಪ್ರಭುತ್ವದ ಸೌಧದೊಳಗೆ ವಿಪಕ್ಷಗಳೇ ಇಲ್ಲದಂತೆ ಮಾಡಲಾಗುತ್ತಿದೆ.

ಬೀದಿಗಳಲ್ಲಿಯೂ ಪ್ರತಿಭಟನೆ, ಪ್ರದರ್ಶನ, ಧರಣಿಗಳನ್ನು ಇಲ್ಲವಾಗಿಸಲಾಗಿದೆ. ಪತ್ರಕರ್ತರಂತೂ ಮೊದಲೇ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಪ್ರಶ್ನೆಗಳಿಲ್ಲದ, ಪ್ರದರ್ಶನಗಳಿಲ್ಲದ, ಪ್ರತಿಭಟನೆಗಳಿಲ್ಲದ ವಿಚಿತ್ರ, ವಿನೂತನ ಪ್ರಜಾಪ್ರಭುತ್ವ ನಮ್ಮದಾಗಿದೆ.

ಕಳೆದ 10 ವರ್ಷಗಳಿಂದ ‘ಮಡಿಲ ಮೀಡಿಯಾ’ದ ಅರಚಾಡುವ ಆ್ಯಂಕರ್‌ಗಳು ಪ್ರಧಾನಿಯ ಸೇವೆಯಲ್ಲಿದ್ದು, ಪತ್ರಿಕೋದ್ಯಮವನ್ನು ಕೊಚ್ಚೆಗೆ ತಳ್ಳಿದ್ದಾರೆ. ಈಗ ಮಾಧ್ಯಮಗಳ ಮಾತೇನಿದ್ದರೂ ಮೋದಿಗಾಗಿ ಮಾತ್ರ.

ಒಬ್ಬ ಸಾಮಾಜಿಕ ಕಾರ್ಯಕರ್ತ ಅಥವಾ ಪತ್ರಕರ್ತನಿಗೆ ವಿದೇಶಗಳಲ್ಲಿ ಪ್ರತಿಷ್ಠಿತ ಗೌರವ ಸಿಕ್ಕರೆ ಅದನ್ನು ಭಾರತ ವಿರೋಧಿ ಪಿತೂರಿ ಎಂದು ಬಣ್ಣಿಸಲಾಗುತ್ತದೆ. ರವೀಶ್ ಕುಮಾರ್‌ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಬಂದಾಗ, ಹುತಾತ್ಮ ದಾನಿಶ್ ಸಿದ್ದೀಕಿ ಸಹಿತ ನಾಲ್ಕು ಪತ್ರಕರ್ತರಿಗೆ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಬಂದಾಗ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲೇ ಇಲ್ಲ.

ಇಲ್ಲೀಗ ಸರಕಾರವನ್ನು ಹೇಗೂ ಮಡಿಲ ಮಾಧ್ಯಮಗಳು ಪ್ರಶ್ನಿಸುವುದಿಲ್ಲ. ಆದರೆ ಪ್ರಶ್ನಿಸುವವರನ್ನು ಗುರಿಯಾಗಿಸಲು ಅವು ಖಂಡಿತವಾಗಿಯೂ ಸರಕಾರದೊಂದಿಗೆ ಜೊತೆಯಾಗುತ್ತವೆ. ಅವರನ್ನು ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದು ಕರೆಯುವುದರಲ್ಲಿ ಮಡಿಲ ಮೀಡಿಯಾವೇ ಮುಂದಿರುತ್ತದೆ.

ತಮಾಷೆಯೆಂದರೆ, ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನು ಎದುರಿಸಿರದ ಮೋದಿಗೆ ಕೂಡ ಈ ಗೋದಿ ಮೀಡಿಯಾಗಳ ಬಗ್ಗೆ ಅತ್ಯಂತ ತಾತ್ಸಾರ. ಆದರೆ ಭಕ್ತ ಗೋದಿ ಮೀಡಿಯಾಗಳಿಗೆ ಮಾತ್ರ ಅದು ಅರ್ಥವಾಗುವುದಿಲ್ಲ, ಅರ್ಥ ಮಾಡಿಕೊಳ್ಳುವ ಮಟ್ಟದ ವಿವೇಚನೆಯೂ ಅವಕ್ಕಿಲ್ಲ.

ಯಾವತ್ತಿನಿಂದ ಈ ದೇಶದ ಪ್ರಧಾನಿಯೊಬ್ಬರು ಪತ್ರಕರ್ತರ ನೇರ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ವಿಮುಖರಾದರೋ ಮತ್ತು ಅದನ್ನು ಪತ್ರಕರ್ತರು ಬಹಳ ವಿನಮ್ರಭಾವದಿಂದಲೇ ಒಪ್ಪಿಕೊಂಡುಬಿಟ್ಟರೋ ಅವತ್ತಿನಿಂದಲೇ ಈ ದೇಶದಲ್ಲಿ ಪತ್ರಿಕೋದ್ಯಮದ ಅಂತ್ಯದ ಆರಂಭವಾಯಿತು. ಪ್ರಶ್ನೆಗಳೇ ಇಲ್ಲದ ಮೇಲೆ ಎಲ್ಲಿಯ ಪತ್ರಿಕೋದ್ಯಮ?

share
ವಿನಯ್ ಕೆ.
ವಿನಯ್ ಕೆ.
Next Story
X