Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಗುರುತಿನ ಚೀಟಿ

ಗುರುತಿನ ಚೀಟಿ

ವಾರ್ತಾಭಾರತಿವಾರ್ತಾಭಾರತಿ24 Dec 2023 10:04 AM IST
share

ಮೂಲ: ಮುಹಮ್ಮದ್ ದರ್ವೀಷ್

ಕನ್ನಡಕ್ಕೆ: ಕೆ. ಫಣಿರಾಜ್

ಮುಹಮ್ಮದ್ ದರ್ವೀಷ್ (1941-2008), ಫೆಲೆಸ್ತೀನಿನ ಮಹಾಕವಿ ಮಾತ್ರವಲ್ಲ, ಜಗತ್ಪ್ರಸಿದ್ಧ ಕವಿಗಳ ಮುಂಚೂಣಿ ಸಾಲಿನಲ್ಲಿ ನೆಲೆಗೊಂಡಿರುವಂತಹ ಕವಿ. 1948ರ ಇಸ್ರೇಲ್ ಆಕ್ರಮಣದಲ್ಲಿ ಅವರ ಹುಟ್ಟೂರನ್ನು ನಾಶಗೊಳಿಸಲಾಯಿತು. ಅಲ್ಲಿಂದ ಅವರು ಜೀವನ ಪೂರ್ತಿ ಇಸ್ರೇಲ್ ಆಕ್ರಮಿತ ಪ್ರದೇಶ, ಲೆಬನಾನ್, ಅಮೆರಿಕಗಳಲ್ಲಿ ನಿರಾಶ್ರಿತರ ಜೀವನ ನಡೆಸಿದರು. ಅವರು, ಫೆಲೆಸ್ತೀನಿಯರ ಪ್ರತಿರೋಧ ಚಳವಳಿಯ ಸಕ್ರಿಯ ಭಾಗವಾಗಿದ್ದರು. ಅವರ ಪದ್ಯಗಳಲ್ಲಿ ಆಕ್ರಮಣಕ್ಕೆ ತುತ್ತಾದ ಫೆಲೆಸ್ತೀನಿಯರ ಆಕ್ರೋಶ, ವಿಷಾದಗಳ ಜೊತೆಗೆ ಮಾನವರ ಅಸ್ತಿತ್ವದ ಹಲವು ಗಾಢ ಭಾವಗಳು ಹೆಣೆದುಕೊಂಡು, ಕಾವ್ಯಕ್ಕೆ ಹೊಸ ಖದರ್ ದಕ್ಕಿರುವುದನ್ನು ಅನುಭವಿಸಬಹುದು.

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ಗುರುತಿನ ಚೀಟಿ ನಂಬ್ರ 50000

ಎಂಟು ಮಕ್ಕಳಿವೆ ನನಗೆ

ಒಂಭತ್ತನೇದು ಹುಟ್ಟಲಿದೆ ಕಳೆದರೆ ಮುಂದಿನ ಬೇಸಿಗೆ

ನನ್ನ ಕಂಡರೆ ಕೋಪವೇ ನಿಮಗೆ?

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ಕಲ್ಲು ಗಣಿಯ ಶ್ರಮಿಕರಲ್ಲೊಬ್ಬ

ಎಂಟು ಮಕ್ಕಳಿವೆ ನನಗೆ

ಅವರಿಗೆ ರೊಟ್ಟಿ ಬಟ್ಟೆ ಪುಸ್ತಕಗಳ

ತೆಗೆದು ಕೊಡುವೆ ಕಲ್ಲುಗಳಿಂದಲೇ.

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ನನ್ನ ಹೆಸರಿಗೆ ಲಗಾತ್ತಾಗಿಲ್ಲ ಯಾವುದೇ ಬಿರುದು

ರೇಗಿರುವ ಜನರ ದೇಶದಲ್ಲಿ

ಸಂಯಮದಿಂದ ಇರುವೆ

ಕಾಲ ಹುಟ್ಟುವುದಕ್ಕೆ ಮುಂಚೆಯೇ

ಶಕೆಗಳ ಶುರುವಿಗೆ ಮುನ್ನವೇ

ಪೈನ್, ಓಲಿವ್ ಮರಗಳಿಗಿಂತ ಹಿಂದೆಯೇ

ಹುಲ್ಲು ಗರಿಕೆ ಇನ್ನೂ ತಲೆ ಎತ್ತದಿರುವಾಗ

ನಾನು ನನ್ನ ಬೇರು ಬಿಟ್ಟಿರುವೆ

ನನ್ನಜ್ಜಂದಿರು ರೈತರು

ನನ್ನಪ್ಪ ನೇಗಿಲ ಕುಟುಂಬದ ಕೂಸು

ಯಾರೂ ಹೊಟ್ಟೆ ತುಂಬಿದವರಲ್ಲ

ಯಾರಿಗೂ ಹಿರಿ ಮನೆತನದ ಹಂಗಿಲ್ಲ

ಅಕ್ಷರ ಕಲಿಸುವುದಕ್ಕೆ ಮುನ್ನ

ನೇಸರನ ಸ್ವಾಭಿಮಾನ ಕಲಿಸಿರುವರು ನನಗೆ

ನನ್ನ ಮನೆಯೂ ರೆಂಬೆ ಕೊಂಬೆಗಳಿಂದ

ಕಟ್ಟಿದ ಕಾವಲುಗಾರನ ಗುಡಿಸಲು

ಮನೆತನದ ಭಾರವಿಲ್ಲ ನನ್ನ ಹೆಸರಿಗೆ

ಇದು ನನ್ನ ಜಾತಕ, ತೃಪ್ತಿಯಾಯ್ತೇ ನಿಮಗೆ!

ಬರೆದಿಟ್ಟುಕೊಳ್ಳಿ

ನಾನೊಬ್ಬ ಅರಬ

ನೀವು ನಮ್ಮ ಹಿರಿಕರ ತೋಟ ಕದ್ದಿದ್ದೀರಿ

ಕದ್ದಿದ್ದೀರಿ ನನ್ನ ಮಕ್ಕಳೊಟ್ಟಿಗೆ ನಾನು ಉತ್ತುಬಿತ್ತ ನೆಲವನ್ನ

ಏನು ಉಳಿಸಿದ್ದೀರಿ ನಮಗೆ

ಈ ಕಲ್ಲು ಬಂಡೆಗಳ ಹೊರತು

ಅವನ್ನು ಕಿತ್ತುಕೊಳ್ಳಲಿದೆಯಂತೆ

ನಿಮ್ಮ ಪ್ರಭುತ್ವ! ಹೌದೇ!

ಹೀಗಾಗಿ,

ಬರೆದಿಟ್ಟುಕೊಳ್ಳಿ ಪುಟದ ಮೊದಲ ಸಾಲಲ್ಲಿ:

ನಾನು ಯಾರನ್ನೂ ದ್ವೇಷಿಸುವುದಿಲ್ಲ

ಏನನ್ನೂ ಕಬಳಿಸುವುದಿಲ್ಲ

ಆದರೆ ನನಗೆ ಹಸಿವಾಯಿತೆಂದರೆ

ಕಬಳಿಸಿದವರ ಮಾಂಸವೇ ಎನ್ನ ಆಹಾರ

ಹುಷಾರ್! ನನಗೂ ಹಸಿವಾಗುತ್ತದೆ

ಹುಷಾರ್! ನನಗೂ ಸಿಟ್ಟು ನೆತ್ತಿಗೇರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X