Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆಮಿರ್ ಗೆ ತೆರೆದ ಹಜ್ ನ ಬಾಗಿಲು!

ಆಮಿರ್ ಗೆ ತೆರೆದ ಹಜ್ ನ ಬಾಗಿಲು!

ಲಿಬಿಯಾದ ಹಜ್ ತಂಡದಲ್ಲಿದ್ದ ಆಮಿರ್ ಗಡಾಫಿ ಮಕ್ಕಾ ತಲುಪಿದ್ದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ2 Jun 2025 9:33 PM IST
share
ಆಮಿರ್ ಗೆ ತೆರೆದ ಹಜ್ ನ ಬಾಗಿಲು!

ಪ್ರತಿಯೊಬ್ಬ ಹಜ್ ಯಾತ್ರಿಕನೂ "ಅಲ್ಲಾಹನೇ , ನಿನ್ನ ಕರೆಯ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳುತ್ತಾ ಜಗತ್ತಿನ ಮೂಲೆ ಮೂಲೆಗಳಿಂದಲೂ ಮಕ್ಕಾಗೆ ಹೊರಡುತ್ತಾರೆ. ಲಬ್ಬಯಿಕಲ್ಲಾಹುಮ್ಮ ಲಬ್ಬಯ್ಕ್ ಎನ್ನುತ್ತಲೇ ಮಕ್ಕಾದ ಕಡೆಗೆ ಸಾಗುತ್ತಾರೆ. ಹೀಗೆ ಮಕ್ಕಾಗೆ ಹೊರಟ ಒಬ್ಬನ ಕರೆ ಹೇಗೆ ಆತನನ್ನು ಮಕ್ಕಾಗೆ ತಲುಪಿಸಿತು ಎಂಬ ನಿಜ ಕತೆ ಇದು.

ಅರಬ್ ರಾಷ್ಟ್ರಗಳ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಲಿಬಿಯಾದ ಆಮಿರ್ ಗಡಾಫಿಯ ಕಥೆ ವೈರಲ್ ಆಗುತ್ತಿದೆ. ಹಜ್‌ಗೆ ಹೊರಟ ಆಮಿರ್ ಗೆ ಎದುರಾದ ಸಂಕಷ್ಟಗಳು ಮತ್ತು ಸವಾಲುಗಳು ಹಲವು.

ಲಿಬಿಯಾದಿಂದ ಹಜ್ ಯಾತ್ರಿಕರ ಒಂದು ತಂಡ ಈ ಬಾರಿ ಹಜ್‌ಗೆ ಹೊರಟಿತು. ವಿಮಾನ ನಿಲ್ದಾಣವನ್ನು ತಲುಪಿದ ತಂಡ ಎಮಿಗ್ರೇಶನ್ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿತು.ಆದರೆ ದುರದೃಷ್ಟವಶಾತ್ ಒಬ್ಬ ವ್ಯಕ್ತಿಯ ಎಮಿಗ್ರೇಶನ್ ವಿಧಾನಗಳು ಮಾತ್ರ ಅವರ ಹೆಸರಿಗೆ ಸಂಬಂಧಪಟ್ಟ ತಾಂತ್ರಿಕ ಕಾರಣಗಳಿಂದ ವಿಳಂಬವಾಯಿತು.

"ನಿಮಗೆ ತಕ್ಷಣ ಹೊರಡಬಹುದು, ತಡವಾಗುವುದಿಲ್ಲ" ಎಂದು ಎಮಿಗ್ರೇಶನ್ ಸಿಬ್ಬಂದಿ ಅವರಿಗೆ ಭರವಸೆ ಕೊಟ್ಟರು. ಆದರೆ ಪರಿಸ್ಥಿತಿ ತಲೆಕೆಳಗಾಯಿತು. ವಿಮಾನ ಹೊರಡುವ ಸಮಯವಾದರೂ, ಲಿಬಿಯಾದ ವ್ಯಕ್ತಿ ಆಮಿರ್ ಅವರ ಎಮಿಗ್ರೇಶನ್ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಅಷ್ಟೊತ್ತಿಗೆ ವಿಮಾನದ ಬಾಗಿಲು ಮುಚ್ಚಲಾಗಿತ್ತು. ವಿಮಾನ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಆಮಿರ್ ಎಮಿಗ್ರೇಶನ್ ಪೂರ್ಣಗೊಳಿಸಿ ವಿಮಾನಕ್ಕೆ ಹೋಗುವ ಗೇಟ್ ಬಳಿ ಓಡೋಡಿ ಬಂದರು. ಆದರೆ ವಿಮಾನ ಪ್ರವೇಶಕ್ಕೆ ಪೈಲಟ್ ನಿರಾಕರಿಸಿದರು. ವಿಮಾನದ ಬಾಗಿಲು ತೆರೆಯಲಿಲ್ಲ.

ಕೊನೆಗೆ ಆಮಿರ್ ಅವರನ್ನು ಅಲ್ಲೇ ಬಿಟ್ಟು ವಿಮಾನ ಜಿದ್ದಾಗೆ ಹೊರಟಿತು!

'ಅಲ್ಲಾಹನು ನಿಮಗೆ ಹಜ್ ನಿರ್ವಹಿಸಲು ಅವಕಾಶ ನೀಡುತ್ತಾನೆ. ನಿರಾಶೆಗೊಳ್ಳಬೇಡಿ, ಈ ಬಾರಿ ಅದು ನಿಮ್ಮ ವಿಧಿಯಲ್ಲಿಲ್ಲ ' ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಆಮಿರ್ ಗೆ ಹೇಳಿ ಸಮಾಧಾನ ಪಡಿಸಿದರು. ಆದರೆ ಆಮಿರ್ ಅವರ ಉತ್ತರ ದೃಢವಾಗಿತ್ತು: 'ನಾನು ಹಜ್ ಮಾಡಲು ನಿರ್ಧರಿಸಿದ್ದೇನೆ. ಅಲ್ಲಾಹನು ನಿರ್ಧರಿಸಿದರೆ, ನಾನು ಖಂಡಿತ ಈ ಬಾರಿಯೇ ಹೋಗುತ್ತೇನೆ.'

ನಂತರದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿದವು.

ಆಮಿರ್ ಇಲ್ಲದೆ ಜಿದ್ದಾಗೆ ಹೊರಟ ವಿಮಾನವು ತಾಂತ್ರಿಕ ಸಮಸ್ಯೆಗಳಿಂದಾಗಿ ಅನಿರೀಕ್ಷಿತವಾಗಿ ಮತ್ತದೇ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು. ಅಲ್ಲಿ ವಿಮಾನದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಯಿತು ಮತ್ತು ವಿಮಾನವು ಮತ್ತೆ ಹಾರಲು ಸಿದ್ಧವಾಗಿ ನಿಂತಾಗ ಆಮಿರ್ ಅವರನ್ನು ಹತ್ತಿಸಲು ಪೈಲಟ್ ಮತ್ತು ಇತರರು ಸಿದ್ಧರಿರಲಿಲ್ಲ.

'ಈ ಬಾರಿ ಹಜ್ ನಿಮ್ಮ ವಿಧಿಯಲ್ಲಿಲ್ಲ , ಆಮಿರ್ ಕ್ಷಮಿಸಿ' ಎಂದು ಭದ್ರತಾ ಅಧಿಕಾರಿ ಪುನರಾವರ್ತಿಸಿದರು. ಆದರೆ ಆಮಿರ್ ಹೊರಗೆ ಹೋಗದೆ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದರು. ಜಿದ್ದಾಗೆ ಹೊರಟ ವಿಮಾನದಲ್ಲಿ ಮತ್ತೆ ತಾಂತ್ರಿಕ ಸಮಸ್ಯೆ ಇದೆ. ಅದು ಮತ್ತೆ ನಿಲ್ದಾಣಕ್ಕೆ ಹಿಂತಿರುಗಲಿದೆ ಎಂದು ನಿಲ್ದಾಣದಲ್ಲಿ ಅನೌನ್ಸ್ ಆಯಿತು.

ಮತ್ತೆ ಅದೇ ವಿಮಾನ ಅದೇ ನಿಲ್ದಾಣಕ್ಕೆ ಹಿಂತಿರುಗಿ ಬಂತು. ಆಮಿರ್ ಜೊತೆಗೆ ಹೋಗಬೇಕಿದ್ದ ಹಜ್ ಯಾತ್ರಿಕರು ವಿಮಾನದಲ್ಲೇ ಕುಳಿತಿದ್ದರು. ಸಮಸ್ಯೆಯನ್ನು ಸರಿಪಡಿಸಲಾಯಿತು. ವಿಮಾನ ಮತ್ತೆ ಹೊರಡಲು ಸಿದ್ದವಾಯಿತು. ಆದರೆ ಈ ಬಾರಿ ಹೊರಡಲು ಪೈಲಟ್ ಯಾಕೋ ಮನಸ್ಸು ಮಾಡುತ್ತಿಲ್ಲ. ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಆಮಿರ್ ಇಲ್ಲದೆ ತಾನು ಹೋಗುವುದಿಲ್ಲ ಎಂದು ಪೈಲಟ್ ಹೇಳಿದರು. ಕೊನೆಗೆ, ಆಮಿರ್ ಅವರ ಮುಂದೆ ಹಜ್‌ನ ಬಾಗಿಲು ತೆರೆದಂತೆ ವಿಮಾನದ ಬಾಗಿಲು ತೆರೆಯಲಾಯಿತು. ಅವರು ಜಿದ್ದಾ ತಲುಪಿದಾಗ, ವಿಮಾನದ ಪೈಲಟ್‌ಗಳು ಮತ್ತು ಅಧಿಕಾರಿಗಳು ಅವರೊಂದಿಗೆ ಒಂದು ಗ್ರೂಪ್ ಫೋಟೋ ತೆಗೆದ ನಂತರ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಲಬ್ಬಯಿಕಲ್ಲಾಹುಮ್ಮ ಲಬ್ಬಯ್ಕ್ ಎನ್ನುತ್ತಾ ಕೋಟ್ಯಂತರ ಶ್ರದ್ಧಾಳುಗಳ ಜೊತೆ ಈ ಬಾರಿ ಆಮಿರ್ ಕೂಡಾ ಹಜ್ ನಿರ್ವಹಿಸಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X