Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. Snapchat App ಮೂಲಕ ಐನಾಝ್‌ ಮನೆಗೆ...

Snapchat App ಮೂಲಕ ಐನಾಝ್‌ ಮನೆಗೆ ತಲುಪಿದ್ದ ಹಂತಕ

ಬಪ್ಪನಾಡು ಬಳಿ ಬಟ್ಟೆ ಸುಟ್ಟು ಹಾಕಿದ್ದ ಪ್ರವೀಣ್ ಚೌಗುಲೆ

ಆರ್. ಜೀವಿಆರ್. ಜೀವಿ22 Nov 2023 7:18 PM IST
share
Snapchat App ಮೂಲಕ ಐನಾಝ್‌ ಮನೆಗೆ ತಲುಪಿದ್ದ ಹಂತಕ
ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯಾಕಾಂಡದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯ ವಿಚಾರಣೆಯಿಂದ ಒಂದೊಂದೇ ಹೊಸ ಮಾಹಿತಿಗಳು ಹೊರಬರುತ್ತಿವೆ.
ತಾನು ನಡೆಸುವ ಕಗ್ಗೊಲೆಗಳ ಬಗ್ಗೆ ಯಾವುದೇ ಸುಳಿವು ಲಭಿಸದಂತೆ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆ, ಐನಾಝ್‌ಳ ಮನೆಯ ದಾರಿಯನ್ನು ‘ಸ್ನಾಪ್ ಚಾಟ್’ app ಮೂಲಕ ಕಂಡುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಈಗ ಬೆಳಕಿಗೆ ಬಂದಿದೆ.
ಇದರೊಂದಿಗೆ ಆರೋಪಿ ಪ್ರವೀಣ್ ಈ ಹಿಂದೆಯೂ ಐನಾಝ್ ಅವರ ನೇಜಾರಿನ ಮನೆಗೆ ಬಂದಿದ್ದ ಹಾಗೂ ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೆ ಮುನ್ನಾ ದಿನ ನ.11ರಂದು ಶನಿವಾರ ಐನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿಗೆ ಬಂದಿದ್ದಳು. ಆಕೆ ಅಬುದಾಬಿಯಿಂದ ಬರುವಾಗ ತಮ್ಮನಿಗೆ ಮತ್ತು ಮನೆ ಕೆಲಸದಾಕೆಯ ಮಗನಿಗೆ ತಂದ ಉಡುಗೊರೆಗಳನ್ನು ಕೊಡಲು ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು.
ಆಕೆ ಮರುದಿನ ರವಿವಾರ ರಾತ್ರಿ 8ಗಂಟೆಗೆ ದುಬೈ ವಿಮಾನದಲ್ಲಿ ಕರ್ತವ್ಯಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ಮನೆಯಿಂದ ಬೆಳಗ್ಗೆ 11ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.
ಮೊದಲ ಬಾರಿಗೆ ನೇಜಾರಿಗೆ ಬರುತ್ತಿದ್ದ ಹಂತಕ ಪ್ರವೀಣ್, ಆಕೆಯ ಮನೆ ಗೊತ್ತಿಲ್ಲದಿದ್ದರೂ ಸ್ನಾಪ್‌ಚಾಟ್ ಆ್ಯಪ್ ಮೂಲಕ ದಾರಿ ಕಂಡುಕೊಂಡಿದ್ದನು. ಆ್ಯಪ್ ಸೂಚಿಸಿದ ಮಾರ್ಗದಲ್ಲೇ ಬಂದು ಆತ, ಐನಾಝ್ ಮನೆ ತಲುಪಿದ್ದಾನೆ. ಸಂತೆಕಟ್ಟೆಯಿಂದ ನೇಜಾರಿನ ತೃಪ್ತಿ ಲೇಔಟ್‌ಗೆ ಪ್ರವೀಣ್ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ಚಾಲಕ ದಾರಿ ತಪ್ಪಿ ಮುಂದೆ ಹೋಗಿದ್ದ . ಆಗ ಪ್ರವೀಣ್, ಸ್ನಾಪ್‌ಚಾಟ್ ನೋಡಿಯೇ ಆಕೆಯ ಮನೆ ದಾರಿಯನ್ನು ರಿಕ್ಷಾ ಚಾಲಕನಿಗೆ ತೋರಿಸಿದ್ದ .
ಒಂದು ವೇಳೆ ಆತ ಈ ಹಿಂದೆ ಮನೆಗೆ ಬಂದಿದ್ದರೆ ಅಥವಾ ಮನೆಯ ದಾರಿ ಚೆನ್ನಾಗಿ ಗೊತ್ತಿದ್ದರೆ ರಿಕ್ಷಾ ಚಾಲಕನನ್ನು ದಾರಿ ತಪ್ಪಿ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಆಕೆ ಮನೆಯಲ್ಲೇ ಇದ್ದುದರಿಂದ ಸ್ನಾಪ್‌ಚಾಟ್ ಸರಿ ಯಾಗಿಯೇ ಆಕೆಯ ಮನೆ ಇರುವ ಸ್ಥಳವನ್ನು ಆತನಿಗೆ ತೋರಿಸಿದೆ ಮತ್ತು ಮನೆ ಎದುರೇ ರಿಕ್ಷಾ ಚಾಲಕ ಪ್ರವೀಣ್‌ನನ್ನು ಬಿಟ್ಟು ವಾಪಾಸ್ಸು ಹೋಗಿದ್ದಾರೆ.
ಸ್ನಾಪ್‌ಚಾಟ್ ಒಂದು ಮಲ್ಟಿಮಿಡಿಯಾ ಇನ್‌ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್. ಇದರಲ್ಲಿ ತಮ್ಮ ಗೆಳೆಯರಿಗೆ ಫೋಟೋ ಸಂದೇಶವನ್ನು ಕಳುಹಿಸಬಹುದು. ಇಬ್ಬರಲ್ಲೂ ಈ ಅ್ಯಪ್ಲಿಕೇಶನ್ ಇದ್ದರೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳ ಬಹುದು. ಇದರಲ್ಲಿರುವ ಲೋಕೇಶನ್‌ಗೆ ಹೋದರೆ ತಮ್ಮ ಗೆಳೆಯರು ಯಾವ ಸ್ಥಳದಲ್ಲಿದ್ದಾರೆ ಎಂದು ಕೂಡ ನೋಡಬಹುದು. ತನ್ನ ಲೊಕೇಶನ್ ಗೆಳೆಯರಿಗೆ ಕಾಣದಂತೆ ಹೈಡ್ ಕೂಡ ಮಾಡಬಹುದು.
ಆರೋಪಿ ಪ್ರವೀಣ್ ಕೊಲೆ ಮಾಡಿ ಹೆಜಮಾಡಿಯಿಂದ ಮಂಗಳೂರಿಗೆ ಕಾರಿನಲ್ಲಿ ಹೋಗುವಾಗ ದಾರಿ ಮಧ್ಯೆ ಮುಲ್ಕಿ ಬಪ್ಪನಾಡು ಸಮೀಪ ತಾನು ಕೊಲೆ ಮಾಡುವಾಗ ಹಾಕಿಕೊಂಡಿದ್ದ ಬಟ್ಟೆ ಯನ್ನು ಸುಟ್ಟು ಹಾಕಿದ್ದ. ಇದೀಗ ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು, ಸುಟ್ಟ ಬಟ್ಟೆಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಅದೇ ರೀತಿ ಐನಾಝ್ ವಾಸ ಮಾಡಿಕೊಂಡಿದ್ದ ಮಂಗಳೂರಿನ ಬಾಡಿಗೆ ಮನೆ ಸಮೀಪ ನಿಲ್ಲಿಸಿದ್ದ ಹಂತಕ ಪ್ರವೀಣ್ ಚೌಗುಲೆಯ ಸ್ಕೂಟರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಪ್ರವೀಣ್ ಐನಾಝ್‌ಗೆ ಮಾರಾಟ ಮಾಡಿದ್ದಾನೆಯೇ ಅಥವಾ ಅವನ ಹೆಸರಿನಲ್ಲಿಯೇ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರವೀಣ್ ಚೌಗುಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೇರುವ ಮೊದಲು ತನ್ನ ಊರಿನಲ್ಲಿ ಕುಸ್ತಿಪಟು ಆಗಿದ್ದ ಎಂಬ ಮಾಹಿತಿ ದೊರೆತಿದೆ.
ಇದರಿಂದ ರಕ್ಷಣಾ ಕಲೆಗಳನ್ನು ಅರಿತಿದ್ದ ಆತ, ದೈಹಿಕವಾಗಿಯೂ ಸದೃಢವಾಗಿದ್ದ . ಹಾಗಾಗಿಯೇ ಆತ ನಾಲ್ವರನ್ನು ಕೇವಲ 15 ನಿಮಿಷಗಳಲ್ಲಿ ಬರ್ಬರವಾಗಿ ಕೊಲ್ಲಲು ಸಾಧ್ಯವಾಗಿತ್ತು. ಅಲ್ಲದೆ ತನ್ನ ಬಟ್ಟೆಗಳಿಗೂ ಹೆಚ್ಚು ರಕ್ತ ಮೆತ್ತದಂತೆ ನೋಡಿಕೊಂಡು ಪರಾರಿಯಾಗಿದ್ದ ಪ್ರವೀಣ್ .
ಇನ್ನು, ಪ್ರವೀಣ್ ​ಪಡೆಯುತ್ತಿದ್ದ ವೇತನ​ಕ್ಕೂ ಆತನ ಜೀವನ ಶೈಲಿಗೂ ತಾಳೆಯಾಗುತ್ತಿರಲಿಲ್ಲ ಎಂಬ ಮಾಹಿತಿಯಿದೆ. ​ಎರಡು ನಿವೇಶನ, ​ಫ್ಲ್ಯಾಟ್, ಕಾರು​ಗಳ ಒಡೆಯನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ​ ಹೆಚ್ಚಿನ ಆದಾಯಕ್ಕಾಗಿ ಆತ ​ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ತೊಡಗಿ​ರಬಹುದು ಎಂಬ ಸಂಶಯಗಳೂ ವ್ಯಕ್ತವಾಗುತ್ತಿದೆ. ಪೊಲೀಸರು ಆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸೌದಿಯಲ್ಲಿ ಶಿಕ್ಷಣ ಪಡೆದ ನೂರ್ ಮುಹಮ್ಮದ್ ಅವರ ಹಿರಿಯ ಮಗಳು ಅಫ್ನಾನ್ ಮತ್ತು ತಂಗಿ ಐನಾಝ್, ಒಮ್ಮೆ ತಾವು ಕಲಿತ ಶಾಲೆಯಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅಘ್ನಾನ್‌ ಳ ಸುಲಲಿತ ಇಂಗ್ಲಿಷ್ ಭಾಷಣ ಕೇಳಿ, ಅಲ್ಲಿನ ಶಿಕ್ಷಕರು ಆಕೆಯನ್ನು ತಮ್ಮ ಶಾಲೆಗೆ ಶಿಕ್ಷಕಿಯಾಗಿ ಕಳುಹಿಸುವಂತೆ ಆಕೆಯ ತಂದೆ ನೂರ್ ಮುಹಮ್ಮದ್‌ರಲ್ಲಿ ಮನವಿ ಮಾಡಿದ್ದರು.
ತಂದೆಯ ಒಪ್ಪಿಗೆಯಂತೆ ಅಫ್ನಾನ್ ಶಿಕ್ಷಕಿಯಾಗಿ ಕೆಲಸ ಸೇರಿದ್ದಳು. ಅಲ್ಲಿ ದುಡಿದ ಹಣದಿಂದ ಆಕೆ ತನ್ನ ತಂಗಿ ಐನಾಝ್‌ಗಾಗಿ ಐಫೋನ್ ಖರೀದಿಸಿ ಗಿಫ್ಟ್ ನೀಡಿದ್ದಳು. ಮಂಗಳೂರಿನಲ್ಲಿದ್ದ ಇವರಿಬ್ಬರು ಒಂದೇ ಫ್ಲಾಟ್‌ನಲ್ಲಿ ಇರುವಂತೆ ನೂರ್ ಮುಹಮ್ಮದ್ ತಿಳಿಸಿದ್ದರು. ಅದರಂತೆ ಇವರು ಒಂದೇ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದರು. ಈ ವಿಚಾರವನ್ನು ತಂದೆ ನೂರ್ ಮುಹಮ್ಮದ್ ವಾರ್ತಾಭಾರತಿಗೆ ತಿಳಿಸಿದ್ದಾರೆ.
ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡುವುದನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿ ನೂರ್ ಮುಹಮ್ಮದ್ ಅವರ ತಾಯಿ ಹಾಜೀರ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ ಎಂದು ತಿಳಿದುಬಂದಿದೆ. ಹಂತಕನಿಂದ ತಪ್ಪಿಸಿಕೊಂಡು ಬಾತ್‌ರೂಮಿನಲ್ಲಿ ಚಿಲಕ ಹಾಕಿ ಪ್ರಾಣ ಉಳಿಸಿ ಕೊಂಡ ಹಾಜಿರಾ, ಮಣಿಪಾಲದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, ಇದೀಗ ಅವರು ಕುಂದಾಪುರ ತಾಲೂಕಿನ ಹೈಕಾಡಿಯ ಮನೆಯಲ್ಲಿದ್ದಾರೆ. ಶಾಕ್‌ನಲ್ಲಿಯೇ ಇರುವ ಅವರು ಅಂದಿನ ಘಟನೆ ಬಗ್ಗೆ ವಿವರಿಸುವಷ್ಟು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
share
ಆರ್. ಜೀವಿ
ಆರ್. ಜೀವಿ
Next Story
X