Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಮಳೆ ಮಾಯವಾಯಿತು... ಬರಗಾಲಕ್ಕೆ...

ಮಳೆ ಮಾಯವಾಯಿತು... ಬರಗಾಲಕ್ಕೆ ಪಾಯವಾಯಿತು

-ದಿನೇಶ್ ಹೊಳ್ಳ, ಪರಿಸರವಾದಿ-ದಿನೇಶ್ ಹೊಳ್ಳ, ಪರಿಸರವಾದಿ3 Sept 2023 9:33 AM IST
share
ಮಳೆ ಮಾಯವಾಯಿತು... ಬರಗಾಲಕ್ಕೆ ಪಾಯವಾಯಿತು
ಮಳೆ ನೀರನ್ನು ತನ್ನೊಡಲ ಒಳಗೆ ಬಚ್ಚಿಟ್ಟುಕೊಂಡು ವರ್ಷ ಪೂರ್ತಿ ಹೊಳೆಗಳನ್ನು ಜೀವಂತವಾಗಿ ಇಟ್ಟುಕೊಳ್ಳುವ ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾರಣ್ಯವನ್ನು ನಿರ್ದಾಕ್ಷಿಣ್ಯವಾಗಿ ವೋಟು-ನೋಟು-ಸೀಟು ಗಳಿಸುವ ಯಾವುದೋ ಅಸಂಬದ್ಧ ಯೋಜನೆಗಾಗಿ ಬಲಿ ಕೊಡುತ್ತಾ ಬಂದರೆ ಮಳೆ ಮಾಯವಾಗಿ ಇನ್ನೇನು ಆಗಲು ಸಾಧ್ಯ?

ಮುಂದಿನ ಬರಗಾಲದ ದಿಬ್ಬಣ ಹೊರಟಿದೆ, ಕ್ಷಾಮದ ಒಡ್ಡೋಲಗ ಚೆನ್ನಾಗಿರಬಹುದು. ಅನುಭವಿಸಲೇಬೇಕು ಬರಲಿರುವ ಬರಗಾಲವನ್ನು. ‘ಬರ’ ಬೇಡ ಎನ್ನಲು, ನಿಸರ್ಗದ ಪ್ರ(ತಿ)ಕ್ರಿಯೆಯನ್ನು ತಡೆಯಲು ಯಾರಿಗೂ ಹಕ್ಕಿಲ್ಲ, ನಿಸರ್ಗದ ಮೌನದ ಮಾತಿನ ಎದುರು ಕೈ ಕಟ್ಟಿ, ಬಾಯಿ ಮುಚ್ಚಿಕೊಳ್ಳಬೇಕಾದ ಅಪರಾಧಿಗಳು ನಾವು, ನೀವು ಎಲ್ಲರೂ.

ಆಗಸ್ಟ್ ತಿಂಗಳು ಕಳೆದು ಸೆಪ್ಟಂಬರ್ ಕಡೆಗೆ ಸಾಗುತ್ತಿದ್ದೇವೆ. ಜುಲೈನಲ್ಲಿ ಒಂದು ವಾರ ನಿರಂತರ ಮಳೆ ಬಂದದ್ದು ಬಿಟ್ಟರೆ ಮಳೆಗಾಲದ ವಾಡಿಕೆಯ ಮಳೆ ಎಲ್ಲೂ ಆಗಿಲ್ಲ. ಇನ್ನು ಎಲ್ಲಾದರೂ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಸ್ವಲ್ಪ ಮಳೆ ಸುರಿಯಲೂ ಬಹುದು, ಬಾರದೆಯೂ ಇರಬಹುದು. ಅಂತೂ, ಇಂತೂ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನೀರಿನ ಸಮಸ್ಯೆಯಾಗಿ ಬರಗಾಲದ ದಿನಗಳಿಗೆ ಆಮಂತ್ರಣ ನೀಡಲಾಗಿದೆ. ಬರಭಾಗ್ಯದ ಸಂಕಟಗಳನ್ನು ಅನುಭವಿಸಲೇಬೇಕು.

ಯಾಕೆ ಮಳೆ ಮಾಯವಾಯಿತು? ಬರಬೇಕಿತ್ತಲ್ವಾ? ಬರದಂತೆ ಮಾಡಿದವರು ಯಾರು? ನಾವೆಲ್ಲರೂ ಅಪರಾಧಿಗಳೇ ಆಗಿರುವಾಗ ಪ್ರಶ್ನಿಸುವುದಾದರೂ ಯಾರನ್ನು? ಉತ್ತರಿಸುವವರಾದರೂ ಯಾರು?

ಇಂದು ಮಳೆ ಬರುವುದೋ..ನಾಳೆ ಬರುವುದೋ ಎಂದು ಆಕಾಶದ ಕಡೆ ನೋಡುವ ನಾವೇ ಉತ್ತರಿಸಲಾಗದ ಅಪರಾಧಿಗಳಂತೆ ತಲೆ ತಗ್ಗಿಸಬೇಕಾಗುತ್ತದೆ.

ಕಳೆದ ಹತ್ತು ವರ್ಷಗಳಿಂದ ಮಳೆಯ ಒಂದು ಲೆಕ್ಕಾಚಾರ ಹಾಕುತ್ತಾ ಬಂದರೆ ಜೂನ್ನಿಂದ ಅಕ್ಟೋಬರ್ ತನಕ ಮಳೆಯ ಸುರಿಯುವಿಕೆಯಲ್ಲಿ ಏರು ಪೇರು ಆಗುತ್ತಾ ಬರುತಿತ್ತು. ಅತಿವೃಷ್ಟಿ, ಅನಾವೃಷ್ಟಿ ಎಂಬ ಹೊಸ ‘ಸೃಷ್ಟಿ’ ಗಳ ಅನಾವರಣ ಆಗುತ್ತಲೇ ಇತ್ತು. ಯಾಕೆ ಹಿಂದೆ ಮಳೆಗಾಲ ಚೆನ್ನಾಗಿಯೇ ಇತ್ತು, ಯಾಕೆ ಈಗ ಹತ್ತು ವರ್ಷಗಳಲ್ಲಿ ಮಳೆಗಾಲದ (ಆ)ವೇಷ ಬದಲಾಗುತ್ತಾ ಬಂತು ಎಂದು ಯೋಚಿಸಲು ಯಾರಿಗೂ ಪುರುಸೊತ್ತೇ ಇರಲಿಲ್ಲ. ಯಾಕೆಂದರೆ ಅದು ನಮ್ಮ ಸೊತ್ತು ಅಲ್ಲ ಪರ ಸೊತ್ತು ಆಗಿರುವುದರಿಂದ ಅರಿಯುವ ಹೊತ್ತು ಇರಲಿಲ್ಲ, ಹೊತ್ತು ಇದ್ದವರಿಗೆ ಗೊತ್ತು ಇರಲಿಲ್ಲ, ಗೊತ್ತು ಇದ್ದವರಿಗೆ ಹೊತ್ತು ಇರಲಿಲ್ಲ. ಒಟ್ಟಾರೆ ಆಧುನಿಕ ಸಾಮ್ರಾಜ್ಯದ ಜನತೆಗೆ ಬೇಕಿರುವುದು ಪ್ರಕೃತಿಯ ನೆಮ್ಮದಿ, ಒಳಿತು, ಸಂರಕ್ಷಣೆಯಲ್ಲ.

ಜಾತಿ, ಧರ್ಮ, ಪಕ್ಷ, ರಾಜಕೀಯ..ಈ ಘನಾಂದಾರಿ ಕೆಲಸಗಳಲ್ಲೇ ಕಚ್ಚಾಡಿಕೊಳ್ಳುವವರಿಗೆ ಅದಕ್ಕೇ ಹೊತ್ತು ಸಾಕಾಗದವರು ಇನ್ನು ಪರಿಸರ, ಮಳೆ, ನದಿ, ಕಾಡು ಅಂತ ಎಲ್ಲಿ, ಯಾವಾಗ ಜಾಗೃತರಾದಾರು? ಇನ್ನು ನಮ್ಮನ್ನಾಳುವ ದಿಗ್ಗಜರಿಗೆ ಪರಿಸರ, ಪ್ರಕೃತಿ ಎಲ್ಲವೂ ಧನ ದಂಧೆಯ ಸರಕು ಅಷ್ಟೇ ಹೊರತು ಬೇರೇನಲ್ಲ. ‘ಅಭಿವೃದ್ಧಿ’ ಎಂಬ ನೆಪದಲ್ಲಿ ಪಶ್ಚಿಮ ಘಟ್ಟವನ್ನು, ನದಿಗಳನ್ನು ನಾಶ ಮಾಡಿಕೊಂಡು ಬಂದದ್ದೇ ಹೊರತು ಸಂರಕ್ಷಣೆಯ ವಿಚಾರ ಮಾತ್ರ ಶೂನ್ಯ. ಅವರಿಗೆ ವಿಪರೀತ ಮಳೆ ಬಂದು ದುರಂತಗಳೇ ಆದರೂ, ಮಳೆ ಬಾರದೇ ಬರಗಾಲವಾದರೂ ಖುಷಿಗಳ ಬಂಪರ್.. ಎರಡರಲ್ಲೂ ಪರಿಹಾರ ಎಂಬ ಧನ ಗಂಟು ಮೂಟೆಗಳಲ್ಲಿ ಷೇರು ಮತ್ತು ಕಾರುಬಾರು.

ಪಶ್ಚಿಮ ಘಟ್ಟ ಎಂಬುದು ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ಎಲ್ಲಾ ನದಿಗಳ ಉಗಮ ಸ್ಥಾನಗಳೂ ಇದೇ ಪಶ್ಚಿಮ ಘಟ್ಟದಲ್ಲಿ ಇರುವುದು. ಇಂತಹ ನದಿ ಮೂಲಗಳ ಸೂಕ್ಷ್ಮ ಜೈವಿಕ ಪ್ರದೇಶಗಳ ಮೇಲೆ ಕಳೆದ 10 ವರ್ಷಗಳಿಂದ ಬೇರೆ ಬೇರೆ ಪರಿಸರ ವಿನಾಶಕ, ಅಸಂಬದ್ಧ, ಅವೈಜ್ಞಾನಿಕ ಯೋಜನೆಗಳಿಂದ ಮಾರಣಾಂತಿಕ ಏಟು ಬೀಳುತ್ತಾ ಬಂದಿದೆ. ಪಶ್ಚಿಮ ಘಟ್ಟದ ಅರಣ್ಯ ಒತ್ತುವರಿ ಮಾಡಿ ಖಾಸಗಿ ತೋಟ, ಅಕ್ರಮ ರೆಸಾರ್ಟ್, ಗಣಿಗಾರಿಕೆ, ನದಿ ತಿರುವು, ವೃಕ್ಷ ರಾಕ್ಷಸರ ಟಿಂಬರ್ ಮಾಫಿಯಾ, ಕೃತಕ ಕಾಡ್ಗಿಚ್ಚು ಹೀಗೆ ಬೇರೆ ಬೇರೆ ಕಾರಣಗಳಲ್ಲಿ ಪಶ್ಚಿಮ ಘಟ್ಟದ ಮಳೆ (ಶೋಲಾ) ಕಾಡಿಗೆ ಸಹಿಸಲಾಗದ ಗೀರು ಗಾಯಗಳು ಆಗುತ್ತಾ ಬಂದಿರುತ್ತದೆ.

ಮಳೆ ನೀರನ್ನು ತನ್ನೊಡಲ ಒಳಗೆ ಬಚ್ಚಿಟ್ಟುಕೊಂಡು ವರ್ಷ ಪೂರ್ತಿ ಹೊಳೆಗಳನ್ನು ಜೀವಂತವಾಗಿ ಇಟ್ಟುಕೊಳ್ಳುವ ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾರಣ್ಯವನ್ನು ನಿರ್ದಾಕ್ಷಿಣ್ಯವಾಗಿ ವೋಟು-ನೋಟು-ಸೀಟು ಗಳಿಸುವ ಯಾವುದೋ ಅಸಂಬದ್ಧ ಯೋಜನೆಗಾಗಿ ಬಲಿ ಕೊಡುತ್ತಾ ಬಂದರೆ ಮಳೆ ಮಾಯವಾಗಿ ಇನ್ನೇನು ಆಗಲು ಸಾಧ್ಯ? ಕಳೆದ 5 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ಭೂಕುಸಿತ, ಜಲ ಪ್ರವಾಹಗಳು ಆದಾಗ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಪಶ್ಚಿಮ ಘಟ್ಟದ ನಿರಂತರ ಫಲಾನುಭವಿಗಳಾದ ಈ ರಾಜ್ಯದ ಜನತೆ ಯೋಚಿಸಬೇಕಿತ್ತು.

ಈ ಪ್ರಾಕೃತಿಕ ದುರಂತಗಳ ಹಿಂದೆ ಏನಿದೆ ಮತ್ತು ಇದರಿಂದ ಮುಂದೆ ಏನಾಗಲಿದೆ? ಎಂದು. ಭೂಕುಸಿತ, ಜಲ ಪ್ರವಾಹ ಆಗುತ್ತಲೇ ಇದೆ, ಅದರ ನಂತರ ಬರಗಾಲದ ದಿನಗಳೂ ಮುಂದುವರಿಯುತ್ತಲೇ ಇದೆ. ಅದರ ಬಗ್ಗೆ ಯಾರಿಗೂ ಚಿಂತೆ ಆಗಲಿ, ಚಿಂತನೆ ಮಾಡಲು ಹೊತ್ತೇ ಸಿಗುವುದಿಲ್ಲ. ಪಶ್ಚಿಮ ಘಟ್ಟದ ಮಳೆ ನೀರು ಇಂಗಿತ ಆಗುವ ಹುಲ್ಲಗಾವಲು ಮತ್ತು ಶೋಲಾ ಅಡವಿಯು ಭೂಕುಸಿತವಾಗಿ ಬಹಳಷ್ಟು ನೀರಿನ ಒರತೆ ಪ್ರದೇಶಗಳು ಬರಿದಾಗಿ ಎಷ್ಟೇ ಮಳೆ ಸುರಿದರೂ ಹೊಳೆಗಳ ಸರಾಸರಿ ನೀರು ಮುಂದಿನ ಮಳೆಗಾಲಕ್ಕೆ ಸಮತೋಲನವಾಗದೆ ಪಶ್ಚಿಮ ಘಟ್ಟದಲ್ಲಿ ಆಗಲಿ, ಸಾಗರ, ಸಮುದ್ರಗಳಲ್ಲಿ ಆಗಲಿ ನೈಸರ್ಗಿಕ ಅಸಮತೋಲನ ಉಂಟಾಗಿ ಮಳೆ ಜಾಸ್ತಿ ಬಂದರೂ ನೀರಿನ ಶೇಖರಣೆಯಲ್ಲಿ ವ್ಯತ್ಯಯ ಆಗುತ್ತಾ ಬಂದಿರುವ ಕಾರಣ ಮಳೆ ಕಡಿಮೆಯಾಗುತ್ತಿದೆ.

ಸಾಗರ, ಸಮುದ್ರಗಳಲ್ಲಿ ನಗರದ ತ್ಯಾಜ್ಯ ನೀರು, ಕಾರ್ಖಾನೆಗಳ ವಿಷಮಯ ನೀರು ಸೇರಿ ಸಮುದ್ರ ನೀರಿನ ಒಳಮೈ ಮತ್ತು ಮೇಲ್ಮೈನಲ್ಲಿ ಶಾಖ ಹೆಚ್ಚಾಗಿ ಮಳೆಗಾಲ ತನ್ನ ವ್ಯಾಪ್ತಿಯನ್ನು ಬದಲಾಯಿಸುತ್ತಿರುತ್ತದೆ. ಪಶ್ಚಿಮ ಘಟ್ಟದಲ್ಲೂ ನಿರಂತರ ಭೂಕುಸಿತವಾಗಿ ಸೂರ್ಯನ ಕಿರಣಗಳಿಂದ ಮುಚ್ಚಿರುವ ಮಳೆ ನೀರಿನ ಇಂಗಿತ ಪ್ರದೇಶಗಳು ಓಪನ್ ಆಗಿ ಮಳೆ ನೀರು ಶೋಲಾ ಅಡವಿಯ ಒಳಗಿನ ಶಿಲಾ ಪದರಗಳಲ್ಲಿ ಶೇಖರಣೆ ಆಗದೇ ನೇರವಾಗಿ ಹರಿದು ಹೋಗುವ ಕಾರಣ ಮಳೆಗಾಲದ ಚೌಕಟ್ಟು ಕಿರಿದಾಗುತ್ತಿದೆ.

ಪಶ್ಚಿಮ ಘಟ್ಟದ ಮೇಲೆ ಇರುವ ಹುಲ್ಲಗಾವಲು ನಮ್ಮ ಶರೀರಕ್ಕೆ ಚರ್ಮ ಹೇಗೆ ರಕ್ಷಣೆಯೋ ಅದೇ ರೀತಿ ಬೆಟ್ಟದ ಹುಲ್ಲಿನ ಹೊದಿಕೆ ಅಲ್ಲಿಗೆ ಭದ್ರತೆ. ಆದರೆ ಈಗ ಕೆಲವು ವರ್ಷಗಳಿಂದ ಮಾನವ ನಿರ್ಮಿತ ನಿರಂತರ ಕಾಡ್ಗಿಚ್ಚು ಕೂಡಾ ಮಳೆ ನೀರು ಸಂಗ್ರಹಕ್ಕೆ ಅಡ್ಡಿಯಾಗುತ್ತಿದೆ.

ಒಟ್ಟಾರೆ ಮಾನವ ನಿರ್ಮಿತ ಅನಾಹುತಕ್ಕೆ ಮಳೆಗೆ ಬೈದರೆ ಆಗುತ್ತದೆಯೇ? ನಮ್ಮ ರಾಜಕೀಯ ವ್ಯವಸ್ಥೆ ಇಂತಹ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುವ ಅಸಂಬದ್ಧ ಯೋಜನೆಗಳನ್ನು ಮಾಡುವಾಗ ಪ್ರಜೆಗಳಾದ ನಾವು ಎಷ್ಟು ಮಾತಾಡಿದ್ದೇವೆ? ಎಷ್ಟು ವಿರೋಧ ವ್ಯಕ್ತ ಪಡಿಸಿದ್ದೇವೆ? ಎಷ್ಟು ಪ್ರಶ್ನಿಸಿದ್ದೇವೆ?

ಪ್ರಕೃತಿ ಅದರ ಪಾಡಿಗೆ ನಮ್ಮ ನೆಮ್ಮದಿಗೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಇಂತಹ ಪ್ರಕೃತಿಗೆ (ತಾಯಿ ಸಮಾನವಾದ ದೇವ ಸ್ವರೂಪಿ) ನಾವೆಷ್ಟು ದೌರ್ಜನ್ಯ, ದಬ್ಬಾಳಿಕೆ, ವಿಕೃತಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇವೆ? ತಾಯಿಯ ವೇದನೆ, ರೋದನ, ಕಣ್ಣೀರಿಗೆ ಅನುಕಂಪ ತೋರದೆ ಇದ್ದರೆ ಅದರ ಪ್ರತಿಫಲ, ಪ್ರತೀಕಾರವನ್ನು ಅನುಭವಿಸಲೇಬೇಕು. ತಾಯಿ ಶಾಪದಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಅಸಾಧ್ಯ.

ಮುಂದಿನ ಬರಗಾಲದ ಆಮಂತ್ರಣ ಈಗಾಗಲೇ ಲಭಿಸಿದೆ. ಕಾರಣ ಹೇಳದೇ (ವೇದನೆಯ) ತೋರಣ ಕಟ್ಟೋಣ.

ಮಳೆ ಕಾಡು ಮತ್ತು ನದಿ ಮೂಲಗಳ ಮಹತ್ವ - ಅಗತ್ಯಗಳನ್ನು ಅರಿಯದೇ ಹೋದರೆ ಪಶ್ಚಿಮ ಘಟ್ಟದ ಸತ್ಯ-ಸತ್ವವನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಬರಗಾಲದಂತಹ ಮತ್ತು ಇನ್ನಿತರ ನೈಸರ್ಗಿಕ ದುರಂತಗಳ ಸರಮಾಲೆಯ ಸನ್ಮಾನವನ್ನು ಖುಷಿ ಇಲ್ಲದಿದ್ದರೂ ಮಾಡಿಸಿಕೊಳ್ಳಲೇಬೇಕಾಗುತ್ತದೆ. ಪ್ರಕೃತಿಯ ಸತ್ವದ ಅಂತರ್ಸತ್ಯಗಳನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಸಹಜ ಚಿತ್ರಗಳು ಕೂಡಾ ವಿಚಿತ್ರವಾಗುತ್ತವೆ.

ಅರ್ಥ ಮಾಡಿ ಕೊಳ್ಳಬೇಕಾದವರು ನಾವು...ನೀವು.....ಎಲ್ಲರೂ....

share
-ದಿನೇಶ್ ಹೊಳ್ಳ, ಪರಿಸರವಾದಿ
-ದಿನೇಶ್ ಹೊಳ್ಳ, ಪರಿಸರವಾದಿ
Next Story
X