ಲಾಡ್ರ್ಸ್ ಮೈದಾನದಲ್ಲಿ ಆರು ನಿಮಿಷಗಳ ಪ್ರಹಸನ; ಗಿಲ್ ತಾಳ್ಮೆ ಕಳೆದುಕೊಂಡಿದ್ದೇಕೆ?

PC | timesofindia
ಲಾಡ್ರ್ಸ್ : ಒಂದು ಶತಕ, ಎರಡು ಅದ್ಭುತ ಅರ್ಧಶತಕಗಳು, ಒಂದು ಒಳ್ಳೆಯ ರನೌಟ್ ಹಾಗೂ ಅತ್ಯುತ್ತಮ ಬೌಲಿಂಗ್ ಹೀಗೆ ಹಲವು ನಾಟಕೀಯ ಕ್ಷಣಗಳಿಗೆ ಇಂಗ್ಲೆಂಡ್ ವಿರುದ್ಧದ ಲಾಡ್ರ್ಸ್ ಟೆಸ್ಟ್ ಸಾಕ್ಷಿಯಾಯಿತು. ಆದರೆ ಮೂರನೇ ದಿನದಾಟ ಮುಕ್ತಾಯದ ಹಂತದ ಕೊನೆಯ ಆರು ನಿಮಿಷ ಮತ್ತೊಂದು ವಿಶೇಷ ಪ್ರಸಹನವೂ ಮೈದಾನದಲ್ಲಿ ಘಟಿಸಿತು. ಇಂಗ್ಲೆಂಡ್ನ ಆರಂಭಿಕ ಆಟಗಾರ ಝೆಕ್ ಕ್ರಾವ್ಲೆ ಎದುರು, ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಆವೇಶದ ಸ್ಥಿತಿಯಲ್ಲಿ ಇರುವ ಹಾಗೂ ಭಾರತೀಯ ಆಟಗಾರರು ಬಹುತೇಕ ಅವರನ್ನು ಸುತ್ತುವರಿದ ದೃಶ್ಯ ಕುತೂಹಲಕ್ಕೆ ಕಾರಣವಾಗಿದೆ.
ಅಂಪೈರ್ ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ವೇಳೆಗಾಗಲೇ ಗಿಲ್ ಅವರ ನಾಟಕೀಯ ವರ್ತನೆಯಿಂದಾಗಿ ವೈದ್ಯರನ್ನೂ ಕರೆಸಲಾಯಿತು. ಚಪ್ಪಾಳೆ ಹೊಡೆದು ಬಳಿಕ ಕ್ರಾವ್ಲೆ ವಿರುದ್ಧ ಹರಿಹಾಯ್ದ ಗಿಲ್ ಇಂಪ್ಯಾಕ್ಟ್ ಪ್ಲೇಯರ್ ಸಂಜ್ಞೆ ಮಾಡಿದರು. ಆಕ್ರಮಣಕಾರಿ ಸಂಜ್ಞೆಗಳ ಮೂಲಕ ವಾಗ್ದಾಳಿ ನಡೆಸುವುದು ಕಂಡುಬಂತು.
ಆಗ ಬಳಸಿದ ನಾಲ್ಕು ಪದಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗಿಲ್ ಕೋಪದ ನಡುವೆಯೇ ಮತ್ತೊಂದು ಓವರ್ ಆಡಲು ಪೆವಿಲಿಯನ್ ಕಡೆಯಿಂದ ಬಂದ ಸೂಚನೆಯಂತೆ ಬಲಗೈ ಆಟಗಾರ ನಿರಾಕರಿಸಿದರು. ಇದರಲ್ಲಿ ಆಟಗಾರ ಯಶಸ್ವಿಯಾದಾಗ ಜಸ್ಪ್ರೀತ್ ಬೂಮ್ರಾ ಕೂಡಾ ಕೋಪಗೊಂಡು ದಿನದ ಕೊನೆಯ ಎಸೆತದ ವೇಳೆ ರನ್ ಅಪ್ನ ತುದಿಯಲ್ಲಿ ನಿಂತುಕೊಂಡರು.
ಕೊನೆಯ ಎಸೆತವನ್ನು ಅದ್ಭುತವಾಗಿ ಬೌಲಿಂಗ್ ಮಾಡಿದರೂ ಕ್ರಾವ್ಲೆ ಉಳಿದುಕೊಂಡರು. ದಿನದ ಆಟದ ಅಂತ್ಯದ ಸಂಕೇತವಾಗಿ ಅಂಪೈರ್ ಬೇಲ್ಸ್ ಹಾರಿಸಿದ ತಕ್ಷಣವೇ ಆರಂಭಿಕ ಬ್ಯಾಟ್ಸ್ ಮನ್ ಡ್ರೆಸ್ಸಿಂಗ್ ರೂಂ ಕಡೆಗೆ ತೆರಳಿದರು. ಉಭಯ ತಂಡಗಳು ಸರಣಿಯ ಮೊದಲ ಎರಡು ಪಂದ್ಯಗಳ ಪೈಕಿ ತಲಾ ಒಂದನ್ನು ಗೆದ್ದಿದ್ದು, ಮೂರನೇ ಟೆಸ್ಟ್ ನ ಮೂರನೇ ದಿನದ ಅಂತ್ಯ ಇಂಥ ನಾಟಕೀಯ ಘಟನೆಗೆ ಸಾಕ್ಷಿಯಾಯಿತು.
ಈ ಘಟನೆಗೆ ಕಾರಣವನ್ನು ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಬಿಚ್ಚಿಟ್ಟರು. "ಒಬ್ಬ ಆರಂಭಿಕ ಆಟಗಾರನಾಗಿ ಕ್ರಾವ್ಲೆ ಏನು ಮಾಡುತ್ತಿದ್ದರು ಎನ್ನುವುದನ್ನು ನಾನು ಇದನ್ನು ಅರ್ಥ ಮಾಡಿಕೊಳ್ಳಬಲ್ಲೆ; ನಾವು ಆರು ನಿಮಿಷದಲ್ಲಿ ಎರಡು ಓವರ್ ಬೌಲಿಂಗ್ ಮಾಡಲು ಬಯಸಿದ್ದೆವು. ಆಗ ನಾಟಕೀಯ ಸನ್ನಿವೇಶ ಎದುರಾಯಿತು. ಎಲ್ಲರೂ ಉದ್ರಿಕ್ತರಾದರು" ಎಂದು ವಿವರಿಸಿದ್ದಾರೆ.
ಅತಿಥೇಯರ ತಂಡದಲ್ಲಿ ಕೋಚಿಂಗ್ ವ್ಯವಸ್ಥೆಯ ಟಿಮ್ ಸೌಥಿ ಈ ಬಗ್ಗೆ ಹೇಳಿಕೆ ನೀಡಿ, ಇದು ಆಟದ ಒಂದು ಅಂಗ. ಉಭಯ ತಂಡಗಳು ಸರಣಿಯಲ್ಲಿ ಇದುವರೆಗೂ ಒಳ್ಳೆಯ ಕ್ರೀಡಾಸ್ಫೂರ್ತಿ ಮೆರೆದಿವೆ ಎಂದಿದ್ದಾರೆ.







