ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ: 34 ಹೆಸರಿನ ಪಟ್ಟಿಗೆ ಸಿಎಂ ಅಧಿಕೃತ ಅಂಕಿತ

ಬೆಂಗಳೂರು : ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಅಂಕಿತ ಹಾಕಿದ್ದಾರೆ. ಎಐಸಿಸಿ ರವಾನಿಸಿದ್ದ 39 ಮಂದಿಯಿದ್ದ ಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿರುವ ಮುಖ್ಯಮಂತ್ರಿ, 34 ಮಂದಿಯ ಹೆಸರಿನ ಪಟ್ಟಿಯನ್ನು ಅಂತಿಮಗೊಳಿಸಿ ಅಂಕಿತ ಹಾಕಿದ್ದಾರೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿ ರವಾನೆಯಾಗಿದೆ.
ಎಐಸಿಸಿ ಬುಧವಾರ ಪ್ರಕಟ ಮಾಡಿದ್ದ ಪಟ್ಟಿಯಲ್ಲಿ ಇಲ್ಲದ ಎಚ್.ಡಿ ಗಣೇಶ್ ರನ್ನು ಮೈಸೂರು ಪೆಯಿಂಟ್ಸ್ ಮತ್ತು ವಾರ್ನಿಷ್ ಲಿ. ಅಧ್ಯಕ್ಷರಾಗಿ ಹಾಗೂ ನಿಕೇತ್ ರಾಜ್ ಎಂ. ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ನಿಗಮ, ಮಂಡಳಿಗಳ ನೂತನ ಅಧ್ಯಕ್ಷರ ವಿವರ :
ಕರಾವಳಿ ಅಭಿವೃದ್ಧಿ ಪ್ರಾಧಿಕಾರ-ಎಂ.ಎ.ಗಫೂರ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ)-ಕೆ.ಹರೀಶ್ ಕುಮಾರ್, ಕೇಂದ್ರ ಪರಿಹಾರ ಸಮಿತಿ-ಆಗಾ ಸುಲ್ತಾನ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ-ಲಾವಣ್ಯಾ ಬಲ್ಲಾಳ್ ಜೈನ್.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗ-ಪಿ.ರಘು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ-ಶಿವಲೀಲಾ ವಿನಯ್ ಕುಲಕರ್ಣಿ, ಜೈವಿಕ ವೈವಿಧ್ಯ ಮಂಡಳಿ-ವಡ್ನಾಳ್ ಜಗದೀಶ್, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ-ಮುರಳಿ ಅಶೋಕ್ ಸಾಲಪ್ಪ.
ರಾಜ್ಯ ಎಸ್.ಸಿ. ಮತ್ತು ಎಸ್.ಟಿ. ಆಯೋಗ-ಡಾ.ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿ-ಕರ್ನಲ್ ಮಲ್ಲಿಕಾರ್ಜುನ್, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ-ಡಾ.ಬಿ.ಸಿ.ಮುದ್ದುಗಂಗಾಧರ್, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ-ಶಾಲೆಟ್ ಪಿಂಟೋ, ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ-ಮಾರಿಯೋಜಿ ರಾವ್.
ರಾಜ್ಯ ಗೋದಾಮು ನಿಗಮ-ಎನ್.ಸಂಪಂಗಿ, ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ.-ವೈ.ಸಯೀದ್ ಅಹ್ಮದ್, ಕಾಡುಗೊಲ್ಲ ಅಭಿವೃದ್ಧಿ ನಿಗಮ-ಮಹೇಶ್ ಎಂ., ಬಯಲುಸೀಮೆ ಅಭಿವೃದ್ಧಿ ಮಂಡಳಿ(ಚಿತ್ರದುರ್ಗ)-ಎಚ್.ಬಿ.ಮಂಜಪ್ಪ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ-ಭರಮಣ್ಣ ಉಪ್ಪಾರ.
ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ-ಎಸ್.ಜಿ.ನಂಜಯ್ಯನಮಠ, ರಾಜ್ಯ ಬೀಜ ಅಭಿವೃದ್ಧಿ ನಿಗಮ-ಆಂಜನಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ-ಅರುಣ್ ಕುಮಾರ್ ಪಾಟೀಲ್, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ-ಕಲಬುರಗಿ)-ಬಾಬು ಹೊನ್ನ ನಾಯ್ಕ್, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಬೆಳಗಾವಿ)-ಯುವರಾಜ್ ಕದಂ.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ-ಪ್ರವೀಣ್ ಕುಮಾರ್ ಪಾಟೀಲ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ-ಮಂಜುನಾಥ ಪೂಜಾರಿ, ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮ-ಎಂ.ಎಸ್.ಮುತ್ತುರಾಜ್.
ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ-ನಂಜಪ್ಪ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ-ವಿಶ್ವಾಸ್ ಕುಮಾರ್ ದಾಸ್, ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ-ಎಸ್.ಗಂಗಾಧರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ- ಪಟೇಲ್ ಶಿವಣ್ಣ,
ಕುಂಬಾರ ಅಭಿವೃದ್ಧಿ ನಿಗಮ-ಡಾ.ಶ್ರೀನಿವಾಸ ವೇಲು, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ-ಟಿ.ಎಂ.ಶಾಹಿದ್ ತೆಕ್ಕಿಲ್, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ-ಚೇತನ್ ಕೆ. ಗೌಡ, ಎಚ್.ಡಿ.ಗಣೇಶ್- ಮೈಸೂರು ಪೆಯಿಂಟ್ಸ್ ಮತ್ತು ವಾರ್ನಿಷ್ ಲಿ., ನಿಕೇತ್ ರಾಜ್ ಎಂ.- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.







