Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಬಾಗಲಕೋಟೆ ಉಪಚುನಾವಣೆ : ʼವಾರ್ತಾಭಾರತಿʼ...

ಬಾಗಲಕೋಟೆ ಉಪಚುನಾವಣೆ : ʼವಾರ್ತಾಭಾರತಿʼ - 'ಸಂಕಲ್ಪ್' ಮತದಾನೋತ್ತರ ಸಮೀಕ್ಷೆ ಹೇಳುವುದೇನು?

ವಾರ್ತಾಭಾರತಿವಾರ್ತಾಭಾರತಿ29 April 2026 8:33 PM IST
share
ಬಾಗಲಕೋಟೆ ಉಪಚುನಾವಣೆ : ʼವಾರ್ತಾಭಾರತಿʼ - ಸಂಕಲ್ಪ್  ಮತದಾನೋತ್ತರ ಸಮೀಕ್ಷೆ ಹೇಳುವುದೇನು?

ವಾರ್ತಾಭಾರತಿ ಹಾಗು ಬೆಂಗಳೂರಿನ ರಾಜಕೀಯ ಸಂಶೋಧನಾ ಸಂಸ್ಥೆ 'ಸಂಕಲ್ಪ್' ಜಂಟಿಯಾಗಿ ನಡೆಸಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾನೋತ್ತರ ಸಮೀಕ್ಷೆಯಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು ಇಲ್ಲಿವೆ :

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಾಲಿ ಶಾಸಕರಿದ್ದ ಕಾಂಗ್ರೆಸ್ ಗೆ ಬಿಜೆಪಿ ತೀವ್ರ ಪೈಪೋಟಿ ನೀಡಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ 5,878 ಮತಗಳ ಸಣ್ಣ ಅಂತರದಿಂದ ಈ ಕ್ಷೇತ್ರವನ್ನು ಗೆದ್ದಿದ್ದ ಕಾಂಗ್ರೆಸ್ ಗೆ ಈಗ ಸೀಟು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ಪಡೆದ ಮತಗಳಲ್ಲಿ 12% ದಷ್ಟು ಬಿಜೆಪಿಗೆ ಹೋಗಲಿದೆ ಎಂದು ಹೇಳುತ್ತಿದೆ ಸಮೀಕ್ಷೆ. ಇದು ಕಾಂಗ್ರೆಸ್ ಗೆ ಶುಭ ಸುದ್ದಿಯಲ್ಲ. ಕ್ಷೇತ್ರದಲ್ಲಿ ಲಿಂಗಾಯತರು ಮತ್ತೆ ಬಿಜೆಪಿಯತ್ತ ವಾಲಿರುವುದು ಕಾಣುತ್ತಿದೆ.

ಪುರುಷರಲ್ಲಿ 50.8% ಮತದಾರರು ಕಾಂಗ್ರೆಸ್ ಕಡೆ ಹೋದರೆ 48.1% ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪುರುಷ ಮತದಾರರಲ್ಲಿ 1.1% ರಷ್ಟು ಮಂದಿ ಇತರರನ್ನು ಬೆಂಬಲಿಸಿದ್ದಾರೆ. ಅಚ್ಚರಿ ಅಂದ್ರ್ರೆ ಮಹಿಳೆಯರಲ್ಲಿ 52.0% ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು, 37.7% ಮಹಿಳಾ ಮತದಾರರು ಮಾತ್ರ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಮಹಿಳೆಯರ 10.3% ಮತ ಇತರರಿಗೆ ಹೋಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಹೋಲಿಸಿದರೆ ಬಾಗಲಕೋಟೆಯಲ್ಲಿ ಸ್ತ್ರೀ ಶಕ್ತಿ ಬಿಜೆಪಿಗೆ ಒಲಿದಿದೆ. ಇದೇ ಬಿಜೆಪಿಗೆ ಬಾಗಲಕೋಟೆಯಲ್ಲಿ ಮುನ್ನಡೆ ನೀಡುವ ಪ್ರಮುಖ ಅಂಶವಾಗುವ ಸಾಧ್ಯತೆಯಾಗಿಯೂ ಕಾಣುತ್ತಿದೆ.

18 ರಿಂದ 25 ವರ್ಷದ ಮತದಾರರಲ್ಲಿ 52.7% ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ 35.5% ಮಂದಿ ಮಾತ್ರ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಇತರರಿಗೆ 11.8% ಈ ವರ್ಗದ ಮತಗಳು ಹೋಗಿವೆ. ಅಂದರೆ ಯುವ ಮತದಾರರು ಇಲ್ಲಿ ಬಿಜೆಪಿ ಕಡೆ ವಾಲಿದ್ದಾರೆ. 26 ರಿಂದ 40 ವರ್ಷದವರು ಒಟ್ಟು ಮತದಾರರಲ್ಲಿ ಅತಿದೊಡ್ಡ ಗುಂಪು. ಇವರಲ್ಲೂ ಬಿಜೆಪಿ ಮುನ್ನಡೆ ಪಡೆದಿದೆ. ಇವರಲ್ಲಿ 54.0% ಮಂದಿ ಬಿಜೆಪಿ ಜೊತೆ ಹೋಗಿದ್ದರೆ, 41.5% ರಷ್ಟು ಮಂದಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ.

26 ರಿಂದ 40 ವರ್ಷದ ಮತದಾರರಲ್ಲಿ 4.5% ಮಂದಿ ಇತರರನ್ನು ಬೆಂಬಲಿಸಿದ್ದಾರೆ. 41 ರಿಂದ 60 ವರ್ಷದ ಮತದಾರರಲ್ಲಿ ಮಾತ್ರ ಕಾಂಗ್ರೆಸ್ ದೊಡ್ಡ ಮುನ್ನಡೆ ಗಳಿಸಿದೆ. ಇದರಲ್ಲಿ ದಿವಂಗತ ಎಚ್ ವೈ ಮೇಟಿ ಅವರ ಅಭಿಮಾನಿಗಳು ಹಾಗು ಅನುಕಂಪದ ಅಂಶ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರಬಹುದು. ಇವರಲ್ಲಿ 57.4% ಮತಗಳನ್ನು ಕಾಂಗ್ರೆಸ್ ಪಡೆದಿದೆ, ಆ ವರ್ಗದಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣ 41.4%. 60 ವರ್ಷ ದಾಟಿದ ಮತದಾರರಲ್ಲಿ 52.7% ಮತಗಳು ಕಾಂಗ್ರೆಸ್ ಗೆ ಹೋಗಿದ್ದರೆ, 47.3% ಮತಗಳು ಬಿಜೆಪಿಗೆ ಹೋಗಿವೆ.

2023 ರಲ್ಲಿ ಗಳಿಸಿದ ಮತಗಳ ಪೈಕಿ ಕಾಂಗ್ರೆಸ್ 87% ಮತಗಳನ್ನು ಉಳಿಸಿಕೊಂಡಿದೆ. ಅದರ 12% ಮತಗಳು ಬಿಜೆಪಿ ಕಡೆ ಹೋಗಿವೆ. 1% ಇತರರಿಗೆ ಹೋಗಿವೆ. ಆದರೆ ಬಿಜೆಪಿ 2023 ರ ಮತಗಳಲ್ಲಿ 92% ವನ್ನು ಉಳಿಸಿಕೊಂಡಿದೆ. ಅದರ 7% ಮತಗಳು ಮಾತ್ರ ಕಾಂಗ್ರೆಸ್ ಗೆ ಹೋಗಿದೆ. ಅಂದರೆ ದಾವಣಗೆರೆ, ಬಾಗಲಕೋಟೆ ಎರಡೂ ಕಡೆ ಬಿಜೆಪಿ 2023 ರ ಮತ ಪ್ರಮಾಣವನ್ನು ಬಹುತೇಕ ಹಾಗೆ ಉಳಿಸಿಕೊಂಡಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವ 12% ಮತಗಳಲ್ಲಿ 33% ಲಿಂಗಾಯತ, 19% ದಲಿತರು/ಎಸ್ಸಿ, 11% ಬ್ರಾಹ್ಮಣ, 7% ಕುರುಬ ಹಾಗು 30% ಇತರರು. ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗಿರುವ 7% ಮತಗಳಲ್ಲಿ 32% ದಲಿತರು/ಎಸ್ಸಿ, 26% ಲಿಂಗಾಯತ, 7% ಕುರುಬ, 7% ಬ್ರಾಹ್ಮಣ ಹಾಗು 29% ಇತರರು.

► ಕಾಂಗ್ರೆಸ್ ಗೆ ಇವುಗಳಿಂದ ಲಾಭ

- ಮೇಟಿ ನಿಧನದ ಅನುಕಂಪ,

- ಆಡಳಿತ ಪಕ್ಷದ ಕಡೆ ಒಲವು

- ಬಿಜೆಪಿ ಅಭ್ಯರ್ಥಿ ಕುರಿತ ನಿರುತ್ಸಾಹ

► ಬಿಜೆಪಿಗೆ ಇವುಗಳಿಂದ ಲಾಭ

- ಕಾಂಗ್ರೆಸ್ ಸರಕಾರದ ಕುರಿತ ಆಡಳಿತ ವಿರೋಧಿ ಭಾವನೆ

- ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು

- ಯುವಜನತೆ, ಲಿಂಗಾಯತರ ಒಲವು

ಕಾಂಗ್ರೆಸ್ ನ ಉಮೇಶ್ ಮೇಟಿ 43% ರಿಂದ 48% ಹಾಗು ಬಿಜೆಪಿಯ ವೀರಣ್ಣ ಚರಂತಿಮಠ 40% ರಿಂದ 46% ಮತ ಗಳಿಸುವ ಸಾಧ್ಯತೆ ಕಾಣುತ್ತಿದೆ. ಇಲ್ಲಿ ಕಾಂಗ್ರೆಸ್ ಗೆ ಇರುವುದು 2,000 ದಿಂದ 3,500 ಒಳಗಿನ ತೀರಾ ಸಣ್ಣ ಅಂತರದ ಮುನ್ನಡೆ. ಹಾಗಾಗಿ ಇಲ್ಲಿ ಬಿಜೆಪಿ ಈ ಬಾರಿ ನೀಡಿರುವ ಭಾರೀ ಪೈಪೋಟಿ ಫಲಿತಾಂಶದ ದಿನ ಕಾಂಗ್ರೆಸ್ ಗೆ ಆಘಾತ ನೀಡಿದರೆ ಅಚ್ಚರಿಯಿಲ್ಲ.

Tags

Bagalkot BypollSurvey
share
ವಾರ್ತಾಭಾರತಿ
ವಾರ್ತಾಭಾರತಿ
Next Story
X