ಬೆಂಗಳೂರು | ಮೆಟ್ರೋ ಕುರಿತು ಪ್ರಯಾಣಿಕರಲ್ಲಿ ಹೆಚ್ಚು ಒಲವು: ಸಮೀಕ್ಷೆ
![ಬೆಂಗಳೂರು | ಮೆಟ್ರೋ ಕುರಿತು ಪ್ರಯಾಣಿಕರಲ್ಲಿ ಹೆಚ್ಚು ಒಲವು: ಸಮೀಕ್ಷೆ ಬೆಂಗಳೂರು | ಮೆಟ್ರೋ ಕುರಿತು ಪ್ರಯಾಣಿಕರಲ್ಲಿ ಹೆಚ್ಚು ಒಲವು: ಸಮೀಕ್ಷೆ](https://www.varthabharati.in/h-upload/2023/09/04/1187137-namma.webp)
ಬೆಂಗಳೂರು, ಸೆ.4: ನಗರದಲ್ಲಿರುವ ಖಾಸಗಿ ಕಂಪೆನಿಯ ಉದ್ಯೋಗಿಗಳು ತಮ್ಮ ಪ್ರಯಾಣವನ್ನು ಖಾಸಗಿ ವಾಹನಗಳಿಂದ ಮೇಟ್ರೋಗೆ ಬದಲಾಯಿಸಲು ತಯಾರಾಗಿದ್ದಾರೆ ಎಂದು ಬಿ.ಪ್ಯಾಕ್ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಂತ ಸಾರಿಗೆ ಅಭಿಯಾನದ ಮೂಲಕ ಸರ್ವೇ ನಡೆಸಿ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ವಾರಕ್ಕೆ ಕನಿಷ್ಠ ಎರಡು ಬಾರಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ನಗರದ ಪುಯಾಣಿಕರನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಭಿಯಾನವನ್ನೂ ನಡೆಸಲಾಗುತ್ತಿದೆ ಎಂದರು.
ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ಮಾರ್ಗಗಳು ಮುಂದಿನ ವರ್ಷ ಜನವರಿಯಲ್ಲಿ ಕಾರ್ಯಾರಂಭಿಸುವ ನಿರೀಕ್ಷೆಯಿದ್ದು, ನಗರದಲ್ಲಿ ಮೆಟ್ರೋ ಜಾಲ-93 ಕಿ.ಮೀ.ಗೆ ಹೆಚ್ಚಾಗಲಿದೆ. ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪುಯತ್ನದ ಭಾಗವಾಗಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಇದು ಸೂಕ್ತ ಸಮಯವಾಗಿದೆ ಎಂದು ಅವರು ಹೇಳಿದರು.
ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆಯತ್ತ ಬದಲಾಗುವ ಪುಯತ್ನದಲ್ಲಿ ಪ್ರಯಾಣಿಕರು ಎದುರಿಸುವ ಪುಮುಖ ಸಮಸ್ಯೆಗಳನ್ನು ಮತ್ತು ಪ್ರಯಾಣಿಕರ ಸಾರಿಗೆ ಮಾದರಿಗಳನ್ನು ತಿಳಿಯಲು 2022 ಜುಲೈನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ನಗರದ ಎಲ್ಲ ನಾಗರೀಕರಿಗೆ ಪ್ರತಿಕ್ರಿಯಿಸುವ ಅವಕಾಶ ಕಲ್ಪಿಸಲಾಗಿದ್ದರೂ, ನಿರ್ದಿಷ್ಟವಾಗಿ ವೈಟ್ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊರ ವರ್ತುಲ ರಸ್ತೆ (ಒಆರ್ಆರ್) ಪ್ರದೇಶಗಳಲ್ಲಿನ ಪುಯಾಣಿಕರು ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.