Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ನನ್ನ ದೂರಿನ ಎಫ್ಐಆರ್ ದಾಖಲಿಸಿಲ್ಲ:...

ನನ್ನ ದೂರಿನ ಎಫ್ಐಆರ್ ದಾಖಲಿಸಿಲ್ಲ: ಕಾನೂನು ಎಲ್ಲರಿಗೂ ಸಮಾನವಲ್ಲವೇ?: ಸಿ.ಟಿ. ರವಿ ಆಕ್ರೋಶ

"ನೀರೂ ಕೊಡಲಿಲ್ಲ, ಮೂತ್ರಕ್ಕೂ ಬಿಡಲಿಲ್ಲ"

ವಾರ್ತಾಭಾರತಿವಾರ್ತಾಭಾರತಿ21 Dec 2024 6:52 PM IST
share
ನನ್ನ ದೂರಿನ ಎಫ್ಐಆರ್ ದಾಖಲಿಸಿಲ್ಲ: ಕಾನೂನು ಎಲ್ಲರಿಗೂ ಸಮಾನವಲ್ಲವೇ?: ಸಿ.ಟಿ. ರವಿ ಆಕ್ರೋಶ

ಬೆಂಗಳೂರು : ‘ನನ್ನ ಮೇಲೆ ನಡೆದ ಹಲ್ಲೆ ಕುರಿತ ದೂರು ಕೊಟ್ಟೆ, ಎಫ್ಐಆರ್ ದಾಖಲು ಮಾಡಲೇ ಇಲ್ಲ, ಹೋಗಿ ಬಂದು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಸುರಕ್ಷಿತವಾಗಿ ಹೊರಗಡೆ ಕರೆದುಕೊಂಡು ಹೋಗುವುದಾಗಿ ಹೇಳಿ ಎತ್ತಿಕೊಂಡು ಪೊಲೀಸ್ ವಾಹನದಲ್ಲಿ ತುಂಬಿದರು. ಆಗ ಲಾಠಿಯಿಂದ ಹೊಡೆತ ಬಿತ್ತೋ ಹೇಗಾಯಿತೋ ಗೊತ್ತಿಲ್ಲ, ರಕ್ತ ಬರಲಾರಂಭಿಸಿತ್ತು. ಆಗ ರಾತ್ರಿ 11.45 ಸಮಯ ಇರಬಹುದು.’ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ತಮ್ಮ ಬಂಧನದ ಬಗ್ಗೆ ಮಾಹಿತಿ ನೀಡಿದರು.

ಶನಿವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಅಲ್ಲಿಂದ ನಂದಗಡ, ಕಿತ್ತೂರಿಗೆ ಕರೆದೊಯ್ದರು. ಕುಡಿಯಲು ನೀರು ಕೊಡಿ ಎಂದರೆ, ವಾಂತಿ ಆಗುವಂತಿದೆ ಎಂದು ತಿಳಿಸಿದರೆ ವಾಹನದಲ್ಲಿ ನೀರೇ ಇರಲಿಲ್ಲ. ಫೋನ್ ಮೂಲಕ ನಿರ್ದೇಶನದಂತೆ ಕಿತ್ತೂರು, ಒಳಗೆ ಗಲ್ಲಿ ರಸ್ತೆಗೆ ಒಯ್ದರು. ಹಿಂದೆ ಬರುತ್ತಿದ್ದ ಮಾಧ್ಯಮಗಳ ವಾಹನ, ನನ್ನ ಪಿಎ ವಾಹನವನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದರು ಎಂದು ವಿವರ ನೀಡಿದರು.

ವಾಹನ ಬ್ಲಾಕ್ ಮಾಡಲು ಹೇಳುತ್ತಿದ್ದರು. ಬಳಿಕ ಕೇಳಿದರೆ ಬೆಳಗಾವಿ ಕಡೆಗೆ ಎಂದರು. ಆಗ ಧಾರವಾಡ ಹೈಕೋರ್ಟ್ ಕಟ್ಟಡ ಕಾಣಿಸಿತ್ತು. ಕೇಳಿದರೆ ಉತ್ತರ ಸಿಗಲಿಲ್ಲ, ಬಂಧನಕ್ಕೆ ಕಾರಣ ಕೇಳಿ ಬಾಗಿಲು ತೆಗೆಯಲೆತ್ನಿಸಿದೆ. ಬಲವಂತ ಮಾಡಿದ ಗುರುತುಗಳಿವೆ. ನಾನು ಆಗ ನನ್ನ ಪತ್ನಿಗೆ ಲೈವ್ ಲೊಕೇಶನ್ ಹಾಕಿದೆ. ಫೋನ್ ಮಾಡಿದರು. ಗಾಬರಿ ಪಡದಂತೆ ಸಮಾಧಾನ ಮಾಡಿದೆ ಎಂದು ತಿಳಿಸಿದರು.

ಸವದತ್ತಿ, ರಾಮದುರ್ಗ, ಯಾದವಾಡ, ಕಬ್ಬಿನ ಗದ್ದೆಗಳ ನಡುವೆ ನಿಲ್ಲಿಸಿದ್ದರು. ಹಿಂದೆ, ಮುಂದೆ ಪೊಲೀಸ್ ಜೀಪಿತ್ತು. ಆರರಿಂದ 8 ಜನ ಪೊಲೀಸರಿದ್ದರು. ಇಳಿದುಹೋಗಿ ಫೋನಿನಲ್ಲಿ ಮಾತನಾಡಿದರು. ಮಾಧ್ಯಮದವರು ಬಂದಾಗ ತಡೆದರು. ನಡೆ ನಿಗೂಢ ಎಂದು ಮಾಧ್ಯಮದವರಿಗೆ ತಿಳಿಸಿದೆ. ಇನ್ನೆಲ್ಲಿಗೋ ಕರೆದೊಯ್ದರು. ಮೂತ್ರಕ್ಕೂ ಅವಕಾಶ ಕೊಡಲಿಲ್ಲ. ಡಿವೈಎಸ್ಪಿ ಕಚೇರಿಗೆ ಕರೆದೊಯ್ದಾಗ ಅಲ್ಲಿಗೆ ಕೇಶವ ಪ್ರಸಾದ್ ಸೇರಿಕೊಂಡರು ಎಂದು ಮಾಹಿತಿ ನೀಡಿದರು.

ಶೌಚಾಲಯ ಕೆಟ್ಟದಾಗಿತ್ತು. ಕನ್ನಡಿ ನೋಡಿದಾಗ ರಕ್ತ ಗಡ್ಡ, ಮೀಸೆಯಲ್ಲಿ ಅಂಟಿಕೊಂಡಿತ್ತು. ಪೊಲೀಸರು ಸ್ಥಳೀಯ ನರ್ಸ್ ಕರೆಸಿ ಪ್ರಥಮ ಚಿಕಿತ್ಸೆ ಮಾಡಿಸಿದರು. ಮಧ್ಯರಾತ್ರಿ 11.45ರಿಂದ 3ರ ವರೆಗೂ ಚಿಕಿತ್ಸೆ ಕೊಡಲಿಲ್ಲ. ಕುಡಿಯಲು ನೀರಿಲ್ಲ, ಶೌಚಕ್ಕೆ ತೆರಳಲು ಜಾಗ ಇಲ್ಲ. ಹಳ್ಳಿ ರಸ್ತೆ, ಗದ್ದೆ, ಕಾಡಿನ ರಸ್ತೆಯಲ್ಲಿ ಓಡಾಡಿಸುತ್ತಿದ್ದರು ಎಂದು ತಿಳಿಸಿದರು.

ಪೊಲೀಸ್ ವಾಹನದಿಂದ ಗುದ್ದಿಸಿದರು :

ಮಾಧ್ಯಮಗಳ ವಾಹನಕ್ಕೆ ಪೊಲೀಸ್ ವಾಹನದಿಂದ ಗುದ್ದಿಸಿ ಬ್ಲಾಕ್ ಮಾಡಿದ್ದರು. ಹಳ್ಳ, ದಿಬ್ಬವಿರುವ ನಿಗೂಢ ದಾರಿಯಲ್ಲಿ ವಾಹನ ಒಯ್ದರು. ಕೊನೆಗೆ ಅದು ನಿಂತಿದ್ದು ಸ್ಟೋನ್ ಕ್ರಷರ್ ಇದ್ದ ಜಾಗದಲ್ಲಿ. ನಾನು ಆಗ ನೀವು ನನ್ನನ್ನು ಏನೋ ಮಾಡಹೊರಟಿದ್ದೀರಿ ಎಂದು ಚೀರಾಡಿದೆ. ಮಾಧ್ಯಮದವರು ಅಲ್ಲಿಗೂ ಬೈಕ್, ಕಾರಿನಲ್ಲಿ ಬಂದರು ಎಂದು ಮಾಹಿತಿ ಕೊಟ್ಟರು.

ಕೇಶವ ಪ್ರಸಾದ್ ಒತ್ತಡಪೂರ್ವಕ ಬಂದು ನಮ್ಮ ವಾಹನ ಏರಿದರು. ಆಗಾಗ ಟೆಲಿಫೋನ್ ಕರೆ ಬರುತ್ತಿತ್ತು. ಲೆಫ್ಟ್, ರೈಟ್, ಯೂ ಟರ್ನ್ ಎಂದು ಸೂಚನೆ ಕೊಡುತ್ತಿದ್ದರು. 20ಕ್ಕೂ ಹೆಚ್ಚು ಬಾರಿ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದರು. ತಳ್ಳಾಟ, ನೂಕಾಟ ನಡೆಯಿತು. ನನ್ನ ಕುತ್ತಿಗೆ ಹಿಡಿದು ಒತ್ತಾಯದಿಂದ ಫೋನ್ ಕಿತ್ತುಕೊಳ್ಳಲೆತ್ನಿಸಿದರು. ನಾನು ಫೋನ್ ಕೊಡಲಿಲ್ಲ ಎಂದರು. ಫೋನ್ ಕಿತ್ತುಕೊಳ್ಳಲಾಗೋದಿಲ್ವೇ ಎಂದು ಫೋನ್ ನಲ್ಲಿ ಮಾತನಾಡಿದವರು ಗದರಿಸುವುದು ಕೇಳಿಸಿತ್ತು ಎಂದರು. ಯಾರೆಂದು ಕೇಳಿದರೆ ತಿಳಿಸಲಿಲ್ಲ ಎಂದು ಹೇಳಿದರು.

ರಾಮದುರ್ಗದ ಡಿವೈಎಸ್ಪಿ ಚಿದಂಬರ, ಬೆಳಗಾವಿ ಮಾರ್ಕೆಟ್ನ ಎಸಿಪಿ ಗಂಗಾಧರ್, ಕಿತ್ತೂರು ಪಿಎಸೈ ಪ್ರವೀಣ್ ನಿರ್ದೇಶನ ಬರುತ್ತಿತ್ತು. ಹಿಂದೆ-ಮುಂದೆ ಯಾರಿದ್ದರೋ ಗೊತ್ತಿಲ್ಲ. ಮತ್ತೆ ಕೇಶವಪ್ರಸಾದರನ್ನು ಬಲವಂತವಾಗಿ ಎಳೆದು ಹಾಕಿ, ಮಾಧ್ಯಮಗಳನ್ನು ಬ್ಯಾರಿಕೇಡ್ ಹಾಕಿ ದೂರವಿಟ್ಟು ನನ್ನೊಬ್ಬನನ್ನೇ ಕರೆದೊಯ್ದರು ಎಂದರು.

ತಲೆ ಚಚ್ಚಿಕೊಂಡಾಗ ರಕ್ತ ಬಂತು. ಲೋಕಾಪುರ, ಮುಧೋಳಕ್ಕೆ ಒಯ್ಯಲಾಯಿತು. ಕುಡಿದಿದ್ದ ಧಡೂತಿ ವ್ಯಕ್ತಿ ಫೋನ್ ಕಿತ್ತುಕೊಳ್ಳಲು ಮುಂದಾದ, ಆಗ ತಲೆ ಚಚ್ಚಿಕೊಂಡು ಡೋರ್ ಒದ್ದೆ. ನೆಗೆಯುವುದಾಗಿ ತಿಳಿಸಿದೆ. ಆಗ ಮತ್ತೆ ರಕ್ತ ಬರುವ ಕಾರಣ ಫೋನ್ ಕಿತ್ತುಕೊಳ್ಳಲಿಲ್ಲ. ಗದ್ದೆಯೊಳಗೆ ನಿಲ್ಲಿಸಿ ಫೋನ್ ಕೇಳಿದರು. ಕಾಲು ಹಿಡಿಯಲು ಬಂದರು. ಫೋನ್ ವಿಷಯ ಎತ್ತಿದರೆ ಹುಷಾರ್, ಅರೆಸ್ಟ್ ಮಾಡಿದ್ದೀರಾ? ಕಾರಣ ಹೇಳಿ ಎಂದೆ. ರೌದ್ರಾವತಾರ ತಾಳಿ ಹಲ್ಲು ಕಡಿದಾಗ ಭಯಗೊಂಡರು ಎಂದರು.

ಸಾಯಿಸುವ ಹುನ್ನಾರ ಇತ್ತೇ?: ಸೀಬೆಹಣ್ಣು ತರಿಸಿ ತಿಂದೆ. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದರು. ಬಿಪಿ ಜಾಸ್ತಿ ಇತ್ತು. ಸ್ಕ್ಯಾನಿಂಗ್, ಎಕ್ಸ್ರೇ ಮಾಡಿಸಿದರು. ಎಲ್ಲ ಕಡೆ ನಿಗೂಢವಾಗಿ ಯಾಕೆ ನಡೆಸಿಕೊಂಡರು. ಕಬ್ಬಿನ ಗದ್ದೆಯಲ್ಲಿ ಯಾರನ್ನೋ ಕರೆಸಿ ಸಾಯಿಸುವ, ಗುಂಪು ಹೊಡೆದು ಸಾಯಿಸಿದೆ ಎಂದು ತಿಳಿಸುವ ಹುನ್ನಾರ ಇದರ ಹಿಂದಿತ್ತೇ ಎಂದು ಅನುಮಾನ ವ್ಯಕ್ತಪಡಿಸಿದರು. ಕೋರ್ಟಿನಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ನ್ಯಾಯಾಧೀಶರ ಮುಂದಿಟ್ಟೆ ಎಂದು ತಿಳಿಸಿದರು.

ನನ್ನ ಮೇಲಿನ ಹಲ್ಲೆಗೆ ವಿಡಿಯೋ ಇವೆ. ನಿಮ್ಮ ಆರೋಪಕ್ಕೆ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದೆ. ಅದು ಬಿಟ್ಟರೆ ಬೇರೇನಿಲ್ಲ. ನನ್ನ ದೂರಿನ ಎಫ್ಐಆರ್ ದಾಖಲಿಸಿಲ್ಲ, ಕಾನೂನು ಎಲ್ಲರಿಗೂ ಸಮಾನವಲ್ಲವೇ?. ಅಂಬೇಡ್ಕರರ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ, ನೀವು ಲಕ್ಷ್ಮಿ ಹೆಬ್ಬಾಳ್ಕರರಿಗೆ ಆದ್ಯತೆ, ಹಕ್ಕು ಕೊಟ್ಟಿದ್ದೀರಿ. ಮಾನವ ಹಕ್ಕು ಉಲ್ಲಂಘನೆ ಆಗುವಂತೆ ನಡೆದುಕೊಂಡಿದ್ದೀರಿ ಎಂದು ಅವರು ಆಕ್ಷೇಪಿಸಿದರು.

ಡಿ. 19ರಂದು ಪರಿಷತ್ತಿನಲ್ಲಿ ಕಲಾಪವು 10.30ಕ್ಕೆ ಆರಂಭವಾಯಿತು. ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಎಲ್ಲ ಮುಗಿದ ಬಳಿಕ ಡಾ.ಅಂಬೇಡ್ಕರರ ಭಾವಚಿತ್ರ ಹಿಡಿದುಕೊಂಡು ಕಾಂಗ್ರೆಸ್ನವರು ಬಂದಿದ್ದರು, ನಾವೂ ಬಂದಿದ್ದೆವು. ಡಾ.ಅಂಬೇಡ್ಕರರಿಗೆ ಕಾಂಗ್ರೆಸ್ ಹೇಗೆ ಅಪಮಾನ ಮಾಡಿತ್ತು ಎಂಬುದನ್ನು ನಾವು ಎಳೆಎಳೆಯಾಗಿ ಬಿಡಿಸಿಟ್ಟೆವು ಎಂದು ಹೇಳಿದರು.

ಬಾಬಾಸಾಹೇಬ ಅವರನ್ನು 2 ಬಾರಿ ಸೋಲಿಸಿದ್ದು, ಬದುಕಿದ್ದಾಗಲೂ ಅಪಮಾನ ಮಾಡಿದ್ದು, ಸತ್ತಾಗಲೂ ಅವಮಾನ ಮಾಡಿದ ಸಂಗತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟೆವು. ಒಮ್ಮೆ ಸದನ ಮುಂದೂಡಿದರು. ಅವರೂ-ನಾವೂ ಘೋಷಣೆ ಕೂಗುತ್ತಿದ್ದೆವು. 2ನೆ ಬಾರಿ ಮತ್ತೆ ಸಭೆ ಸೇರಿದಾಗ ಅದೇ ಪುನರಾವರ್ತನೆ ಆಯಿತು. ಆಗಲೂ ಸದನ ಮುಂದೂಡಲಾಯಿತು ಎಂದು ತಿಳಿಸಿದರು.

‘ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಾವು ಬಳಸಿರುವ ಪದದ ಬಗ್ಗೆ ಸದನದ ಆಡಿಯೊ, ವಿಡಿಯೊ ಪರಿಶೀಲಿಸಿ, ನನ್ನ ತಪ್ಪಿದ್ದರೆ ನನಗೆ ಶಿಕ್ಷೆ, ಇಲ್ಲವೇ ಅವರ ತಪ್ಪಿದ್ದರೆ ಅವರಿಗೆ ಶಿಕ್ಷೆಯಾಗಲಿ’

-ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X