ನೈಜ ಮತದಾರರಿಗೆ ಬಿಎಲ್ಒಗಳು ನೆರವು ನೀಡಬೇಕು: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಎಸ್ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ನಿಜವಾದ ಮತದಾರರು ಯಾವುದೇ ಕಾರಣಕ್ಕೂ ಸಂವಿಧಾನದತ್ತ ಹಕ್ಕನ್ನು ಕಳೆದುಕೊಳ್ಳಬಾರದು. ಹೀಗಾಗಿ, ಮತದಾರರ ಪಟ್ಟಿಯಿಂದ ನೈಜ ಮತದಾರರಿಗೆ ಅನ್ಯಾಯ ಆಗದಂತೆ ಬಿಎಲ್ಒಗಳು ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸರಕಾರಿ ನೌಕರರೊಂದಿನ ವಿಡಿಯೊ ಸಂವಾದದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಎಸ್ಐಆರ್ ಬಗ್ಗೆ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಜವಾದ ಮತದಾರರು ಯಾವುದೇ ಕಾರಣಕ್ಕೂ ಸಂವಿಧಾನದತ್ತ ಹಕ್ಕನ್ನು ಕಳೆದುಕೊಳ್ಳಬಾರದು. ಅದಕ್ಕೆ ನೆರವಾಗುವುದು ನಿಮ್ಮ ಕರ್ತವ್ಯ ಎಂದು ಸೂಚಿಸಿದರು.
ಸಿಎಂ ಹಾಸ್ಯ ಚಟಾಕಿ: ಸಭೆಗೆ ಹಾಜರಾಗಿದ್ದ ಮಹಿಳಾ ತಹಶೀಲ್ದಾರ್ ಒಬ್ಬರನ್ನು ನಿಮ್ಮಲ್ಲಿ ಎಸ್ಐಆರ್ ಎಷ್ಟು ಪ್ರಗತಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳಿದರು. ‘ಎಲ್ಲ ಚೆನ್ನಾಗಿದೆ ಎಂದು ತಹಶೀಲ್ದಾರ್ ಉತ್ತರಿಸಿದರು. ಆಗ, ಚೆನ್ನಾಗಿದೆ ಎಂದರೆ ಏನಮ್ಮಾ, ಎಷ್ಟು ಮತ ರದ್ದುಗೊಳಿಸಲಾಗಿದೆ. ಎಷ್ಟು ಜನರನ್ನು ಉಳಿಸಿದ್ದೀಯಾ’ ಎಂದು ಮರಪ್ರಶ್ನಿಸಿದರು.
ತಹಶೀಲ್ದಾರ್ ಉತ್ತರ ಮುಂದುವರಿಸಿ, ಸರ್, ನಮ್ಮ ಕ್ಷೇತ್ರದಲ್ಲಿ 42 ಸಾವಿರ ಮತ ರದ್ದುಗೊಂಡಿವೆ. ಹಾಗಾದರೆ ನೀವು ಏನು ಮಾಡುತ್ತಿದ್ದೀರಿ? ಬಿಎಲ್ಒ ಕೆಲಸವೇನು? ನಿಜವಾದ ಮತದಾರರಿಗೆ ನೀವು ಹೇಗೆ ನೆರವಾಗುತ್ತಿದ್ದೀರಿ? ಎಂದೂ ಶಿವಕುಮಾರ್ ಕೇಳಿದ ದೃಶ್ಯ ಕಂಡಿತು.






