ದಾವಣಗೆರೆ: ಸಮಾಜ ಸೇವಕ ಹಸೇನ್ ನಿಧನ
![ದಾವಣಗೆರೆ: ಸಮಾಜ ಸೇವಕ ಹಸೇನ್ ನಿಧನ ದಾವಣಗೆರೆ: ಸಮಾಜ ಸೇವಕ ಹಸೇನ್ ನಿಧನ](https://www.varthabharati.in/h-upload/2023/08/17/1181247-.webp)
ದಾವಣಗೆರೆ : ʻಹಸೇನ್ ಅಂಬುಲೇನ್ಸ್ʻ ಎಂದೇ ಖ್ಯಾತಿ ಹೊಂದಿದ್ದ ಸಮಾಜ ಸೇವಕ ಹಸೇನ್ ಅವರು ಬುಧವಾರ ರಾತ್ರಿ 12 ಗಂಟೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ಯಿಂದ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಜಿ ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಹೊರಗೆ ಬರುವ ಸಂದರ್ಭದಲ್ಲಿ ಗುರುವಾರ ಬೆಳಗ್ಗೆ 5 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸರಿದಂತೆ ಅಪಾರ ಬಂಧುಮಿತ್ರರು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.
ಕೋವಿಡ್ ಸಂದರ್ಭದಲ್ಲಿ 150 ಕ್ಕೂ ಶವಗಾರಕ್ಕೆ ಸಾಗಿಸಿದ್ದಾರೆ. ಅಲ್ಲದೇ ಎಲ್ಲಿಯೇ ಅನಾಥ ಶವ ಆಸ್ಪತ್ರೆಗೆ ರವಾನಿಸುತ್ತಿದ್ದರು. ಇವರ ಸೇವೆ ಗುರುತಿಸಿ ಅನೇಕ ಪ್ರಶಸ್ತಿಗಳು ಲಭಿಸಿವೆ.
ಸಂತಾಪ
ದಾವಣಗೆರೆ ಜಿಲ್ಲೆ ವಕ್ಫ್ ಸಲಹಾ ಸಮಿತಿ , ಮುಸ್ಲಿಂ ಫಂಡ್ ಅಸೋಸಿಯೇಷನ್ ದಾವಣಗೆರೆ, ತಂಝಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ,ದಾವಣಗೆರೆ ಮುಸ್ಲಿಂ ಒಕ್ಕೂಟ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿ, ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.