Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ವಿಯೆನ್ನಾ : ಡಾ. ರೊನಾಲ್ಡ್ ಕೊಲಾಸೊ ಅವರ...

ವಿಯೆನ್ನಾ : ಡಾ. ರೊನಾಲ್ಡ್ ಕೊಲಾಸೊ ಅವರ ಅಲ್ಡೋವಿಯಾ ರೆಸಾರ್ಟ್‌ ಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಗರಿ

ವಾರ್ತಾಭಾರತಿವಾರ್ತಾಭಾರತಿ28 Aug 2026 9:40 PM IST
share
ವಿಯೆನ್ನಾ : ಡಾ. ರೊನಾಲ್ಡ್ ಕೊಲಾಸೊ ಅವರ ಅಲ್ಡೋವಿಯಾ ರೆಸಾರ್ಟ್‌ ಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಗರಿ

ಬೆಂಗಳೂರು: ನಗರದ ಸ್ವಿಸ್ ಟೌನ್‌ ನಲ್ಲಿರುವ ಡಾ. ರೊನಾಲ್ಡ್ ಕೊಲಾಸೊ ಅವರ ಪ್ರತಿಷ್ಠಿತ ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್‌ ಗೆ ಅಂತರರಾಷ್ಟ್ರೀಯ ಉದ್ಯಮ ಪ್ರಶಸ್ತಿಗಳು ಲಭಿಸಿವೆ.

ಟೆಕ್ಸಾಸ್‌ ನ ಹೂಸ್ಟನ್‌ನಲ್ಲಿರುವ ವರ್ಲ್ಡ್ ಕಾನ್ಫೆಡರೇಶನ್ ಆಫ್ ಬಿಸಿನೆಸ್ (WORLDCOB) ಆಯೋಜಿಸಿದ್ದ ‘ದಿ ಬಿಜ್ ಅವಾರ್ಡ್ಸ್ 2026’ರಲ್ಲಿ ಈ ಗೌರವಗಳು ದೊರೆತಿವೆ. ಆಸ್ಟ್ರಿಯಾದ ವಿಯೆನ್ನಾದ ಇಂಟರ್‌ ಕಾಂಟಿನೆಂಟಲ್ ವೀನ್‌ ನಲ್ಲಿ ಆಗಸ್ಟ್ 25ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಹಲವು ದೇಶಗಳ ಪ್ರಮುಖ ಉದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳು ಸಮಾರಂಭದಲ್ಲಿ ಭಾಗವಹಿಸಿದ್ದವು. ವಿವಿಧ ವಿಭಾಗಗಳಲ್ಲಿ ಒಟ್ಟು 33 ಪ್ರಶಸ್ತಿಗಳನ್ನು ನೀಡಲಾಯಿತು.

WORLDCOBನ ಮೌಲ್ಯಮಾಪನ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಡಾ. ರೊನಾಲ್ಡ್ ಕೊಲಾಸೊ ಅವರ ಅಲ್ಡೋವಿಯಾ ರೆಸಾರ್ಟ್ ಅನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಆನ್‌ಲೈನ್ ಟೂರ್ ಏಜೆನ್ಸಿಗಳು ಹಾಗೂ ಗ್ರಾಹಕರ ವಿಮರ್ಶೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ರೆಸಾರ್ಟ್‌ ನ ಕಾರ್ಯನಿರ್ವಹಣೆ, ಆಡಳಿತ ಸಾಮರ್ಥ್ಯ ಮತ್ತು ಆತಿಥ್ಯ ಸೇವೆಯ ಗುಣಮಟ್ಟವನ್ನು ಪರಿಶೀಲಿಸಲಾಗಿದೆ.

ಎರಡು ಸಾಂಸ್ಥಿಕ ಪ್ರಶಸ್ತಿಗಳು

ಅಲ್ಡೋವಿಯಾ ರೆಸಾರ್ಟ್‌ ಗೆ ಎರಡು ಪ್ರಮುಖ ಪ್ರಶಸ್ತಿಗಳು ದೊರೆತಿವೆ. ಸಂಸ್ಥೆಯ ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ‘ವರ್ಲ್ಡ್ ಬಿಸ್ನೆಸ್ ಲೀಡರ್’ ( World Business Leader award )ಪ್ರಶಸ್ತಿ ನೀಡಲಾಗಿದೆ. ಅಲ್ಲದೆ, WORLDCOBನ ಮೌಲ್ಯಮಾಪನ ಸಮಿತಿಯ ಶಿಫಾರಸಿನ ಮೇರೆಗೆ ಅಲ್ಡೋವಿಯಾಗೆ ‘ಸ್ಫೂರ್ತಿದಾಯಕ ಸಂಸ್ಥೆ’ ( Inspirational Company ) ಎಂಬ ಗೌರವವೂ ಲಭಿಸಿದೆ.

ಅಲ್ಡೋವಿಯಾ ರೆಸಾರ್ಟ್‌ನ ತಂಡದ ಸದಸ್ಯರಿಗೂ ಪ್ರಶಸ್ತಿಗಳು ದೊರೆತಿವೆ. ರೆಸಾರ್ಟ್‌ನ ಉತ್ತಮ ಕಾರ್ಯನಿರ್ವಹಣೆಗೆ ನೀಡಿದ ಕೊಡುಗೆಗಾಗಿ ನೈಜೆಲ್ ರುಫಸ್ ಕೊಲಾಸೊ ಅವರಿಗೆ ‘ವರ್ಲ್ಡ್ ಲೀಡರ್ ಬಿಸ್ನೆಸ್ ಪರ್ಸನ್’ ( World Leader Businessperson )ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಂಡಲ್ ಶಾನ್ ಕೊಲಾಸೊ ಅವರಿಗೆ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ ( Excellence in Business Leadership )ನೀಡಿದ್ದಕ್ಕಾಗಿ ಪ್ರಶಸ್ತಿ ಲಭಿಸಿದೆ. ಬಾಲಾಜಿ ಮುಕುಂದ ಅವರಿಗೆ ಸಂಸ್ಥೆಯ ಉತ್ತಮ ನಿರ್ವಹಣೆಯನ್ನು ಗುರುತಿಸಿ ‘ ಎಕ್ಸಲೆನ್ಸ್ ಇನ್ ಬಿಸಿನೆಸ್ ಮ್ಯಾನೇಜ್ಮೆಂಟ್’ ( Excellence in Business Management)ಪ್ರಶಸ್ತಿ ನೀಡಲಾಗಿದೆ.

ಕ್ಲಾರ್ಕ್ಸ್ ಎಕ್ಸೋಟಿಕಾದಿಂದ ಅಲ್ಡೋವಿಯಾ

ಡಾ. ರೊನಾಲ್ಡ್ ಕೊಲಾಸೊ ಅವರ ಒಡೆತನದಲ್ಲಿರುವ ಈ ರೆಸಾರ್ಟ್ ಇದೀಗ ‘ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್’ ಎಂಬ ಹೊಸ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಮೊದಲು ಸುಮಾರು ಎರಡು ದಶಕಗಳ ಕಾಲ ಇದು ‘ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಮತ್ತು ಸ್ಪಾ’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಟಾಟಾ ಗ್ರೂಪ್ ದಿಲ್ಲಿ, ಜೈಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದ ‘ಕ್ಲಾರ್ಕ್ಸ್ ಎಕ್ಸೋಟಿಕಾ’ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಇದರ ನಂತರ ಬೆಂಗಳೂರಿನ ರೆಸಾರ್ಟ್‌ನ ಹೆಸರನ್ನು ಬದಲಾಯಿಸಲಾಗಿದೆ. ಪತ್ರಿಕಾ ಪ್ರಕಟನೆಯ ಪ್ರಕಾರ, ರೆಸಾರ್ಟ್‌ನ ಮಾಲೀಕ ಹಾಗೂ ಸಂಸ್ಥಾಪಕ ಡಾ. ರೊನಾಲ್ಡ್ ಕೊಲಾಸೊ ಅವರು ಮಾಲೀಕತ್ವವನ್ನು ತಮ್ಮಲ್ಲೇ ಉಳಿಸಿಕೊಂಡು, ರೆಸಾರ್ಟ್ ಅನ್ನು ‘ಅಲ್ಡೋವಿಯಾ ರೆಸಾರ್ಟ್ & ಕನ್ವೆನ್ಷನ್’ ಎಂಬ ಹೊಸ ಬ್ರ್ಯಾಂಡ್‌ನಡಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ.

ಡಾ. ರೊನಾಲ್ಡ್ ಕೊಲಾಸೊ ಅವರು ರೆಸಾರ್ಟ್ ಮತ್ತು ಹೋಟೆಲ್‌ಗಳ ಕ್ಷೇತ್ರದ ಜತೆಗೆ ವಸತಿ ಪ್ರದೇಶಗಳ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಲಿವುಡ್ ಟೌನ್, ಸ್ವಿಸ್ ಟೌನ್, ಓವಲ್ ರೀಫ್, ಸೆರೆನ್ ಗಾರ್ಡನ್ಸ್ ಮತ್ತು ಪಾರ್ಕ್‌ಲ್ಯಾಂಡ್ ವ್ಯೂ ಸೇರಿದಂತೆ ಹಲವು ವಸತಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಂಸ್ಥೆಯ ಪ್ರಕಾರ, ಅಲ್ಡೋವಿಯಾದ ಉದ್ದೇಶ ಕೇವಲ ಐಷಾರಾಮಿ ಸೌಲಭ್ಯಗಳನ್ನು ನೀಡುವುದಲ್ಲ. ಅತಿಥಿಗಳಿಗೆ ಆತ್ಮೀಯ ವಾತಾವರಣ, ಉತ್ತಮ ಅನುಭವ ಮತ್ತು ನೆನಪಿನಲ್ಲಿ ಉಳಿಯುವ ಸೇವೆ ನೀಡುವುದು ರೆಸಾರ್ಟ್‌ನ ಉದ್ದೇಶವಾಗಿದೆ.

70 ಎಕರೆ ಪ್ರದೇಶದಲ್ಲಿ ರೆಸಾರ್ಟ್

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡಾ. ರೊನಾಲ್ಡ್ ಕೊಲಾಸೊ ಅವರ ಅಲ್ಡೋವಿಯಾ ರೆಸಾರ್ಟ್ ಇದೆ. ಸುಮಾರು 70 ಎಕರೆ ಪ್ರದೇಶದಲ್ಲಿರುವ ಈ ರೆಸಾರ್ಟ್, ಒಟ್ಟು ಸುಮಾರು 300 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಟೌನ್‌ಶಿಪ್‌ ನಲ್ಲಿ ಇದೆ.

ರೆಸಾರ್ಟ್‌ನಲ್ಲಿ ಮೂರು ಈಜುಕೊಳಗಳು ಹಾಗೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳಿವೆ. ಇಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ವ್ಯವಸ್ಥೆಯಿದ್ದು, ಮದುವೆ, ಸಮಾವೇಶ, ಕಾರ್ಪೊರೇಟ್ ಕಾರ್ಯಕ್ರಮ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಬಹುದು. ಆರೋಗ್ಯ ಮತ್ತು ಕ್ಷೇಮ ಸೇವೆಗಳನ್ನೂ ರೆಸಾರ್ಟ್ ಒದಗಿಸುತ್ತದೆ.

ರೆಸಾರ್ಟ್‌ನಲ್ಲಿ ಒಟ್ಟು 11 ಒಳಾಂಗಣ ಸಭಾಂಗಣಗಳಿವೆ. ಇವುಗಳಲ್ಲಿ ‘ಓಷನ್ ಕನ್ವೆನ್ಷನ್ ಸೆಂಟರ್’ ಪ್ರಮುಖವಾಗಿದೆ. ದಕ್ಷಿಣ ಭಾರತದಲ್ಲಿ ಪಂಚತಾರಾ ಹೋಟೆಲ್‌ಗೆ ಹೊಂದಿಕೊಂಡಿರುವ ಅತಿದೊಡ್ಡ ಒಳಾಂಗಣ ಕನ್ವೆನ್ಷನ್ ಸೆಂಟರ್ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

ರೆಸಾರ್ಟ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಹಲವು ಸ್ಥಳಗಳಿವೆ. ‘ಓಯಸಿಸ್ ಫಾರ್ಮಲ್ ಬಾರ್’ ಎಂಬ ಬಾರ್ ಕೂಡ ಇದೆ. ಊಟಕ್ಕಾಗಿ ಮೂರು ರೆಸ್ಟೋರೆಂಟ್‌ಗಳಿದ್ದು, ಅವುಗಳಲ್ಲಿ ಬಹು-ಪಾಕಪದ್ಧತಿ, ಪ್ಯಾನ್‌–ಏಷ್ಯನ್ ಮತ್ತು ಮೆಡಿಟರೇನಿಯನ್ ಆಹಾರಗಳು ದೊರೆಯುತ್ತವೆ. ‘ಶೋಗನ್’, ‘ಎಂಬರ್’ ಮತ್ತು ‘ಮಿರಾಜ್ ಕೆಫೆ’ ಸೇರಿದಂತೆ ಇತರ ಆಹಾರ ಮತ್ತು ಪಾನೀಯ ಸೌಲಭ್ಯಗಳೂ ರೆಸಾರ್ಟ್‌ನಲ್ಲಿವೆ.

ಆರೋಗ್ಯ–ಕ್ಷೇಮ ಸೌಲಭ್ಯ

ಅಲ್ಡೋವಿಯಾದಲ್ಲಿ ಆರೋಗ್ಯ ಮತ್ತು ಕ್ಷೇಮ ಸೇವೆಗಳಿಗಾಗಿ ಸ್ಪಾ ಸೌಲಭ್ಯವಿದೆ. ಇಲ್ಲಿ ಆಯುರ್ವೇದ ಚಿಕಿತ್ಸೆ, ಅರೋಮಾಥೆರಪಿ ಹಾಗೂ ಆಧುನಿಕ ಕ್ಷೇಮ ಚಿಕಿತ್ಸೆಗಳು ಲಭ್ಯವಿವೆ. ರೆಸಾರ್ಟ್‌ನಲ್ಲಿ ವಿಶಾಲವಾದ ಹಸಿರು ಪ್ರದೇಶಗಳು ಹಾಗೂ ವಿವಿಧ ಮನರಂಜನಾ ಸೌಲಭ್ಯಗಳೂ ಇವೆ.

ಈ ಹಿಂದೆಯೂ WORLDCOB ಗೌರವ

WORLDCOBನಿಂದ ಅಲ್ಡೋವಿಯಾಗೆ ಈ ಹಿಂದೆಯೂ ಪ್ರಶಸ್ತಿಗಳು ದೊರೆತಿವೆ. 2015ರಲ್ಲಿ ಒಮಾನ್‌ ನ ಮಸ್ಕತ್‌ ನಲ್ಲಿ ನಡೆದ ‘ದಿ ಬಿಜ್ ಅವಾರ್ಡ್ಸ್’ನಲ್ಲಿ ರೆಸಾರ್ಟ್‌ಗೆ ಮನ್ನಣೆ ದೊರೆತಿತ್ತು. 2017ರಲ್ಲಿ ಯುಎಇಯ ದುಬೈನಲ್ಲಿ ನಡೆದ ‘ದಿ ಬಿಜ್ ಪೀಕ್ ಆಫ್ ಸಕ್ಸಸ್ ಅವಾರ್ಡ್ಸ್’ನಲ್ಲಿಯೂ ಅಲ್ಡೋವಿಯಾ ಗೌರವ ಪಡೆದಿತ್ತು. ಈ ಸಂದರ್ಭದಲ್ಲಿ ‘ಸ್ಫೂರ್ತಿದಾಯಕ ಸಂಸ್ಥೆ’ ಎಂಬ ಗೌರವವೂ ದೊರೆತಿತ್ತು.

ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಇತ್ತೀಚೆಗೆ ದೊರೆತ ಗೌರವ ಅಲ್ಡೋವಿಯಾ ರೆಸಾರ್ಟ್‌ ನ ಸಾಧನೆಗೆ ಮಾತ್ರ ಸೀಮಿತವಾಗಿಲ್ಲ. ಮೂರುವರೆ ದಶಕಗಳಿಗೂ ಹೆಚ್ಚು ಕಾಲದ ಡಾ. ಕೊಲಾಸೊ ಅವರ ವೃತ್ತಿಜೀವನಕ್ಕೂ ದೊರೆತ ಗೌರವ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಅವಧಿಯಲ್ಲಿ ಅವರು ಶಿಕ್ಷಣ, ಆರೋಗ್ಯ ರಕ್ಷಣೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕ್ಲಾರ್ಕ್ಸ್ ಎಕ್ಸೋಟಿಕಾ ಎಂಬ ಹೆಸರಿನಿಂದ ಅಲ್ಡೋವಿಯಾ ಎಂಬ ಹೊಸ ಹೆಸರಿನಲ್ಲಿ ರೆಸಾರ್ಟ್ ತನ್ನ ಹೊಸ ಪ್ರಯಾಣ ಆರಂಭಿಸಿದೆ. ಈ ಸಂದರ್ಭದಲ್ಲಿ ದೊರೆತ ಅಂತರರಾಷ್ಟ್ರೀಯ ಪ್ರಶಸ್ತಿಗಳು ಅಲ್ಡೋವಿಯಾದ ಹೊಸ ಗುರುತಿಗೆ ಮತ್ತಷ್ಟು ಬಲ ನೀಡಿವೆ ಎಂದು ಸಂಸ್ಥೆ ಹೇಳಿದೆ. ಉತ್ತಮ ಗುಣಮಟ್ಟದ ಸೇವೆ ಮತ್ತು ಆತಿಥ್ಯಕ್ಕೆ ಆದ್ಯತೆ ನೀಡುವ ಭಾರತೀಯ ಆತಿಥ್ಯ ಬ್ರ್ಯಾಂಡ್ ಆಗಿ ಅಲ್ಡೋವಿಯಾವನ್ನು ಬೆಳೆಸುವುದು ಸಂಸ್ಥೆಯ ಉದ್ದೇಶವಾಗಿದೆ.

“ಈ ಅಂತರರಾಷ್ಟ್ರೀಯ ಗೌರವ ಕೇವಲ ನಮ್ಮ ಉದ್ಯಮದ ಯಶಸ್ಸಿಗೆ ದೊರೆತ ಪ್ರಶಸ್ತಿಯಲ್ಲ. ಅಲ್ಡೋವಿಯಾದ ಹಿಂದೆ ಕೆಲಸ ಮಾಡುತ್ತಿರುವ ಜನರು, ನಮ್ಮ ಮೌಲ್ಯಗಳು ಮತ್ತು ನಮ್ಮ ಉದ್ದೇಶಕ್ಕೂ ದೊರೆತ ಗೌರವವಾಗಿದೆ. ಉತ್ತಮ ಸೇವೆ ನೀಡುವ ತಾಣವನ್ನು ನಿರ್ಮಿಸುವುದು ನಮ್ಮ ಪ್ರಯತ್ನ. ಆತಿಥ್ಯ ಎನ್ನುವುದು ಹೃದಯದಿಂದ ಬರಬೇಕು. ಪ್ರತಿಯೊಬ್ಬ ಅತಿಥಿಯೂ ಆತ್ಮೀಯತೆ ಮತ್ತು ಉತ್ತಮ ಅನುಭವವನ್ನು ಪಡೆಯಬೇಕು ಎಂಬುದು ನಮ್ಮ ಆಶಯ” ಎಂದು ಸಂಸ್ಥೆ ಹೇಳಿದೆ.

Tags

Dr. Ronald ColacoAldovia Resort
share
ವಾರ್ತಾಭಾರತಿ
ವಾರ್ತಾಭಾರತಿ
Next Story
X