Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಪೆಟ್ರೋಲ್, ಡಿಸೇಲ್ ಅಳತೆಯಲ್ಲಿ...

ಪೆಟ್ರೋಲ್, ಡಿಸೇಲ್ ಅಳತೆಯಲ್ಲಿ ಗೋಲ್‍ಮಾಲ್; ಗ್ರಾಹಕರು ದೂರು ದಾಖಲಿಸಬೇಕು : ಸಚಿವ ರಿಝ್ವಾನ್ ಅರ್ಶದ್

ವಾರ್ತಾಭಾರತಿವಾರ್ತಾಭಾರತಿ16 Sept 2026 9:03 PM IST
share
ಪೆಟ್ರೋಲ್, ಡಿಸೇಲ್ ಅಳತೆಯಲ್ಲಿ ಗೋಲ್‍ಮಾಲ್; ಗ್ರಾಹಕರು ದೂರು ದಾಖಲಿಸಬೇಕು : ಸಚಿವ ರಿಝ್ವಾನ್ ಅರ್ಶದ್

ಬೆಂಗಳೂರು : ರಾಜ್ಯ ವ್ಯಾಪಿ ಇಂಧನ ತುಂಬಿಸುವ ಬಂಕ್‍ಗಳಲ್ಲಿ ಪೆಟ್ರೋಲ್, ಡಿಸೇಲ್ ಅಳತೆಯೊಳಗೆ ಭಾರೀ ಮೋಸ ಬೆಳಕಿಗೆ ಬಂದಿದ್ದು, ಈ ಸಂಬಂಧ ಗ್ರಾಹಕರು ದೂರು ದಾಖಲಿಸಬೇಕು ಎಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಝ್ವಾನ್ ಅರ್ಶದ್ ಕರೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ 5,946 ಇಂಧನ ಬಂಕ್‍ಗಳ ಪೈಕಿ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿವಿಧ ಪ್ರದೇಶದ 805 ಬಂಕ್‍ಗಳಲ್ಲಿ ಪರಿಶೀಲನೆ ನಡೆಸಿದಾಗ ಬರೋಬ್ಬರಿ 768 ಬಂಕ್‍ಗಳಲ್ಲಿ ತೈಲದ ಅಳತೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಅದರಲ್ಲೂ 101 ಪೆಟ್ರೋಲ್ ಬಂಕ್‍ಗಳಲ್ಲಿ ಅನುಮತಿಸಬಹುದಾದ ಪರಿಮಾಣಕ್ಕಿಂತಲೂ ಹೆಚ್ಚಿನ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇಂಧನ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ವಿಚಾರ, ನಮ್ಮ ರಾಜ್ಯದಲ್ಲಿ 5946 ಪೆಟ್ರೋಲ್ ಬಂಕ್‍ಗಳಿವೆ. ಇಲ್ಲಿ ಜನರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನ ಸಿಗುತ್ತಿದೆಯೇ ಎನ್ನುವ ಕುರಿತು ಈಗಲೂ ಅಧ್ಯಯನ ಮುಂದುವರೆಸಲಾಗಿದೆ. ಇತ್ತೀಚಿಗೆ ತಪಾಸಣೆ ಮಾಡಿದಾಗ 3071 ಪೆಟ್ರೋಲ್ ಗನ್(ಪೆಟ್ರೋಲ್ ಹಾಕುವ ನಾಜಲ್ ಪರಿಕರ) ಪತ್ತೆಯಾಗಿದ್ದು, ಅದರಲ್ಲಿ 2,618 ಗನ್‍ಗಳಲ್ಲಿ ಇಂಧನ ಕಡಿಮೆ ಬಂದಿವೆ.

ಈ ರೀತಿಯ ಪೆಟ್ರೋಲ್ ಗನ್‍ಗಳಲ್ಲಿ ಇಂಧನ ಕಡಿಮೆ ಬರುವುದಾದರೆ ಪೆಟ್ರೋಲ್ ಬಂಕ್‍ನವರೇ ಮಾಹಿತಿ ಕೊಡಬೇಕು. ಬಂಕ್ ಮಾಲಕರು ಪ್ರತಿದಿನ ಪರಿಶೀಲನೆ ಮಾಡಬೇಕು. ಒಟ್ಟಿನಲ್ಲಿ ಶೇ.95 ರಷ್ಟು ಗನ್‍ಗಳಲ್ಲಿ ಸಮರ್ಪಕ ಪೆಟ್ರೋಲ್ ಪೂರೈಕೆ ಆಗುತ್ತಿಲ್ಲ ಎನ್ನುವ ಆತಂಕಕಾರಿ ಅಂಶ ಪತ್ತೆಯಾಗಿದೆ. ಹೀಗಾಗಿ ಗ್ರಾಹಕನ ಹಕ್ಕಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಇಲಾಖೆ ಮಾಡಲು ಹೊರಟಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರದ ಅಧಿಸೂಚನೆ ಒಪ್ಪುವುದಿಲ್ಲ: ಈ ಹಿಂದೆ ಪ್ರತಿ ಪೆಟ್ರೋಲ್ ಬಂಕ್ ಅವರು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್ (ತಪಾಸಣೆ) ಮಾಡಬೇಕೆಂಬ ನಿಯಮ ಸೇರಿಸಲಾಗಿತ್ತು. ಆದರೆ, 2025ರಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಎರಡು ವರ್ಷಕ್ಕೊಮ್ಮೆ ಈ ಪರಿಶೀಲನೆ ಮಾಡಬೇಕು ತಿಳಿಸಿದೆ. ಈ ಹಿಂದಿನ ಒಂದು ವರ್ಷದ ತಪಾಸಣಾ ಅವಧಿಯಲ್ಲೇ ಬಂಕ್‍ಗಳಲ್ಲಿ ಇಷ್ಟೊಂ ದು ವ್ಯತ್ಯಾಸ ಕಂಡುಬರುತ್ತಿದೆ. ಹೊಸ ಅಧಿಸೂಚನೆಯಂತೆ ತಪಾಸಣೆಗೆ 24 ತಿಂಗಳ ಅವಧಿ ವಿಸ್ತರಿಸಿದರೆ ಗ್ರಾಹಕರಿಗೆ ಎಷ್ಟು ಹೊಡೆತ ಬೀಳಬಹುದು ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರಕಾರ ಯಾವ ಆಧಾರದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನುವುದೇ ಗೊತ್ತಿಲ್ಲ. ನನ್ನ ಪ್ರಕಾರ ಇದೊಂದು ಅವೈಜ್ಞಾನಿಕ ಅಧಿಸೂಚನೆಯೇ ಸರಿ ಎಂದು ಪ್ರತಿಪಾದಿಸಿದ ಅವರು, ಇದರಿಂದ ರಾಜ್ಯದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ಕೇಂದ್ರದ ಅಧಿಸೂಚನೆಯನ್ನು ಒಪ್ಪಲು ಆಗುವುದಿಲ್ಲ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಈ ಅಧಿಸೂಚನೆಯನ್ನು ಒಪ್ಪಲು ಸಿದ್ಧರಿಲ್ಲ ಎಂಬುದನ್ನು ತಿಳಿಸಲಿದ್ದೇವೆ ಎಂದರು.

ಇತ್ತ ಕೇಂದ್ರ ಸರಕಾರ ಇತ್ತೀಚಿಗೆ ಇನ್ನೊಂದು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ತಪಾಸಣೆ ಮಾಡುವ ಅಧಿಕಾರವನ್ನು ಖಾಸಗಿ ಏಜೆನ್ಸಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಮಾಡಿದರೆ ಬಂಕ್‍ಗಳಲ್ಲಿನ ಪೆಟ್ರೋಲ್ ವ್ಯತ್ಯಾಸವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಅಲ್ಲದೆ, ಇಂತಹ ಅಂಶಗಳಿಂದ ರಾಜ್ಯ ಸರಕಾರಕ್ಕೂ ನಷ್ಟ ಆಗುತ್ತದೆ. ಗ್ರಾಹಕರಿಗೂ ಇದರಿಂದ ದೊಡ್ಡ ನಷ್ಟ ಆಗಲಿದೆ. ಈ ಎರಡು ಅಧಿಸೂಚನೆಗಳು ಸರಿಯಿಲ್ಲ. ಒಟ್ಟಿನಲ್ಲಿ 2027 ಜನವರಿಯಿಂದ ಈ ಹೊಸ ಅಧಿಸೂಚನೆ ಬರಲಿದ್ದು, ಇದರಲ್ಲಿ ಖಾಸಗಿ ಸಂಸ್ಥೆಗಳ ತಪಾಸಣೆ ಅಂಶವನ್ನು ಕೈಬಿಡಬೇಕು ಎಂದು ಸಚಿವರು ಆಗ್ರಹಿಸಿದರು.

ಮತ್ತೊಂದು ಪ್ರಮುಖ ಅಂಶ ಎಂದರೆ, 5 ಲೀಟರ್ ಇಂಧನದ ಅಳತೆ ಪರಿಶೀಲನೆ ಮಾಡಿದಾಗ, ಸುಮಾರು 30ರಿಂದ70 ಎಂಎಲ್‍ಗಳು ಕಡಿಮೆ ಬಂದಿದೆ. ನಮ್ಮ ದೇಶದಲ್ಲಿ 5 ಲೀಟರ್‍ಗೆ ಶೇ.0.5ರಷ್ಟು ವ್ಯತ್ಯಾಸ ಇರಬಹುದು ಎಂಬ ಮಾನದಂಡ ಇದೆ. ಬೇರೆ ದೇಶಗಳಲ್ಲಿ ಶೇ.0.3ರಷ್ಟು ವ್ಯತ್ಯಾಸ ಇರಬಹುದು ಎಂಬ ನಿಯಮ ಇದೆ. 2011ರಲ್ಲಿ ಶೇ.0.5 ರಿಂದ ಶೇ.0.3ರಷ್ಟು ಇಳಿಸಬೇಕು ಎಂಬ ಚಿಂತನೆ ಇತ್ತು. ಆದರೆ, ಅದನ್ನು ಮಾಡಿಲ್ಲ. ಹಾಗಾಗಿ ವ್ಯತ್ಯಾಸ ಪ್ರಮಾಣವನ್ನು ಶೇ.0.3ರಷ್ಟಿಗೆ ಇಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಿದ್ದೇವೆ. ಈಗಿರುವ ಮಾನದಂಡದ ಪ್ರಕಾರ ನೂರಾರು ಕೋಟಿ ಹಣ ಗ್ರಾಹಕರಿಗೆ ಹಣ ನಷ್ಟ ಆಗುತ್ತಿದೆ ಎಂದು ಅವರು ಹೇಳಿದರು.

‘ಡಿಸೆಂಬರ್ 2026ರೊಳಗೆ ರಿ ಕ್ಯಾಲಿಬರೇಷನ್ ಬಾಕಿ ಇರುವ 2500 ಪೆಟ್ರೋಲ್, ಡೀಸೆಲ್ ಪಂಪ್‍ಗಳು ಇದ್ದು, ಅವಧಿ ಮುಗಿಯುವ ಮುನ್ನ ತಪಾಸಣೆ ಮಾಡಬೇಕು. ಇಲ್ಲವಾದರೆ ಮಾಪನಶಾಸ್ತ್ರ ಇಲಾಖೆಯಿಂದ ತಪಾಸಣೆ ಮಾಡಲಾಗುವುದು’ ಎಂದು ಸಚಿವ ರಿಝ್ವಾನ್ ಆರ್ಶದ್ ಹೇಳಿದ್ದಾರೆ.

ದೂರು ನೀಡಲು ಸಹಾಯವಾಣಿ: ‘ಪೆಟ್ರೋಲ್ ಬಂಕ್‍ಗಳಲ್ಲಿ ಗ್ರಾಹಕರಿಗೆ ಅಳತೆ ಸಂಬಂಧ ಏನಾದರೂ ಅನುಮಾನ ಬಂದರೆ ಉಚಿತ ಸಹಾಯವಾಣಿ 18005991100ಗೆ ಕರೆ ಮಾಡಬಹುದು.ಅಥವಾ ಇಮೇಲ್ ಐಡಿ clm/lm/k@nic.in ನಿಮ್ಮ ದೂರು ಸಲ್ಲಿಸಬಹುದು.ಇನ್ನೂ, ಪೆಟ್ರೋಲ್ ಬಂಕ್‍ಗಳಲ್ಲಿ ಈ ಸಹಾಯವಾಣಿ ಫಲಕಗಳನ್ನು ಪ್ರದರ್ಶನ ಮಾಡಬೇಕು. ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ನೀಡಬೇಕು’

-ರಿಝ್ವಾನ್ ಆರ್ಶದ್, ಆಹಾರ ಸಚಿವ

ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಗೆ ಆಗ್ರಹ: ರಾಜ್ಯ ಕಾಂಗ್ರೆಸ್ ಸರಕಾರ ಪ್ರಮುಖ ಗ್ಯಾರಂಟಿಗಳಲ್ಲಿ ಈಗ ಅಳತೆ ಗ್ಯಾರಂಟಿ ಸಹ ನೀಡಿದೆ. ಆದರೆ, ಇಂಧನ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಬಹಳ ಕಷ್ಟ ಇದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಇಂಧನ ಬೆಲೆ ಕಡಿಮೆ ಮಾಡಬೇಕು ಎಂದು ಸಚಿವ ರಿಝ್ವಾನ್ ಆರ್ಶದ್ ಒತ್ತಾಯಿಸಿದರು.

Tags

PetrolDieselMinister Rizwan Arshad
share
ವಾರ್ತಾಭಾರತಿ
ವಾರ್ತಾಭಾರತಿ
Next Story
X