ಹಾಸನದ ನೂತನ ಎಸ್ಪಿಯಾಗಿ ಮೊಹಮ್ಮದ್ ಸುಜೀತ ಎಂ.ಎಸ್. ನೇಮಕ
![ಹಾಸನದ ನೂತನ ಎಸ್ಪಿಯಾಗಿ ಮೊಹಮ್ಮದ್ ಸುಜೀತ ಎಂ.ಎಸ್. ನೇಮಕ ಹಾಸನದ ನೂತನ ಎಸ್ಪಿಯಾಗಿ ಮೊಹಮ್ಮದ್ ಸುಜೀತ ಎಂ.ಎಸ್. ನೇಮಕ](https://www.varthabharati.in/h-upload/2023/09/05/1187259-whatsapp-image-2023-09-05-at-10650-pm.webp)
ಮೊಹಮ್ಮದ್ ಸುಜೀತ
ಹಾಸನ, ಸೆ.5: ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರನ್ನು ರಾಜ್ಯ ಸರಕಾರ ಮಂಗಳವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಾಸನದ ನೂತನ ಎಸ್ಪಿಯಾಗಿ ಮೊಹಮ್ಮದ್ ಸುಜೀತ.ಎಂ.ಎಸ್. ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಹರಿರಾಮ್ ಶಂಕರ್, ಐಪಿಎಸ್ ಅವರನ್ನು ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿದೆ.
2014 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಎಂ.ಎಸ್.ಮೊಹಮ್ಮದ್ ಸುಜೀತ ಅವರು ಈ ಹಿಂದೆ ಬೆಂಗಳೂರು ಸೌತ್ ಟ್ರಾಫಿಕ್ ಡಿಸಿಪಿಯಾಗಿದ್ದರು.
Next Story