Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ :...

ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ : ಪಾಡ್ ಕಾಸ್ಟ್ ಚರ್ಚೆಯ ವಿಡಿಯೋ ವೈರಲ್!

ವಾರ್ತಾಭಾರತಿವಾರ್ತಾಭಾರತಿ30 March 2025 8:05 PM IST
share
ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ : ಪಾಡ್ ಕಾಸ್ಟ್ ಚರ್ಚೆಯ ವಿಡಿಯೋ ವೈರಲ್!

ಬೆಂಗಳೂರು: ಈದ್‌ ದಿನ ರಸ್ತೆಯಲ್ಲಿ ನಮಾಝ್ ಮಾಡುವ ಕುರಿತ ಪ್ರಶ್ನೆ ಕೇಳಲಾದ ಪಾಡ್ ಕಾಸ್ಟ್ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. The Sujit Kumar Show ಎಂಬ ಯೂಟ್ಯೂಬ್ ಚಾನೆಲ್ ನ ಪಾಡ್ ಕಾಸ್ಟ್ ಶೋ ನಲ್ಲಿ ಕಾಂಗ್ರೆಸ್ ನಾಯಕ ಮತ್ತು ಆಲ್ ಇಂಡಿಯಾ ಮಿಲ್ಲಿ ಕಾಂಗ್ರೆಸ್ ನ ಸೈಯ್ಯದ್ ಶಫೀಯುಲ್ಲಾ ಸಾಹೇಬ್ ಅವರು ನಡೆಸಿದ ಚರ್ಚೆ ಸಾಕಷ್ಟು ಗಮನ ಸೆಳೆದಿದೆ.

ರಸ್ತೆಯಲ್ಲಿ ನಮಾಝ್ ವಿಚಾರವಾಗಿ ಪ್ರಶ್ನೆಯೆತ್ತಿದ ಪಾಡ್ ಕಾಸ್ಟ್ ಶೋ ನಡೆಸಿಕೊಡುವ ಸುಜಿತ್ ಕುಮಾರ್ ಅವರು, ಸೈಯ್ಯದ್ ಶಫೀಯುಲ್ಲಾ ಅವರ ಉತ್ತರ ಮತ್ತು ಮರುಪ್ರಶ್ನೆಗಳಿಗೆ ಉತ್ತರಿಸಲಾಗದೇ ತಿಣುಕಾಡಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ವಿಸ್ತ್ರತವಾಗಿ ವಿವಿಧ ವಿಚಾರಗಳ ಕುರಿತು ಸಾಗಿದ ಚರ್ಚೆಯ ಒಂದು ಹಂತದಲ್ಲಿ ಸುಜಿತ್ ಕುಮಾರ್ ಅವರು ರಸ್ತೆಯಲ್ಲಿ ನಮಾಝ್ ಮಾಡುವ ಕುರಿತು ಸಯ್ಯದ್ ಶಫೀಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ.

ಮುಸ್ಲಿಮರು ರಸ್ತೆಯಲ್ಲಿ ನಮಾಝ್ ಮಾಡುತ್ತಾರೆ. ರಸ್ತೆಯೇ ಮಸೀದಿ ಎಂದು ಭಾವಿಸಿ ನಮಾಝ್ ಮಾಡುತ್ತಾರೆ. ಅಲ್ಲದೇ ಬೀದಿಗಳು, ಉದ್ಯಾನವನಗಳು ಹೀಗೆ ಎಲ್ಲೆಂದರಲ್ಲಿ ನಮಾಝ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸುಜಿತ್ ಕುಮಾರ್ ಅವರು ಶಫಿಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ.

ಅದಕ್ಕೆ ಪ್ರಯುತ್ತರವಾಗಿ ಶಫೀಯುಲ್ಲಾ ಅವರು, ಈ ದೇಶದಲ್ಲಿ ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಎಲ್ಲರೂ ಸಮಾನ ನಾಗರೀಕರಲ್ಲವೇ? ರಸ್ತೆಯಲ್ಲಿ ಮುಸ್ಲಿಮರು ಮಾತ್ರ ನಮಾಝ್ ಮಾಡುವುದೇ? ಹಿಂದೂಗಳು ಏನೂ ಮಾಡುವುದಿಲ್ಲವೇ? ಎಂದು ಮರುಪ್ರಶ್ನೆ ಮಾಡುತ್ತಾರೆ.

ಆರಂಭದಲ್ಲಿ ಶಫೀಯುಲ್ಲಾ ಅವರ ಪ್ರಶ್ನೆಗೆ ಏನೂ ಉತ್ತರ ಕೊಡದೇ, ಹಾ… ಹಾ… ಎಂದಷ್ಟೇ ಹೇಳಿದ ಸುಜಿತ್ ಕುಮಾರ್, ಒಂದು ಹಂತದಲ್ಲಿ ಹಿಂದೂಗಳು ರಸ್ತೆಯಲ್ಲಿ ಏನೂ ಮಾಡುವುದಿಲ್ಲ ಎನ್ನುತ್ತಾರೆ. ಆಗ ಶಫೀಯುಲ್ಲಾ ನಿಮಗೆ ತಿಳಿದಿರದಿದ್ದರೆ ನಾನೇ ಆ ಬಗ್ಗೆ ಹೇಳಲೇ? ಹಿಂದೂಗಳು ರಸ್ತೆಯಲ್ಲಿ ಯಾವ ಆಚರಣೆಗಳನ್ನೂ ಮಾಡುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಆ ವೇಳೆ ಸುಜಿತ್ ಕುಮಾರ್ ಅವರು ಹಿಂದೂಗಳು ರಸ್ತೆಯಲ್ಲಿ ಧಾರ್ಮಿಕ ಆಚರಣೆ ಮಾಡುತ್ತಾರೆ ಎಂದು ಒಪ್ಪಿಕೊಳ್ಳುತ್ತಾರೆ.

ಕನ್ವರ್ ಯಾತ್ರಾರ್ಥಿಗಳು ಎಲ್ಲಿ ಹೋಗುತ್ತಾರೆ? ನೀವು ನನಗೆ ಗೊತ್ತಿಲ್ಲ ಎಂದು ಹೇಳುತ್ತೀರಿ. ಜವಾಬ್ದಾರಿಯುತ ನಾಗರಿಕರಾಗಿ ಈ ಬಗ್ಗೆ ಹೇಳಿ ಎಂದು ಶಫೀಯುಲ್ಲಾ ತೀವ್ರವಾಗಿಯೇ ಪ್ರಶ್ನಿಸುತ್ತಾರೆ.

ಮುಂದುವರಿದು ಅವರು, ಹಿಂದೂಗಳು ಗಣೇಶ ಹಬ್ಬಕ್ಕೆ ಎಷ್ಟುದಿನ ಗಣೇಶ ಮೂರ್ತಿ ಕೂರಿಸುತ್ತಾರೆ? ಮನೆಯೊಳಗೆ ಕೂರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಆಗ ಸುಜಿತ್ ಕುಮಾರ್ ಅವರು, ಗಣೇಶ ಮೂರ್ತಿಯನ್ನು 1,3,5,7 ದಿನ ಬೀದಿಯಲ್ಲಿ ಕೂರಿಸುತ್ತಾರೆ ಎನ್ನುತ್ತಾರೆ. ಅದಕ್ಕೆ ಶಫೀಯುಲ್ಲಾ ನಮ್ಮ ಕಡೆ ಇಷ್ಟು ದಿನಗಳು, ಮುಂಬೈನಲ್ಲಿ ಎಷ್ಟು ದಿನ ಬೀದಿಯಲ್ಲಿ ಕೂರಿಸುತ್ತಾರೆ ನಿಮಗೆ ತಿಳಿದಿದೆಯಾ? ಮುಂಬೈನ ಲಾಲ್ ಬಾಗ್ ಗಣೇಶನನ್ನು ಬೀದಿಯಲ್ಲಿ, ರಸ್ತೆಯಲ್ಲಿ ತಿಂಗಳ ಕಾಲ ಇರಿಸುತ್ತಾರಲ್ಲವೇ ಎಂದು ಹೇಳಿರುವುದು ವೀಡಿಯೊದಲ್ಲಿದೆ.

ಕೃಷ್ಣ ಜನ್ಮಾಷ್ಟಮಿಗೂ ಮೊಸರು ಕುಡಿಕೆಗೂ ಇದೇ ಪರಿಪಾಠವಿದೆಯಲ್ಲವೇ ಎಂದು ಅವರು ಸುಜಿತ್ ಕುಮಾರ್ ಗೆ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ನಡೆಯುವ ಕರಗ ಉತ್ಸವದ ಬಗ್ಗೆಯೂ ಹೇಳಿರುವ ಶಫೀಯುಲ್ಲಾ ಅದೂ ರಸ್ತೆಯಲ್ಲಿ ನಡೆಯುವ ಧಾರ್ಮಿಕ ಆಚರಣೆ ಎಂದು ನೆನಪಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಶಫೀಯುಲ್ಲಾ ನಾನು ಈ ಪ್ರಶ್ನೆಯನ್ನು ನಿಮ್ಮಂತಹ ಹಲವರಿಗೆ ಕೇಳಿದ್ದೇನೆ. ನಮಾಝ್ ನಿರ್ವಹಿಸಿವುದು ಹೆಚ್ಚೋ? ಗಣೇಶನನ್ನು ಕೂರಿಸುವುದು ಹೆಚ್ಚೋ ನೀವೇ ಹೇಳಿ. ಗಣೇಶನನ್ನು ಕೂರಿಸುವ ಹಲವರು ನನ್ನ ಹಿಂದೂ ಸ್ನೇಹಿತರು ನನ್ನನ್ನೂ ಆ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ನಾನೂ ಹೋಗಿದ್ದೇನೆ. ದಸರಾ ಸಂದರ್ಭದಲ್ಲಿಯೂ ಇದೇ ರೀತಿಯ ಆಚರಣೆಗಳು ನಡೆಯುತ್ತವೆ ಎಂದು ಶಫೀಯುಲ್ಲಾ ಹೇಳಿದ್ದಾರೆ.

ಎಲ್ಲ ಧರ್ಮಗಳ ಆಚರಣೆಗಳೂ ರಸ್ತೆಯಲ್ಲಿ ನಡೆಯುವಾಗ, ಅದೂ ದಿನಗಟ್ಟಲೆ, ವಾರಗಟ್ಟಲೆ ನಡೆಯುವಾಗ ಕೇವಲ ಒಂದು ಧರ್ಮದ ಆಚರಣೆ ಕೆಲವೇ ನಿಮಿಷ ನಡೆದ ಕೂಡಲೇ ಅದನ್ನು ಮಾತ್ರ ಎತ್ತಿಕೊಂಡು ದೊಡ್ಡ ವಿವಾದವಾಗಿಸುವುದು ಸರಿಯಲ್ಲ ಎಂದು ಶಫೀಯುಲ್ಲಾ ಅವರು ತಮ್ಮ ಉತ್ತರದ ಮೂಲಕ ಸಂದೇಶ ರವಾನಿಸಿದ್ದಾರೆ.

ಈ ಪಾಡ್ ಕಾಸ್ಟ್ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿರುವ ಸರಾಹ್ ಡಿಯೋ ಎಂಬ ಬಳಕೆದಾರರು, ಯಾರೀ ಪಾಡ್ ಕಾಸ್ಟರ್? ಅವರ ಡಬಲ್ ಸ್ಟಾಂಡರ್ಡ್ ಪ್ರಶ್ನೆಗೆ ಉತ್ತರಿಸಲು ಸರಿಯಾದ ವ್ಯಕ್ತಿಯೇ ಬಂದಿದ್ದಾರೆ ಎಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X