ಜಾತಿಗಣತಿ ವರದಿ ಸಚಿವ ಸಂಪುಟಕ್ಕೆ ಬಂದರೆ ಚರ್ಚೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಜಾತಿಗಣತಿ ವರದಿ ಇನ್ನು ಸಚಿವ ಸಂಪುಟದ ಮುಂದೆ ಬಂದಿಲ್ಲ. ಬಂದ ಮೇಲೆ ವರದಿಯ ಬಗ್ಗೆ ಖಂಡಿತ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಜಾತಿ ಗಣತಿ ಮಾಡಿಸಬೇಕು. ನಂತರ ನಮ್ಮ ಸರಕಾರಕ್ಕೆ ಉಪದೇಶ ಮಾಡಬೇಕು ಎಂದರು.
ಇನ್ನು ಯಾವುದೇ ರಾಜ್ಯವಿರಲಿ, ಗಡಿ ವಿಚಾರದಲ್ಲಿ ಕಾನೂನಾತ್ಮಕವಾಗಿಯೇ ಹೋರಾಡಬೇಕು. ಯಾರೋ ಮಂತ್ರಿ, ಮುಖ್ಯಮಂತ್ರಿ ಹೇಳಿದರು ಎಂದು ಅಡ್ಡಾದಿಡ್ಡಿ ಗೆರೆ ಎಳೆಯಲು ಬರುವುದಿಲ್ಲ. ನಮ್ಮ ರಾಜ್ಯದಲ್ಲಿ ಬಂದು ಘರ್ಷಣೆ ಮಾಡಲು, ಪುಂಡಾಟಿಕೆ ನಡೆಸಲು ಮಹಾರಾಷ್ಟ್ರದವರಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇದನ್ನು ಎಚ್ಚರಿಕೆ ಅಥವಾ ಮನವಿ ಎಂದು ಹೇಗೆ ಬೇಕಾದರೂ ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.
Next Story




