Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಬಡ ಮಕ್ಕಳಿಗೆ ಜ್ಞಾನ ದೇಗುಲ- ಹೆಮ್ಮನ...

ಬಡ ಮಕ್ಕಳಿಗೆ ಜ್ಞಾನ ದೇಗುಲ- ಹೆಮ್ಮನ ಬೇತೂರು ಗ್ರಾಪಂ ದ್ಯಾಮವ್ವನಹಳ್ಳಿ ಸರಕಾರಿ ಶಾಲೆ

ಪ್ರಕಾಶ್‌ ಎಚ್ ಎನ್ಪ್ರಕಾಶ್‌ ಎಚ್ ಎನ್19 Oct 2023 10:13 AM IST
share
ಬಡ ಮಕ್ಕಳಿಗೆ ಜ್ಞಾನ ದೇಗುಲ- ಹೆಮ್ಮನ ಬೇತೂರು ಗ್ರಾಪಂ ದ್ಯಾಮವ್ವನಹಳ್ಳಿ ಸರಕಾರಿ  ಶಾಲೆ

ದಾವಣಗೆರೆ: ಶಿಕ್ಷಕರ ಸೇವಾ ಮನೋಭಾವ,ಗ್ರಾಮಸ್ಥರ ಸಹಕಾರ,ಮಕ್ಕಳಲ್ಲಿ ಕಲಿಯುವಂತಹ ಆಸಕ್ತಿಯಿದ್ದರೆ ಯಾವುದೇ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ತಾಲ್ಲೂಕಿನ ಹೆಮ್ಮನ ಬೇತೂರು ಗ್ರಾಮ ಪಂಚಾಯತ್ ವ್ಯಾಪಿಯ ದ್ಯಾಮವ್ವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಕ್ಕೊಂದು ಉದಾಹರಣೆಯಾಗಿದೆ.

ದ್ಯಾಮವ್ವನಹಲ್ಲಿ ಒಂದು ಪುಟ್ಟ ಹಳ್ಳಿ. ಈ ಪುಟ್ಟ ಗ್ರಾಮದಲ್ಲಿ 1960 ರಲ್ಲಿ ಪ್ರಾರಂಭವಾದ ಈ ಕಿರಿಯ ಪ್ರಾಥಮಿಕ ಶಾಲೆ ಕೂಲಿ ಕಾರ್ಮಿಕರು ಮತ್ತು ರೈತಾಪಿ ವರ್ಗದವರ ಮಕ್ಕಳಿಗೆ ಜ್ಞಾನ ದೇಗುಲವಾಗಿದೆ.

ಕೋವಿಡ್ ನಂತಹ ವಿಷಮ ಕಾಲದಲ್ಲೂ ಇಲ್ಲಿನ ಇಬ್ಬರು ಶಿಕ್ಷಕರು ಶಾಲೆಯ ಅಭಿವೃದ್ಧಿಯನ್ನು ಸವಾಲಾಗಿ ತೆಗೆದುಕೊಂಡು ಇರುವ 2 ಕೊಠಡಿಗಳಲ್ಲಿ ನಲಿಕಲಿ ತರಗತಿಯ ಕೊಠಡಿಯನ್ನು ನವೀಕರಿಸಬೇಕೆಂದು ಗ್ರಾಮಸ್ಥರ ಜೊತೆ ಸರ್ಕಾರಿ ಶಾಲೆಯ ಬಗ್ಗೆ ಸಂವಾದ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ "ನಮ್ಮ ಶಾಲೆ ನಮ್ಮ ಹೆಮ್ಮೆ"ಎಂಬ ಯೋಜನೆ ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಲಾಯಿತು.

ಗ್ರಾಮಸ್ಥರ ಆರ್ಥಿಕ ನೆರವು, ದಾನಿಗಳ ಸಹಕಾರದೊಂದಿಗೆ ನಲಿಕಲಿ ಕೊಠಡಿ ಸಂಪೂರ್ಣ ನವೀಕರಣಗೊಂಡು ಮಕ್ಕಳ ಮನೆಯಂತಾಯಿತು. ಇದರ ಪರಿಣಾಮವಾಗಿ 17 ಇದ್ದಂತಹ ದಾಖಲಾತಿ ಪ್ರಮಾಣ 29 ಕ್ಕೆ ಏರಿಕೆ ಕಂಡಿತು.

ರಾಷ್ಟ್ರದ ಅತ್ಯುತ್ತಮ ಮೆದುಳುಗಳು ತರಗತಿಯ ಕೊನೆಯ ಬೆಂಚುಗಳಲ್ಲಿ ಕಂಡುಬರಬಹುದು ಎಂಬ ಎಪಿ ಜೆ ಅಬ್ದುಲ್ ಕಲಾಂ ಅವರ ಹೇಳುವಂತೆ ಈ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಜ್ಞಾನ ಉಣಬಡಿಸುವ ಕೇಂದ್ರವಾಗಿದೆ.

ನವೀಕರಣಗೊಂಡ ನಲಿಕಲಿ ಕೊಠಡಿಯಲ್ಲಿ ಗೋಡೆ ಬರವಣಿಗೆ, ಚಿತ್ರಗಳು ,ಬಣ್ಣಗಳು,ವಿವಿಧ ವೃತ್ತಿಗಳ ಪರಿಚಯ ಹೇಳಿಕೆಗಳು,ಗಣಿತ ,ಪರಿಸರಕ್ಕೆ ಸಂಬಂದಿಸಿದ ವಿಷಯ ವಸ್ತು ,ಪ್ರಾಣಿ,ಪಕ್ಷಿ ವಿವಿಧ ರೀತಿಯ ಕಲಿಕೆಗೆ ಸಂಬಂಧಿಸಿದ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಮಕ್ಕಳು ಈ ಕೊಠಡಿಗೆ ಬಂದ ತಕ್ಷಣ ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳ ಪುಟ್ಟ ಪ್ರಪಂಚ ಇಲ್ಲಿ ತೆರೆದುಕೊಳ್ಳುತ್ತದೆ. ಇಂತಹದೊಂದು ಉತ್ತಮ ಶಾಲಾ ಪರಿಸರ ಹೊಂದಿರುವುದಕ್ಕೆ ʼಪರಿಸರ ಮಿತ್ರʼ ಎಂಬ ಪ್ರಶಸ್ತಿ ಈ ಶಾಲೆಗೆ ದೊರಕಿದೆ.

ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ಸರ್ವೋತೋಮುಖ ರಾಷ್ಟ್ರೀಯ ಪ್ರಗತಿಗೆ ಆಧಾರವಾಗಿದೆ ಎಂಬ ಡಾ.ಬಿ ಆರ್ ಅಂಬೇಡ್ಕರ್ ಅವರ ಹೇಳಿಕೆಯು ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಆಧಾರಸ್ತಂಭವಾಗಿದೆ. ಈ ನಿಟ್ಟಿನಲ್ಲಿ ದ್ಯಾಮವ್ವನಹಳ್ಳಿ ಶಾಲೆ ಸಾಕ್ಷಿಕರಿಸಿದೆ.

ಜಿ.ಕೊಟ್ರೇಶ್, ಡಿಡಿಪಿಐ, ದಾವಣಗೆರೆ.

…….......................................

ʼಗ್ರಾಮಸ್ಥರ ಸಹಕಾರ, ಸೇವಾ ಮನೋಭಾವವುಳ್ಳ ಪ್ರತಿಯೊಬ್ಬರಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದುʼ -ನಾಗರಾಜ ಹೆಚ್ ಶಿಕ್ಷಕರು ದ್ಯಾಮವ್ವನಹಳ್ಳಿ

……………………...............

ʼಕೋವಿಡ್ ಮಹಾಮಾರಿ ಪರಿಣಾಮ ಶಾಲೆಗಳು ಮುಚ್ಚಿರುವ ಸಂದರ್ಭವನ್ನು ಬಳಸಿಕೊಂಡ ಶಿಕ್ಷಕರು ಶಾಲೆಯ ನಲಿಕಲಿ ಕೊಠಡಿಯನ್ನು ಗ್ರಾಮಸ್ಥರ ಸಹಕಾರದಿಂದ ನವೀಕರಣಗೊಳಿಸಿರುವುದು ನಮಗೆಲ್ಲ ಪ್ರೇರಣೆಯಾಗಿದೆʼ

ಶೋಭಾರಾಣಿ ಎಂ ಪಿ- ಅಧ್ಯಕ್ಷರು, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘ ದಾವಣಗೆರೆ ಉತ್ತರ

……...............................................

ʼನಲಿಕಲಿ ಸಂಪೂರ್ಣ ಚಟುವಟಿಕೆ ಆಧಾರಿತ ಬೋಧನಾ ಕ್ರಮವಾಗಿದ್ದು ಮಕ್ಕಳ ಮನೆಯನ್ನಾಗಿ ನವೀಕರಣಗೊಳಿಸಿದ ಶಿಕ್ಷಕರ ಕಾರ್ಯ ಮಾದರಿಯಾಗಿದ್ದು ತಾಲೂಕಿನಾದ್ಯಂತ ನಲಿಕಲಿ ಕೊಠಡಿಗಳು ಶೃಂಗಾರಗೊಂಡು ಮಕ್ಕಳ ಕಲಿಕೆಗೆ ಪ್ರೇರಣೆಯಾಗಲಿʼ

ಶೇರ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾವಣಗೆರೆ ಉತ್ತರ

...

ʼಸರ್ಕಾರದ ಸೌಲಭ್ಯಗಳ ಜೊತೆಗೆ ಗ್ರಾಮಸ್ಥರ ನೆರವಿನಿಂದ ನಲಿಕಲಿ ಕೊಠಡಿಯನ್ನು ನವೀಕರಣಗೊಳಿಸಿರುವುದು ನಮಗೆಲ್ಲ ಮಾದರಿಯಾಗಿದೆʼ

ಅಬು ಸ್ವಾಲೇಹ್, ನಿರ್ದೇಶಕರು ಕರಾಪ್ರಾಶಾಶಿಸಂಘ ದಾವಣಗೆರೆ ಉತ್ತರ‌





share
ಪ್ರಕಾಶ್‌ ಎಚ್ ಎನ್
ಪ್ರಕಾಶ್‌ ಎಚ್ ಎನ್
Next Story
X