Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಕಾರಕ ಪ್ರೇರಕ

ಕಾರಕ ಪ್ರೇರಕ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,25 Aug 2024 10:07 AM IST
share
ಕಾರಕ ಪ್ರೇರಕ

ಒಂದು ವಸ್ತು ತಾನು ಇರುವ ಜಾಗದಿಂದ ಸ್ಥಾನಪಲ್ಲಟ ಮಾಡಬೇಕಾದರೆ ಅಥವಾ ಮಗ್ಗುಲು ಬದಲಾಯಿಸಬೇಕೆಂದರೆ ಅದಕ್ಕೆ ಮತ್ತೊಂದರ ಶಕ್ತಿಯ ಪ್ರಯೋಗದ ಅಥವಾ ಬಾಹ್ಯ ಒತ್ತಡದ ಅಗತ್ಯ ಇರುತ್ತದೆ. ದಿನ ಬೆಳಗಾದರೆ ಕಾಣುವುದನ್ನೇ ಭೌತಶಾಸ್ತ್ರದಲ್ಲಿ ಪಾಠವಾಗಿಯೂ ಕಲಿಯುತ್ತೇವೆ.

ಹಾಗೆಯೇ ರಾಸಾಯನಿಕ ಕ್ರಿಯೆಯು ನಡೆಯುವ ಸಮಯದಲ್ಲಿ ಅಣುಗಳಲ್ಲಿನ ಪರಮಾಣು ಬಂಧಗಳು ಒಡೆಯುವುದಕ್ಕೆ, ಬೇರ್ಪಡುವುದಕ್ಕೆ ಅಥವಾ ಮರುಜೋಡಣೆ ಆಗುವ ಕೆಲಸವನ್ನು ಸರಾಗಗೊಳಿಸಲು ಅಥವಾ ವೇಗಗೊಳಿಸಲು ಅಥವಾ ಆ ಕೆಲಸ ಆಗುವುದಕ್ಕೆ ಇರುವ ಅಡೆತಡೆಯನ್ನು ನಿವಾರಿಸಲು ಯಾವುದಾದರೂ ವೇಗವರ್ಧಕ ಶಕ್ತಿ ಅಥವಾ ಪ್ರೇರಕಗಳು ಬೇಕಾಗುತ್ತವೆೆ. ಈ ವೇಗವರ್ಧಕ ಅಥವಾ ಪ್ರೇರಕ ರಾಸಾಯನಿಕ ಕ್ರಿಯೆ ನಮಗೆಲ್ಲಾ ಚೆನ್ನಾಗಿ ಪರಿಚಯವಿರುವುದೇ ಆಗಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೊಳೆಯಾಗಿರುವ ಬಟ್ಟೆಯನ್ನು ತೊಳೆಯಲು ನೀರನ್ನು ಉಪಯೋಗಿಸುತ್ತೇವೆ. ನೀರು ಮುಖ್ಯವಾದ ಸಾಧನ ಅಂದರೆ ಕಾರಕ. ಆದರೆ ನೀರಿನಿಂದಷ್ಟೇ ಕೊಳೆ ಹೋಗದು. ಹಾಗಾಗಿ ನೀರಿನ ಜೊತೆಗೆ ಸೋಪ್ ಪೌಡರ್ ಉಪಯೋಗಿಸುತ್ತೇವೆ. ಬಟ್ಟೆಯಲ್ಲಿನ ಕೊಳೆಯನ್ನು ಹೋಗಲಾಡಿಸಲು ಸೋಪಿನ ಪುಡಿ ನೀರಿನ ಜೊತೆಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಅಣುಬಂಧ, ಅದರಲ್ಲಿನ ಪರಮಾಣು ಬಂಧ, ಆಮ್ಲಜನಕ, ಜಲಜನಕ, ಇಂಗಾಲದ ಬಂಧ; ಇಷ್ಟೆಲ್ಲಾ ತೀರಾ ರಸಾಯನ ಶಾಸ್ತ್ರದ ಅಧ್ಯಯನ ಈಗ ಸದ್ಯಕ್ಕೆ ಬೇಡ. ಬಟ್ಟೆಯಲ್ಲಿನ ಕೊಳೆ ತೊಳೆಯಲು ನೀರು ಕಾರಕ, ಸೋಪಿನ ಪುಡಿ ಪ್ರೇರಕ.

ಕಾರಕ ಅಂದರೆ ಉಂಟು ಮಾಡುವುದರ ಜೊತೆಗೆ ಮತ್ತೊಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಅಂಶವನ್ನು ಗಮನಕ್ಕೆ ತೆಗೆದುಕೊಳ್ಳೋಣ. ಹಾಗೆಯೇ ಮನಸ್ಸಿನ ವಿಷಯದಲ್ಲಿಯೂ ಕೂಡಾ ಕಾರಕದೊಡನೆ ಪ್ರೇರಕ ಶಕ್ತಿಗಳು ಅಥವಾ ವೇಗವರ್ಧಕ (ಕ್ಯಾಟಲಿಸ್ಟ್)ಗಳು ಕೆಲಸ ಮಾಡುತ್ತವೆ.

ಕೆಲವರು ಮದ್ಯಪಾನದಿಂದ ಮತ್ತರಾಗಿ ಕೆಟ್ಟ ಮಾತುಗಳಿಂದ ಜಗಳವಾಡುತ್ತಾರೆ. ಆಮೇಲೆ ಅಮಲಿಳಿದ ಮೇಲೆ ‘‘ಏನೋ ಕುಡಿದ ಜ್ಞಾನದಲ್ಲಿ ಬಾಯಿಗೆ ಬಂದಂತೆ ಅಂದುಬಿಟ್ಟೆ, ಬೇಜಾರು ಮಾಡಿಕೊಳ್ಳಬೇಡ’’ ಎನ್ನುತ್ತಾರೆ. ಹಾಗೆ ಕೇಳುವುದು ಕ್ಷಮೆ ಕೇಳುವುದರ ಮತ್ತೊಂದು ರೂಪವೆಂದೇ ತಿಳಿಯೋಣ. ಆದರೆ ಕುಡಿತ ಎಂಬುದರ ನಶೆಯು ಅವರಲ್ಲಿ ಹೊಸ ವಿಚಾರವನ್ನು, ಹೊಸ ಪದಗಳನ್ನು, ಹೊಸ ಭಾವನೆಯನ್ನು ಹುಟ್ಟುಹಾಕಿ ತನ್ನ ಎದುರಿನವರ ಮೇಲೆ ಪ್ರಯೋಗಿಸಿರುವುದಲ್ಲ. ಅವರಲ್ಲಿ ಮೊದಲೇ ಕಾರಕವಾಗಿ ಇದ್ದಂತಹ ಮನೋಭಾವವು ಹೊರಗೆ ಪ್ರಕಟಗೊಳ್ಳಲು ಕುಡಿತ ಎಂಬುದು ಕ್ಯಾಟಲಿಸ್ಟ್ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡಿರುತ್ತದೆ ಅಷ್ಟೇ.

ಕೋಪದಲ್ಲಿ ಏನೋ ಒಂದು ಮಾತು ಹೇಳಿಬಿಟ್ಟೆ, ಬೇಜಾರು ಮಾಡಿಕೊಳ್ಳಬೇಡಿ ಎಂದು ಯಾರಾದರೂ ಹೇಳುವ ಸಂದರ್ಭದಲ್ಲಿಯೂ ಈ ವಿಷಯ ಅನ್ವರ್ಥವಾಗುತ್ತದೆ. ಅವರಲ್ಲಿ ಈಗಾಗಲೇ ಇರುವಂತಹ ಅಭಿಪ್ರಾಯ ಮತ್ತು ಧೋರಣೆಗಳನ್ನೇ ಹೊರಗೆ ಹಾಕಲು ಕೋಪ ಎಂಬ ಭಾವನೆಯು ವೇಗವರ್ಧಕವಾಗಿ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡಿರುತ್ತದೆ.

ಮನಸ್ಸಿನ ಅಡಗುತಾಣದಲ್ಲಿ ಅನೇಕಾನೇಕ ಕಾರಕ ಗುಣಗಳು ಭಾವನೆಗಳ, ಬಯಕೆಗಳ, ಭಯಗಳ, ಬಂಧಗಳ ರೂಪದಲ್ಲಿ ಅಡಗಿಕೊಂಡಿದ್ದು ಆ ಕಾರಕ ಗುಣಗಳಿಗೆ ಅನುರೂಪವಾದ ಗುಣಗಳದ್ದೇ ಮಾತಿನ ರೂಪದಲ್ಲೋ, ದೃಶ್ಯದ ರೂಪದಲ್ಲೋ ಅಥವಾ ವರ್ತನೆಗಳ ರೂಪದಲ್ಲೋ ವೇಗವರ್ಧಕಗಳು ಪ್ರಚೋದನೆ ನೀಡಿದರೆ ಜಡವಾಗಿರುವ ಕಾರಕಗಳು ಚುರುಕುಗೊಳ್ಳುತ್ತವೆೆ ಮತ್ತು ಕ್ರಿಯಾಶೀಲವಾಗುತ್ತವೆ.

ಹಂಚಿಕೊಳ್ಳುವ ಕಾರಕ ಗುಣವುಳ್ಳವನಿಗೆ ನೀಡಬೇಕಾದ ಪ್ರೇರಕ ಸಂದರ್ಭ ಒದಗಿದಾಗ ಅವನು ಔದಾರ್ಯ ತೋರುತ್ತಾನೆ. ಅದೇ ರೀತಿ ವ್ಯಕ್ತಿಯಲ್ಲಿನ ಕಾರಕವಾಗಿರುವ ಕಾಮುಕಗುಣಗಳು ಕಾಮೋತ್ತೇಜಕ ಪೋರ್ನ್ ವೀಡಿಯೊಗಳನ್ನು ನೋಡಿದಾಗ ಕಾಮೋದ್ರೇಕಗೊಳ್ಳುತ್ತಾನೆ.

ಮನೋಗುಣ ಅಥವಾ ಮನೋಭಾವವೆಂಬಂತೆ ಅಡಗಿರುವ ಯಾವುದೇ ಕಾರಕ ಗುಣಗಳಿಗೆ ಹೊರಗಿನಿಂದ ಕ್ಯಾಟಲಿಸ್ಟ್ ಅಥವಾ ವೇಗವರ್ಧಕಗಳು ದೊರಕುತ್ತಿರುತ್ತವೆ. ವ್ಯಕ್ತಿಯಲ್ಲಿರುವ ಅಸಹನೆ, ಅಹಂಕಾರ, ಆಕ್ರೋಶವೇ ಮೊದಲಾದವೆಲ್ಲಾ ನಾನಾ ರೂಪಗಳಲ್ಲಿ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಕಟಗೊಳ್ಳುತ್ತಿದ್ದು ಅವು ಇನ್ನಿತರರಲ್ಲಿ ಅಡಗಿರುವ ಅಸಹನೆ, ಅಹಂಕಾರ ಮತ್ತು ಆಕ್ರೋಶಗಳನ್ನು ಹೊರಗೆಡವಲು ಕ್ಯಾಟಲಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತವೆ.

ಬರಹಗಳು, ಭಾಷಣಗಳು, ಸಿನೆಮಾಗಳು, ಹಾಡುಗಳು, ನಾಟಕಗಳು ಮತ್ತು ವ್ಯಕ್ತಿಗತವಾದಂತಹ ನಡೆ, ನುಡಿಗಳೂ ಕೂಡ ಮನುಷ್ಯರ ಮನಸ್ಸಿನ ಅಣುಗಳಲ್ಲಿನ ಭಾವರೂಪದ ಪರಮಾಣುಗಳ ಬಂಧಗಳನ್ನು ಕಟ್ಟುವ, ಕೆಡವುವ, ಮರುಕಟ್ಟುವ, ಭದ್ರಪಡಿಸುವ, ದುರ್ಬಲಗೊಳಿಸುವ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತವೆ.

ಹಾಗೆಯೇ ಅಸೂಯೆ, ಅಸಮಾಧಾನ, ಅಸಹನೆ, ಅಹಂಕಾರ, ದ್ವೇಷ, ಆಕ್ರೋಶ, ಆಗ್ರಹಗಳೆಲ್ಲದರ ಜೊತೆಗೆಯೇ ವ್ಯಕ್ತಿಯಲ್ಲಿ ಸಮಾಧಾನ, ಸಂಯಮ, ಔದಾರ್ಯ, ಪ್ರೇಮ, ಮಮತೆಗಳಂತಹ ಕಾರಕ ಗುಣಗಳೂ ಮನೋಗುಡಾಣದಲ್ಲಿ ಅಡಕವಾಗಿರುತ್ತವೆ.

ಯಾವುದೇ ವ್ಯಕ್ತಿಗಳೊಡನೆ ನಾವು ಪರಸ್ಪರ ಎದುರಾದಾಗ ನನ್ನ ನುಡಿ, ನಡೆ, ವರ್ತನೆ ಎದುರಿಗಿನ ವ್ಯಕ್ತಿಯಲ್ಲಿನ ಯಾವ ಗುಣದೊಂದಿಗೆ ಸೇರಿ ವೇಗವರ್ಧಕವಾಗಿ ಅಥವಾ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಎಚ್ಚರವಹಿಸಬೇಕು. ಏಕೆಂದರೆ ಆ ಗುಣಗಳಲ್ಲಿ ಕೆಲವು ಪ್ರಬಲ, ಕೆಲವು ದುರ್ಬಲ. ಪ್ರಬಲವಾಗಿರುವ ಗುಣಗಳು ಬೇಗ ಉತ್ತೇಜಕಗೊಳ್ಳುತ್ತವೆ. ದುರ್ಬಲವಾಗಿರುವವು ಉತ್ತೇಜಿತಗೊಳ್ಳುವುದಿಲ್ಲ. ಏನೇ ಆಗಲಿ ನಮ್ಮ ನಡೆ ನುಡಿಗಳು ಎದುರಿಗಿನ ವ್ಯಕ್ತಿಗಳಲ್ಲಿ ಯಾವ ಕಾರಕ ಗುಣಗಳಿಗೆ ಕ್ಯಾಟಲಿಸ್ಟ್ ಅಥವಾ ಪ್ರೇರಕಶಕ್ತಿಗಳಾಗಿ ಕೆಲಸ ಮಾಡಬಹುದು ಎಂಬ ಎಚ್ಚರಿಕೆ ಬಂದರೆ ಸಂಘರ್ಷಗಳು ತಮ್ಮ ತೀವ್ರತೆಯನ್ನು ಕಳೆದುಕೊಳ್ಳಬಹುದು.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X