Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. 1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ...

1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ ಕಥನ....

ವಾರ್ತಾಭಾರತಿವಾರ್ತಾಭಾರತಿ9 Nov 2023 11:18 AM IST
share
1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ ಕಥನ....
ಕೃತಿ: ಚದುರಂಗ ಲೇಖಕರು: ಡಾ. ಲತಾ ಗುತ್ತಿ ಮುಖಬೆಲೆ: 495 ರೂ. ಪ್ರಕಾಶಕರು: ಅಂಕಿತ ಪುಸ್ತಕ 53, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು-560004 ಫೋನ್:080-26617100, 26617755, ಮೊ:9019190502

- ಡಾ. ಎಸ್. ಪಿ. ಪದ್ಮಪ್ರಸಾದ್, ತುಮಕೂರು

ಡಾ. ಲತಾ ಗುತ್ತಿಯವರು ಪಳಗಿದ ಲೇಖಕಿ. ಸುಮಾರು ಮೂವತ್ತು ಕೃತಿಗಳನ್ನು ರಚಿಸಿರುವ/ಸಂಪಾದಿಸಿರುವ ಇವರ ಕಾದಂಬರಿಗಳ ಪೈಕಿ ಇದು ಮೂರನೆಯದು. ಇವರ ಎರಡನೆಯ ಕಾದಂಬರಿ ‘ಕರಿನೀರು’ ಅಂಡಮಾನಿನಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಕತೆ. ತುಂಬಾ ಘನವಾಗಿ ರೂಪುಗೊಂಡು ಆ ಕೃತಿ ಏಳು ಪ್ರಶಸ್ತಿಗಳನ್ನು ಗಳಿಸಿ ಲೇಖಕಿಯ ಸಾಮರ್ಥ್ಯವನ್ನು ಎತ್ತಿ ಸಾರಿತು. ಅದರ ನಂತರ ಸಾಕಷ್ಟು ಅಂತರದಲ್ಲಿ ರೂಪುಗೊಂಡಿರುವ ಕಾದಂಬರಿ ಈ ‘ಚದುರಂಗ’.

ಈ ಕೃತಿ ರಚನೆಗಾಗಿ ಲೇಖಕಿ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿ ಕೊಂಡಿರುವುದು ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ತುರ್ತುಪರಿಸ್ಥಿತಿಯ ಪೂರ್ವ ಉತ್ತರ ಕಾಲದ ಕಥನ ಎಂದು ಲೇಖಕಿ ಹೇಳಿಕೊಂಡಿದ್ದರೂ ಇದು ಕೇವಲ ಅಷ್ಟಕ್ಕೇ ಸೀಮಿತವಾದ ಕಥನವಾಗಿ ಉಳಿದಿಲ್ಲ. ಶರಣರ ಚಳವಳಿ, ಅದರ ಆಶಯಗಳು ಕಲ್ಯಾಣಕ್ರಾಂತಿಯ ಬಳಿಕ ಅವರು ಚದುರಿಹೋದ ಬಗೆ ಇಲ್ಲಿಂದ ಹಿಡಿದು ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಅವರವರೆಗೂ ಇಲ್ಲಿ ಚರ್ಚೆಗಳು ನಡೆದಿವೆ.

ಕಥಾನಾಯಕನಾದ ಗುರುಪಾದನ ವ್ಯಕ್ತಿತ್ವದ ಚಿತ್ರಣ ಅತಿ ಆದರ್ಶದ್ದೇನೋ ಅನಿಸುತ್ತದೆ. ಆದರೆ ಅಂಥ ಆದರ್ಶದ ಬೆನ್ನುಹತ್ತಿ ಸ್ವಂತ ಸುಖ ನಿರ್ಲಕ್ಷಿಸಿದ ಹಲವು ಮಂದಿ ಈಗಲೂ ನಮ್ಮ ನಡುವೆ ಇದ್ದಾರೆ. ಉಳವಿ ಜಾತ್ರೆಗೆ ಹೋಗುವ ಯಾತ್ರಿಕರ ನಡೆ-ನುಡಿಗಳ ಚಿತ್ರಣ, ಶ್ರೀಕಂಠಪ್ಪನ ಆಟಾಟೋಪದ ಬದುಕು, ಅದರ ಅಂತಿಮ ಫಲಶ್ರುತಿ, ಗುರುಪಾದ ವಾಸಿಸುವ ಚಾಳಿನ ಹಲವು ಬಗೆಯ ವ್ಯಕ್ತಿತ್ವಗಳು-ಇವೆಲ್ಲ ತುಂಬ ವಾಸ್ತವ ರೀತಿಯಲ್ಲಿ ಇಲ್ಲಿ ಚಿತ್ರಿತವಾಗಿವೆ. ಉಳವಿಯ ಜಾತ್ರೆಗೆ ಈಗ ಯಾರೂ ಹಾಗೆ ಹೋಗಲಾರರು. ಆದರೆ ‘ಗತ’ದ ರೀತಿಯೊಂದನ್ನು ಕಟ್ಟಿಕೊಡುವಲ್ಲಿ ಲೇಖಕಿ ತಾಳ್ಮೆಯಿಂದ ವಿಷಯ ಸಂಗ್ರಹಿಸಿ ಚಿತ್ರವನ್ನು ರೂಪಿಸಿರುವ ಬಗೆ ಮೆಚ್ಚುವಂಥದು. ತುರ್ತುಪರಿಸ್ಥಿತಿಯಲ್ಲಿ ಬಹಳಷ್ಟು ಶ್ರೀಮಂತರ ಸೊಲ್ಲು ಅಡಗಿ ಹೋಗಿತ್ತು. ಅಟಾಟೋಪ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಶ್ರೀಕಂಠಪ್ಪ ಅಷ್ಟು ಗೈರತ್ತು ತೋರುತ್ತಿದ್ದದು ಹೇಗೆ ಎಂಬುದು ವಿಸ್ಮಯ ಮೂಡಿಸುತ್ತದೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರದ ರಾಜಕೀಯ ಚಟುವಟಿಕೆಗಳ ಜೊತೆಗೆ ಗ್ರಾಮ-ನಗರಗಳ ಜೀವನ ಚಿತ್ರಣಗಳ ಆಗುಹೋಗುಗಳನ್ನು ಕೆಲಮಟ್ಟಿಗೆ ವಿಶ್ವದ ಆಗುಹೋಗುಗಳನ್ನೂ ಓದುಗರೆದುರು ಸಮಾನಾಂತರವಾಗಿ ತೆರೆದಿಡುವ ಪ್ರಯತ್ನ ಈ ಕೃತಿಯಲ್ಲಿ ಲೇಖಕಿ ಮಾಡಿದ್ದಾರೆ. ಆದ್ದರಿಂದ ಏಕಕಾಲಕ್ಕೆ ಈ ಕೃತಿಯು ಮೂರು ಸ್ತರದ ಆಗುಹೋಗುಗಳನ್ನು ಪರಸ್ಪರ ಪ್ರಭಾವಿಸುವ ಪರಿಯನ್ನು ಚಿತ್ರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಬಹುಮಟ್ಟಿಗೆ ಅದರಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ ಕೂಡ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X