Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಟಾಪ್ ಸುದ್ದಿಗಳು
  3. ಬಿಜೆಪಿ ರಾಮನ ಪಕ್ಷವಲ್ಲ,‘ಸಡಕ್ ಛಾಪ್...

ಬಿಜೆಪಿ ರಾಮನ ಪಕ್ಷವಲ್ಲ,‘ಸಡಕ್ ಛಾಪ್ ’ಪಕ್ಷ ಎನ್ನುವುದನ್ನು ಆದಿಪುರುಷ್ ಸಾಬೀತುಗೊಳಿಸಿದೆ: ಆಪ್ ಸಂಸದ

ವಾರ್ತಾಭಾರತಿವಾರ್ತಾಭಾರತಿ18 Jun 2023 12:04 AM IST
share
ಬಿಜೆಪಿ ರಾಮನ ಪಕ್ಷವಲ್ಲ,‘ಸಡಕ್ ಛಾಪ್ ’ಪಕ್ಷ ಎನ್ನುವುದನ್ನು ಆದಿಪುರುಷ್ ಸಾಬೀತುಗೊಳಿಸಿದೆ: ಆಪ್ ಸಂಸದ

ಹೊಸದಿಲ್ಲಿ: ಪ್ರಭಾಸ ರಾಮನಾಗಿ ಮತ್ತು ಕೃತಿ ಸನೋನ್ ಸೀತೆಯಾಗಿ ನಟಿಸಿರುವ ‘ಆದಿಪುರುಷ ’ ಚಿತ್ರದ ಕುರಿತು ಭಾರೀ ರಾಜಕೀಯ ವಿವಾದದ ನಡುವೆಯೇ ಆಪ್ ಶನಿವಾರ ಬಿಜೆಪಿಯ ಹಲವಾರು ನಾಯಕರು ಈ ಚಿತ್ರವನ್ನು ಹೊಗಳಿರುವುದರಿಂದ ಬಿಜೆಪಿಯು ಅಗ್ಗದ ‘ಸಡಕ್ ಛಾಪ್ ’ ಪಕ್ಷ ಎನ್ನುವುದನ್ನು ಚಿತ್ರವು ಮತ್ತೊಮ್ಮೆ ಸಾಬೀತುಗೊಳಿಸಿದೆ ಎಂದು ಹೇಳಿದೆ.

ಆದಿತ್ಯನಾಥ, ಶಿವರಾಜ್ ಸಿಂಗ್ ಚೌಹಾಣ್,‌ ಏಕನಾಥ ಶಿಂದೆ, ದೇವೇಂದ್ರ ಫಡ್ನವೀಸ್, ಮನೋಹರ ಲಾಲ್ ಖಟ್ಟರ್, ಹಿಮಂತ ಬಿಸ್ವ ಶರ್ಮಾ, ಪುಷ್ಕರ ಸಿಂಗ್ ಧಾಮಿ ಮತ್ತು ನರೋತ್ತಮ ಮಿಶ್ರಾ ಸೇರಿದಂತೆ ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರು ಚಿತ್ರಕ್ಕೆ ಶುಭ ಹಾರೈಸಿರುವುದನ್ನು ಅದು ಬೆಟ್ಟು ಮಾಡಿದೆ.

ಬಿಜೆಪಿ ರಾಮನದಲ್ಲ, ಅದು ಶ್ರೀಸಾಮಾನ್ಯನದ್ದೂ ಅಲ್ಲ,ಅದು ಕೆಲಸಕ್ಕೆ ಬರುವ ಪಕ್ಷವೂ ಅಲ್ಲ. ಅದು ಕೊಳಕು ರಾಜಕೀಯವನ್ನಷ್ಟೇ ಮಾಡುತ್ತದೆ ಎಂದು ಹೇಳಿದ ಆಪ್ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರು, ಚಿತ್ರದಲ್ಲಿಯ ಸಂಭಾಷಣೆಗಳು ತೀರ ಕೀಳುಮಟ್ಟದ್ದಾಗಿವೆ,ಅವಹೇಳನಕಾರಿಯಾಗಿವೆ. ಸಂಭಾಷಣೆಯನ್ನು ಬರೆದಿರುವ ಮನೋಜ್ ಮುಂತಾಶಿರ್ ಅವರು ತನಗೆ ಸೂಚಿಸಿದ್ದನ್ನೇ ಬರೆದಿದ್ದಾರೆ ಎಂದರು.

ಜನರು ಮಾತನಾಡುವ ರೀತಿಯಲ್ಲಿಯೇ ತಾನು ಸರಳ ಸಂಭಾಷಣೆಗಳನ್ನು ಬರೆದಿದ್ದೇನೆ ಎಂಬ ಮುಂತಾಶಿರ್ ಸಮರ್ಥನೆಯ ಕುರಿತಂತೆ ಸಿಂಗ್,ಜನರು ನಿಂದನೆಗಳನ್ನೂ ಮಾಡುತ್ತಾರೆ. ಹೀಗಾಗಿ ದೇವರನ್ನೂ ಈಗ ನಿಂದನೆಗಳನ್ನು ಮಾಡುವಂತೆ ತೋರಿಸಲಾಗುವುದೇ ಎಂದು ಪ್ರಶ್ನಿಸಿದರು.

ಆದಿಪುರುಷ ಚಿತ್ರದ ಸಂಭಾಷಣೆಗಳನ್ನು ಟೀಕಿಸಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು,ಮುಂತಾಶಿರ್ ಮತ್ತು ಚಿತ್ರ ನಿರ್ದೇಶಕ ಓಂ ರಾವುತ್ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಮನರಂಜನೆಯ ಹೆಸರಿನಲ್ಲಿ ನಮ್ಮ ಪೂಜ್ಯ ದೇವರುಗಳ ಬಾಯಿಯಿಂದ ಇಂತಹ ಕೀಳುಮಟ್ಟದ ಭಾಷೆಯನ್ನು ನುಡಿಸಿರುವುದು ಪ್ರತಿಯೊಬ್ಬ ಭಾರತೀಯನ ಸಂವೇದನೆಗೆ ನೋವನ್ನುಂಟು ಮಾಡಿದೆ. ಮರ್ಯಾದಾ ಪುರುಷೋತ್ತಮ ರಾಮನ ಕುರಿತು ನೀವು ಚಿತ್ರವನ್ನು ನಿರ್ಮಿಸುತ್ತೀರಿ ಮತ್ತು ತ್ವರಿತ ಬಾಕ್ಸ್ಆಫೀಸ್ ಯಶಸ್ಸಿಗಾಗಿ ಮರ್ಯಾದಾದ ಎಲ್ಲ ಗಡಿಗಳನ್ನು ಮೀರುವುದು ಸ್ವೀಕಾರಾರ್ಹವಲ್ಲ ’ ಎಂದರು.

ಆದಿಪುರುಷ ಮತ್ತು ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯನ್ನು ಪರಸ್ಪರ ಹೋಲಿಸಿ ಟ್ವೀಟಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಅವರು,ಸಾಗರ್ ಟಪೋರಿ ಭಾಷೆಯನ್ನು ಬಳಸಿ ಕೋಟ್ಯಂತರ ಜನರ ನಂಬಿಕೆಗೆ ನೋವನ್ನುಂಟು ಮಾಡಿರಲಿಲ್ಲ, ಆದರೆ ಸಮಾಜದ ಮನಸ್ಸು ಮತ್ತು ಹೃದಯಗಳಲ್ಲಿ ಸಿಯಾರಾಮನ ಆಹ್ಲಾದಕರ, ಸೌಮ್ಯ ಮತ್ತು ಆಕರ್ಷಕ ಚಿತ್ರವನ್ನು ಅಚ್ಚೊತ್ತಿದ್ದರು ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X