ʼಎಸ್ಐಟಿʼಯನ್ನು ರಾಜ್ಯ ಸರಕಾರ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ತಿದೆ : ನಿಖಿಲ್ ಕುಮಾರಸ್ವಾಮಿ
"ಕೇತಗಾನಹಳ್ಳಿ ಪ್ರಕರಣ; ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು"

ನಿಖಿಲ್ ಕುಮಾರಸ್ವಾಮಿ
ತುಮಕೂರು : ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು. ಇವತ್ತಿನ ಕೋರ್ಟ್ ತೀರ್ಪಿನಿಂದ ರಾಜ್ಯ ಸರಕಾರ ಎಚ್ಚೆತ್ತುಕೊಂಡರೇ ಸಾಕು. ಕೇತಗಾನಹಳ್ಳಿ ಜಮೀನು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಚರ್ಚೆ ಮಾಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತುಮಕೂರಿನ ಶಿರಾದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು. ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರಕಾರ ಕೆಲ ರಾಜಕೀಯ ವ್ಯಕ್ತಿಗಳನ್ನು ರಾಜಕೀಯವಾಗಿ ಬಲಿಪಶು ಮಾಡಲು ಎಸ್ಐಟಿ ಯನ್ನು ದುರ್ಬಳಕೆ ಮಾಡಿಕೊಳ್ತಿರೋದು ಪ್ರಕರಣ ಬಹಳಷ್ಟು ಇದೆ ಎಂದು ಅವರು ಆರೋಪಿಸಿದರು.
ಎಸ್ ಐಟಿ ಅನ್ನುವುದನ್ನು ರಾಜ್ಯ ಸರಕಾರ ಯಾವ ರೀತಿ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ತಿದೆ ಅನ್ನುವ ಅನೇಕ ನಿದರ್ಶನ ನಮ್ಮ ಮುಂದೆ ಇದೆ. ಎಸ್ ಐಟಿ ಹಾಗೂ ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಲು ಸರಕಾರ ಅವಕಾಶ ಕೊಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡಲು ಬಿಡಬೇಕು ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ಇಂತಹ ದ್ವೇಷದ ರಾಜಕಾರಣ ಮೂರು ಪಕ್ಷಕ್ಕೂ ಒಳ್ಳೆಯದಲ್ಲ ಬೆಳವಣಿಗೆಯಲ್ಲ. ಇದರಿಂದ ಸಾಧನೆ ಮಾಡುವಂತಹದ್ದು ಏನು ಇಲ್ಲ. ಅವಕಾಶ ಸಿಕ್ಕಾಗ ಜನಪರವಾಗಿ ಒಳ್ಳೆಯ ಕೆಲಸ ಮಾಡಿ. ನೀವು ಈ ರೀತಿ ದ್ವೇಷ ಮಾಡಿಕೊಂಡು ಹೋದರೇ, ನೀವು ಹಾಕಿ ಕೊಟ್ಟ ಹಾದಿಯಲ್ಲೇ ಮುಂಬರುವ ಸರಕಾರ ಮಾಡುತ್ತೆ ಎಂದು ವಾಗ್ದಾಳಿ ನಡೆಸಿದರು.







