ಹಿರಿಯಡಕದ ರಾಜೇಶ್ ಪ್ರಸಾದ್ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿಯುಕ್ತಿ

ಉಡುಪಿ, ಅ.4: ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಉಡುಪಿಯ ಹಿರಿಯಡಕ ಮೂಲದ ರಾಜೇಶ್ ಪ್ರಸಾದ್ ನಿಯುಕ್ತಿಗೊಂಡಿದ್ದಾರೆ.
ಈವರೆಗೆ ಜಮ್ಮು ಕಾಶ್ಮೀರ ಸರಕಾರದ ಅಭಿವೃದ್ಧಿ ಇಲಾಖಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದ ಹಿರಿಯಡಕ ರಾಜೇಶ್ ಪ್ರಸಾದ್ಗೆ ಇದೀಗ ಕೇಂದ್ರ ಸರಕಾರದ ಗೃಹ ಸಚಿವಾಲಯ ಮುಂಭಡ್ತಿ ನೀಡಿ ಚಂಡೀಗಡ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಳಿಸಿದೆ.
ಎಚ್.ರಾಜೇಶ್ ಪ್ರಸಾದ್ ಮೂಲತ: ಹಿರಿಯಡಕ ಸಮೀಪದ ಬೊಮ್ಮರಬೆಟ್ಟಿನವರು. ತಮ್ಮ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬೊಮ್ಮರಬೆಟ್ಟು ಮತ್ತು ಹಿರಿಯಡಕ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ವಾಣಿಜ್ಯ ಶಾಸ್ತ್ರ ಪದವಿ ಶಿಕ್ಷಣವನ್ನು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪಡೆದಿದ್ದರು.
ಎಜಿಎಂಯುಟಿ ಕೇಡರ್ನ 1995ರ ಬ್ಯಾಚ್ನ ಐಎಎಸ್ ಅಧಿಕಾರಿಯಾ ಗಿರುವ ರಾಜೇಶ್ ಪ್ರಸಾದ್ ಅವರು ಎಲ್ಎಲ್ಬಿ, ಇಗ್ನೋ ಹಾಗೂ ಪಾಂಡಿಚೇರಿ ವಿವಿಯಿಂದ ಎಂಬಿಎ (ಫೈನಾನ್ಸ್ ಮತ್ತು ಪಬ್ಲಿಕ್ ಮ್ಯಾನೇಜ್ಮೆಂಟ್ನಲ್ಲಿ) ಪದವಿ ಪಡೆದಿದ್ದಾರೆ.
1967 ಜೂನ್ 1ರಂದು ಜನಿಸಿದ ರಾಜೇಶ್ ಪ್ರಸಾದ್ರನ್ನು ಇದೀಗ ಹೊಸದಿಲ್ಲಿಗೆ ವರ್ಗಾವಣೆಗೊಂಡಿರುವ ರಾಜೀವ್ ವರ್ಮ ಅವರ ಸ್ಥಾನಕ್ಕೆ ನಿಯುಕ್ತಿ ಗೊಳಿಸಲಾಗಿದೆ. ಪ್ರಸಾದ್ ಅವರು ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.







