ಆರೋಗ್ಯ ಮೇಳ, ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ

ಹೆಬ್ರಿ, ಎ.3: ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಬಂಟರ ಸಂಘ ಹೆಬ್ರಿ ಸೇರಿದಂತೆ ಹೆಬ್ರಿ ಸುತ್ತಮುತ್ತಲಿನ 50 ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮೇಳ, ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ಹೆಬ್ರಿ ಶ್ರೀಮತಿ ಶೀಲಾ ಶುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ವಹಿಸಿ ದ್ದರು. 50 ಬಾರಿ ರಕ್ತದಾನ ಮಾಡಿದ ಚೈತನ್ಯ ಯುವವೃಂದದ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮಲ್ಯ ಆರೋಗ್ಯ ಮೇಳವನ್ನು ಉದ್ಘಾಟಿಸಿದರು.
ಕೆಎಂಸಿ ಮಣಿಪಾಲದ ಮಾರುಕಟ್ಟೆ ವಿಭಾಗದ ಅಧಿಕಾರಿ ಮೋಹನ್ ಶೆಟ್ಟಿ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂತೋಷ್ ಕುಮಾರ್, ಎಸ್.ಆರ್.ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನೀರೆ ಕೃಷ್ಣಶೆಟ್ಟಿ, ಪ್ರಮುಖರಾದ ವಾದಿರಾಜ ಶೆಟ್ಟಿ, ಲೀಲಾವತಿ, ನವೀನ್ ಕೆ.ಅಡ್ಯಂತಾಯ, ಡಾ.ವಿದ್ಯಾಧರ ಹೆಗ್ಡೆ, ರಾಮಕೃಷ್ಣ ಆಚಾರ್ಯ, ನರೇಂದ್ರ ನಾಯಕ್, ಪ್ರವೀಣ್ ಹೆಗ್ಡೆ, ಹರಿದಾಸ ಹೆಗ್ಡೆ, ಡಾ.ರವಿ ಪ್ರಸಾದ್ ಹೆಗ್ಡೆ, ಕಾರ್ತಿಕ್, ಪ್ರಮೋದ್ ಚಂದ್ರ ಪೈ, ರಾಘವೇಂದ್ರ ನಾಯ್ಕ್, ಸತೀಶ್ ಕುಲಾಲ್, ಆಶಾ ಬಿ ಶೆಟ್ಟಿ, ವಿಶ್ವನಾಥ್ ಹೆಗ್ಡೆ, ಭೋಜಪುಜಾರಿ, ವಿಜಯ್, ಕೃಷ್ಣರಾಜ ಭಟ್, ರಾಧಾಕೃಷ್ಣ ಕ್ರಮದಾರಿ, ಸುದೀಪ್ ಭಟ್, ಸಂತೋಷ್, ಸಂಜೀವ ಶೆಟ್ಟಿ ಕೆರೆಬೆಟ್ಟು, ಸಂಪತ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ದಯಾನಂದ್ ಶೆಟ್ಟಿ, ಸನತ್ ಕುಮಾರ್, ಪ್ರಶಾಂತ್ ಪೈ, ಪ್ರವೀಣ್, ಸಂತೋಷ್ ಶೆಟ್ಟಿ, ಸುಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸೀತಾನದಿ ಸೌಖ್ಯ ಯೋಗ ಟ್ರಸ್ಟ್ನ ಅಧ್ಯಕ್ಷ ಸೀತಾನದಿ ವಿಠಲಶೆಟ್ಟಿ ಸ್ವಾಗತಿಸಿದರು. ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಉದಯ್ ಕುರ್ಮಾ ಶೆಟ್ಟಿ ವಂದಿಸಿದರು.
ಮಣಿಪಾಲ ಕೆ.ಎಂ.ಸಿ.ಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆಯಲ್ಲಿ ಹೃದ್ರೋಗ ತಪಾಸಣೆ,ಕಣ್ಣಿನ ಪೊರೆ ತಪಾಸಣೆ, ಆಯ್ದ ಫಲಾನುಭವಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ,ಮೂಳೆ ಮತ್ತು ಕೀಲು ರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ, ಸ್ತ್ರಿ ರೋಗ ತಪಾಸಣೆ,ಮಕ್ಕಳ ರೋಗ ತಪಾಸಣೆ,ಜನರಲ್ ಮೆಡಿಸಿನ್, ಚರ್ಮ ರೋಗ ತಪಾಸಣೆ, ಮಾನಸಿಕ ರೋಗ ತಪಾಸಣೆ ಹಾಗೂ ಶ್ರೀ ಶಾರದಾ ಐ ಕೇರ್ ಆಪ್ಟಿಕಲ್ ವತಿಯಿಂದ ಉಚಿತ ಕನ್ನಡ ವಿತರಣೆ, ವಿ.ಜಿ. ಶೆಟ್ಟಿ ಅವರಿಂದ ಉಚಿತ ಔಷಧಿ ವಿತರಣೆ ನಡೆಯಿತು.
ಮೇಳದಲ್ಲಿ ಸುಮಾರು ಹತ್ತಕ್ಕೂ ಮಿಕ್ಕಿ ಮಳಿಗೆಗಳಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿ ಸಿದ ವಿವಿಧ ಸಾವಯುವ ಆಹಾರ ಉತ್ಪನ್ನಗಳು, ಗೃಹ ಉಪಯೋಗಿ ವಸ್ತುಗಳು, ಧರ್ಮಸ್ಥಳದ ಸಿರಿ ಉತ್ಪನ್ನಗಳ ಪ್ರದರ್ಶನ, ಸಾವಯವ ತರಕಾರಿಗಳ ಮಾರಾಟ ಮೇಳ ಜನರ ಗಮನ ಸೆಳೆಯಿತು. ಈಸಿ ಲೈಫ್ ಸಂಸ್ಥೆಯಿಂದ ಕೃಷಿ ಉತ್ಪನ್ನಗಳ ಪ್ರದರ್ಶನ ಮೇಳದಲ್ಲಿ ರೈತರಿಗೆ ವಿಶೇಷ ನೀಡಿತು.







