ಉಡುಪಿ ಸುಲ್ತಾನ್ನಲ್ಲಿ ‘ವಿಶ್ವ ವಜ್ರ’ ವಜ್ರಾಭರಣ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಮೇ 16: ನಗರದ ಪ್ರತಿಷ್ಠಿತ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಮೇ 30ರವರೆಗೆ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಪ್ರೀಮಿಯರ್ ವಜ್ರಾಭರಣಗಳ ಪ್ರದರ್ಶನ ‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್ಗೆ ಶನಿವಾರ ಚಾಲನೆ ನೀಡಲಾಯಿತು.
ಪ್ರದರ್ಶನವನ್ನು ಸಮಾಜ ಸೇವಕಿ ವೀಣಾ ಎಸ್.ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೀಣಾ ಶೆಟ್ಟಿ ಬೆಲ್ಜಿಯಂ ಕಲೆಕ್ಷನ್, ಮಣಿಪಾಲ ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಮಾನಸ ಇಟಲಿಯನ್ ಕಲೆಕ್ಷನ್, ಎಚ್ಆರ್ ಕನ್ಸಲ್ಟೆಂಟ್ ಡೆಲಿಶಾ ಮಥಾಯಿಸ್ ಮಿಲ್ಡ್ ಈಸ್ಟ್ ಹಾಗೂ ಮಾಹೆ ಎಂಐಟಿ ಮ್ಯಾನೇಜ್ಮೆಂಟ್ ಇದರ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಶಹಿಸ್ತಾ ಅಬ್ದುಲ್ ಫರಾಝ್ ಸಿಂಗಾಪುರ ಕಲೆಕ್ಷನ್ಗಳನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ವೀಣಾ ಶೆಟ್ಟಿ, ಸುಲ್ತಾನ್ ಸಂಸ್ಥೆಯ 9ನೆ ವಜ್ರಾಭರಣ ಪ್ರದರ್ಶನ ಇದಾಗಿದ್ದು, ಇದರಲ್ಲಿ ವಿವಿಧ ಆಭರಣಗಳ ಪ್ರದರ್ಶನ ನಡೆಯ ಲಿದೆ. ಉಡುಪಿ ಮಾತ್ರವಲ್ಲ ಹೊರ ಜಿಲ್ಲೆಯವರು ಕೂಡ ಈ ಪ್ರದರ್ಶನಕ್ಕೆ ಆಗಮಿಸಿ ವೈವಿಧ್ಯಮಯ ಆಭರಣಗಳ ಸಂಗ್ರಹದ ಅನುಭವವನ್ನು ಪಡೆಯ ಬಹುದು. ಈ ಅವಕಾಶವನ್ನು ಎಲ್ಲ ಸದುಪಯೋಗ ಪಡೆದುಕೊಳ್ಳಬೇಕು. ಸುಲ್ತಾನ್ ಸಂಸ್ಥೆಯ ಸಮಾಜಮುಖಿ ಕೆಲಸಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಡಾ.ಶಹಿಸ್ತಾ ಅಬ್ದುಲ್ ಫರಾಝ್ ಮಾತನಾಡಿ, ನಾನು ಚಿನ್ನಾಭರಣ ಖರೀದಿಯಲ್ಲಿ ಸುಲ್ತಾನ್ಗೆ ಮೊದಲ ಆದ್ಯತೆ ನೀಡುತ್ತೇನೆ. ಇಲ್ಲಿನ ಸಿಬ್ಬಂದಿ ಗಳ ಗ್ರಾಹಕ ಸ್ನೇಹಿ ಸೇವೆ ಅತ್ಯುತ್ತಮವಾದುದು. ಈ ಪ್ರದರ್ಶನ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿದರು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖಾ ವ್ಯವಸ್ಥಾಪಕ ಅಬ್ದುಲ್ ವಾಹೀದ್, ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ಸಂತೋಷ್ ಜೆ., ಮಾರ್ಕೆಟಿಂಗ್ ಮೆನೇಜರ್ ರಿಫಾ, ಫ್ಲೋರ್ ಮೆನೇಜರ್ ಸಿದ್ಧೀಕ್ ಹಸನ್ ಹಾಗೂ ಗ್ರಾಹಕರು, ಸಿಬಂದಿ ಹಾಜರಿದ್ದರು. ಕೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಈ ಪ್ರದರ್ಶನದಲ್ಲಿ ಡೈಮಂಡ್ ಮೌಲ್ಯದ ಮೇಲೆ ಶೇ.20ರವರೆಗೆ ರಿಯಾಯಿತಿ ಮತ್ತು ಚಿನ್ನಾಭರಣಗಳ ತಯಾರಿಕಾ ಶುಲ್ಕದ ಮೇಲೆ ಶೇ.50ರ ನವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಜಗತ್ತಿನ ವಿವಿಧ ದೇಶಗಳ ವಜ್ರಾಭರಣಗಳ ವಿನೂತನ ಸಂಗ್ರಹ ಈ ಪ್ರದರ್ಶನದಲ್ಲಿದೆ.






