ಕಾರ್ಕಳ, ಆ.3: ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸಿನ ಬಳಿ ಆ.3ರಂದು ಮಧ್ಯಾಹ್ನ ವೇಳೆ ಮಟ್ಜಾ ಜುಗಾರಿ ಆಟ ನಡೆಸುತ್ತಿದ್ದ ಅಂಬಾಗಿಲಿನ ಗುರುಪ್ರಸಾದ್(37), ಸಾಣೂರಿನ ರಾಜೇಶ(51) ಹಾಗೂ ಉಡುಪಿಯ ಪ್ರಮೋದ್ ಎಂಬವರನ್ನು ಕಾರ್ಕಳ ನಗರ ಪೊಲೀಸರು, 2630ರೂ. ನಗದು ಹಾಗೂ ಎರಡು ಮೊಬೈಲ್ಗಳೊಂದಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.