ಆಯುರ್ವೇದ ವೈದ್ಯರ ಸ್ನೇಹ-ಸಮ್ಮಿಲನ ಕಾರ್ಯಕ್ರಮ

ಕುಂದಾಪುರ, ಆ.12: ಶ್ರೀ ಅಮೃತೇಶ್ವರಿ ಎಜುಕೇಷನಲ್ ಟ್ರಸ್ಟ್ನ ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ‘ವೈದ್ಯ ಸಂಗಮ’ ಆಯುರ್ವೇದ ವೈದ್ಯರ ಸಮ್ಮಿಲನ ಕಾರ್ಯಕ್ರಮ ಶನಿವಾರ ಕೋಟೇಶ್ವರ ಯುವ ಮೆರಿಡಿಯನ್ನ ಗ್ರ್ಯಾಮಿ ಹಾಲ್ನಲ್ಲಿ ನಡೆಯಿತು.
ಟ್ರಸ್ಟ್ನ ಅಧ್ಯಕ್ಷ ಆನಂದ ಸಿ.ಕುಂದರ್, ಉಪಾಧ್ಯಕ್ಷ ಜಯಶೀಲ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಖಜಾಂಚಿ ವಿನಯಕುಮಾರ್ ಶೆಟ್ಟಿ ಹಾಗೂ ಸದಸ್ಯ ಡಾ.ಕೆ.ಮುರಳಿಕೃಷ್ಣ ಭಟ್ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಾ.ಸಂಜಯ್ ಕೆ.ಎಸ್. ಮಾರ್ಗದರ್ಶನದಲ್ಲಿ ನಡೆದ ವೈದ್ಯಸಂಗಮದಲ್ಲಿ 90ಕ್ಕೂ ಅಧಿಕ ಆಯುರ್ವೇದ ವೈದ್ಯರು ಭಾಗವಹಿಸಿದರು.
ಆಯುರ್ವೇದದ ಪರಂಪರೆಯನ್ನು ಆಧುನಿಕ ವೈದ್ಯಕೀಯ ಜ್ಞಾನ ಮತ್ತು ಅನುಭವಗಳೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಇಂತಹ ಸಮ್ಮಿಲನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ವೈದ್ಯರ ಸ್ನೇಹ, ಸಹಕಾರ ಮತ್ತು ವೃತ್ತಿಪರ ಸಂಬಂಧವನ್ನು ಮತ್ತಷ್ಟು ಬಲಪಡಿಸಿದ ವೈದ್ಯಸಂಗಮ’ವು ಯಶಸ್ವಿಯಾಗಿ ಸಂಪನ್ನಗೊಂಡಿತು.




