ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಚಾಲಕ ಮೃತ್ಯು

ಕುಂದಾಪುರ, ಆ.30: ನಾಯಿಯೊಂದು ಹಠಾತ್ತನೆ ರಸ್ತೆಗೆ ಅಡ್ಡ ಬಂದ ಕಾರಣ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ಎಂಬವರು ಚಿಕಿತ್ಸೆ ಫಲಕಾರಿ ಯಾಗದೇ ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆ.28ರ ರಾತ್ರಿ 8:40ರ ಸುಮಾರಿಗೆ ತನ್ನ ಸ್ಕೂಟರ್ನಲ್ಲಿ ತಲ್ಲೂರು ಕಡೆಯಿಂದ ಕುಂದಾಪುರದತ್ತ ಸಾಗುತಿದ್ದ ರಾಘವೇಂದ್ರ ಅವರ ವಾಹನಕ್ಕೆ ತಲ್ಲೂರು ಶ್ರೀದುರ್ಗಾ ಅಟೋವರ್ಕ್ಸ್ ಎದುರು ನಾಯಿಯೊಂದು ರಸ್ತೆಗೆ ಅಡ್ಡ ಬಂದಿತ್ತು. ಇದರಿಂದ ಒಮ್ಮೆಗೆ ಬ್ರೇಕ್ ಹಾಕಿದ ರಾಘವೇಂದ್ರ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದರು.
ಗಂಭೀರಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಅವರು ಆ.29ರಂದು ನಿಧನರಾದರು. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story




