ಕುಂದಾಪುರ: ಮೇ 12ರಂದು ಕೃಷಿಕೂಲಿಕಾರರ ಬೃಹತ್ ಸಮಾವೇಶ
ಕುಂದಾಪುರ, ಮೇ 8: ಅಖಿಲ ಭಾರತ ಕೃಷಿಕೂಲಿಕಾರರ ಸಂಘದ (ಎಐಎಡಬ್ಲ್ಯುಯು) ವಿಸ್ತ್ರತ ಸಭೆ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸಗಾರರ ಗುಂಪಿನ ಕಾಯಕ ಬಂಧುಗಳ ಸಮಾವೇಶವನ್ನು ಕುಂದಾಪುರ ಕಾರ್ಮಿಕ ಭವನದ ಸಭಾಂಗಣದಲ್ಲಿ ಮೇ 12ರ ರವಿವಾರ ಬೆಳಗ್ಗೆ 10:30ಕ್ಕೆ ಆಯೋಜಿಸಲಾಗಿದೆ.
ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಸಂಗಾತಿ ಪುಟ್ಟಮಾದು ಮಂಡ್ಯ ಇವರು ಸಮಾವೇಶ ಉದ್ಘಾಟಿಸಲಿರುವರು. ಕೃಷಿಕೂಲಿಕಾರರ ಸಂಘಟನೆ ಯನ್ನು ಬಲಪಡಿಸುವ ಮತ್ತು ಇತರ ಹಲವಾರು ಪ್ರಮುಖ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು.
ಆದ್ದರಿಂದ ಉಡುಪಿ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರು, ಮುಖಂಡರು ಹಾಗೂ ಕುಂದಾಪುರ ತಾಲೂಕಿನ ಕೂಲಿಕಾರರು, ಉದ್ಯೋಗ ಖಾತರಿ ಕೆಲಸಗಾರರೂ, ಕಾಯಕ ಬಂಧುಗಳೂ ಭಾಗವಹಿಸುವಂತೆ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಜಿಲ್ಲಾ ಕಾರ್ಯದರ್ಶಿ ನಾಗರತ್ನ ನಾಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story