ಉದ್ಯಾವರ: ಡಿ.30ರಂದು ಯುವ ನಡೆ ಸೌಹಾರ್ದತೆಯೆಡೆ ಸಂವಾದ

ಉದ್ಯಾವರ, ಡಿ.28: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸುವರ್ಣ ಸಂಭ್ರಮ ವರ್ಷದ ದಶಂಬರ ತಿಂಗಳ ಕಾರ್ಯಕ್ರಮವಾಗಿ ಯುವ ನಡೆ ಸೌಹಾರ್ದತೆಯೆಡೆ - ಒಂದು ಸಂವಾದ ಕಾರ್ಯಕ್ರಮ ಡಿ.30ರ ಶನಿವಾರ ಸಂಜೆ 5:00ಕ್ಕೆ ಉದ್ಯಾವರ ಯುಎಫ್ಸಿ ಕಾರ್ಯಲಯದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಯುವ ಬರಹಗಾರರಾದ ಮಹಮ್ಮದ್ ಶಾರೂಕ್, ಆಸ್ಕರ್ ಲುವಿಸ್, ಸಚಿನ್ ಅಂಕೋಲ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ತಿಲಕ್ರಾಜ್ ಸಾಲ್ಯಾನ್ ತಿಳಿಸಿದ್ದಾರೆ.
Next Story





