ಯಕ್ಷಗುರು ಸಂಜೀವ ಸುವರ್ಣರಿಗೆ 70ರ ಅಭಿನಂದನೆ

ಉಡುಪಿ, ಸೆ.15: ತಿಂಗಳೆ ಪ್ರತಿಷ್ಠ್ಠಾನ ಮತ್ತು ಸಂಜೀವ ಶಿಷ್ಯ ವೃಂದದಿಂದ ಪ್ರಸಿದ್ಧ ಯಕ್ಷಗುರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಸಂಜೀವ ಸುವರ್ಣ ಅವರ 70 ವರ್ಷಾಚರಣೆ ಪ್ರಯುಕ್ತ ‘ಸಂಜೀವ ಯಕ್ಷ ಜೀವ-ಭಾವ’ ಕಾರ್ಯಕ್ರಮ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣ ದಲ್ಲಿ ನಡೆಯಿತು.
ಹಿರಿಯರಾದ ಶಂಭು ಶೆಟ್ಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ಪ್ರಸೂತಿ ತಜ್ಞೆ, ಸಂಜೀವರ ಯಕ್ಷ ಶಿಷ್ಯೆ ಡಾ. ಗಿರಿಜಾ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಬಳಿಕ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಪಾರಂಪರಿಕ ಯಕ್ಷಗಾನ ನೃತ್ಯ ಪ್ರದರ್ಶನ ಜರಗಿತು. ಸಂಜೆ ನಡೆದ ‘ನಮ್ಮ ಸಂಜೀವ’ದಲ್ಲಿ ಸುವರ್ಣರ ಬಹುಮುಖಿ ವ್ಯಕ್ತಿತ್ವ ಅನಾವರಣಗೊಳಿಸುವ ಕಾರ್ಯಕ್ರಮ ನಡೆಯಿತು. ಗುರು ಸಂಜೀವ, ಸಮಾಜಮುಖಿ ಸಂಜೀವ, ಯಕ್ಷ ಸಂಜೀವ ಎಂಬ ವಿಷಯಗಳ ಕುರಿತು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಮುರಲಿ ಕಡೆಕಾರ್, ಪ್ರೊ.ಎಂ.ಎಲ್.ಸಾಮಗ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ದರು. ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು.
ಕೊನೆಯಲ್ಲಿ ನಡೆದ ಜರಗಿದ ಗುರು ಸಂಜೀವ ಸುವರ್ಣರ ಸಪ್ತತಿ ವರ್ಷಾಚರಣೆಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಕೆ. ಎಸ್. ಹೆಗಡೆ ಮೆಡಿಕಲ್ ಕಾಲೇಜಿನ ಹೃದ್ರೋಗತಜ್ಞ ವೈದ್ಯ ಡಾ.ಎಚ್. ನರೇಶ್ಚಂದ್ರ ಹೆಗ್ಡೆ, ಶಾಸಕ ಯಶ್ಪಾಲ್ ಎ. ಸುವರ್ಣ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಬಿಬಿಎಂಪಿ ಅಪರ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಸಂಜೀವ ಸುವರ್ಣ ದಂಪತಿಗಳನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಕಿರಣ್ಕುಮಾರ್ ಬೈಲೂರು ವಂದಿಸಿದರು. ಕೊನೆಯಲ್ಲಿ ಗುರು ಸಂಜೀವರ ಶಿಷ್ಯರು ‘ಕಥೆಯಾದಳು ಕಾಶಿ ಕುವರಿ’ ಯಕ್ಷಗಾನವನ್ನು ಪ್ರಸ್ತುತ ಪಡಿಸಿದರು.







