Baindur | ನಾಯ್ಕನಕಟ್ಟೆ ಬಸ್ ನಿಲ್ದಾಣದಲ್ಲಿ ನೀರು : ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆ

ಬೈಂದೂರು : ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ನಾಯ್ಕನಕಟ್ಟೆ ಬಳಿಯ ಬಸ್ ನಿಲ್ದಾಣ ಎದುರು ಮಳೆ ನೀರು ನಿಲ್ಲುವ ಕಾರಣ ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ.
ಹೆದ್ದಾರಿಯ ಸಮೀಪವೇ ನಾಯ್ಕನಕಟ್ಟೆ ಸರಕಾರಿ ಶಾಲೆಯಿದ್ದು, ಹೆದ್ದಾರಿ ಆಚೆಯಿಂದ ಅನೇಕ ಮಂದಿ ಮಕ್ಕಳು ದಾಟಿ ಅದೇ ದಾರಿಯಾಗಿ ಬರಬೇಕು. ಆದರೆ ರಸ್ತೆ ಬದಿ ಕೆಸರು ನೀರು ನಿಂತು ನಡೆದಾಡಲು ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರ ಸಂಚಾರಕ್ಕೂ ಇದರಿಂದ ಅಡ್ಡಿಯಾಗುತ್ತಿದೆ.
ಇಲ್ಲಿ ಬಿದ್ದ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೆದ್ದಾರಿ ಬದಿಯ ಚರಂಡಿಯನ್ನೂ ಸ್ವಚ್ಛಗೊಳಿಸಿಲ್ಲ. ಆದ್ದರಿಂದ ಚರಂಡಿ ಸ್ವಚ್ಛಗೊಳಿಸಿ, ಹೆದ್ದಾರಿ ಬದಿ ಮಳೆ ನೀರು ನಿಲ್ಲದಂತೆ, ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರನ್ನು ಸ್ಥಳೀಯರು ಆಗ್ರಹಿಸಿದ್ದಾರೆ.
Next Story




