Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಹೆಮ್ಮಾಡಿಯಲ್ಲೀಗ ಬೆಳೆಯುತ್ತಿದೆ...

ಹೆಮ್ಮಾಡಿಯಲ್ಲೀಗ ಬೆಳೆಯುತ್ತಿದೆ ಚಿತ್ರದುರ್ಗದ ‘ಚಾಂದಿನಿ’ ಸೇವಂತಿಗೆ

ವಾರ್ತಾಭಾರತಿವಾರ್ತಾಭಾರತಿ13 Jan 2026 7:47 PM IST
share
ಹೆಮ್ಮಾಡಿಯಲ್ಲೀಗ ಬೆಳೆಯುತ್ತಿದೆ ಚಿತ್ರದುರ್ಗದ ‘ಚಾಂದಿನಿ’ ಸೇವಂತಿಗೆ
"ಮಾರಣಕಟ್ಟೆ ಜಾತ್ರೆ, ಸಂಕ್ರಾಂತಿ ಹಬ್ಬಕ್ಕೆ ಬೇಕು ಸೇವಂತಿಗೆ"

ಹೆಮ್ಮಾಡಿ (ಕುಂದಾಪುರ), ಜ.13: ಕುಂದಾಪುರ ತಾಲೂಕಿನ ಹೆಮ್ಮಾಡಿ, ಕಟ್ಟು ಹಾಗೂ ಆಸುಪಾಸಿನ ಗ್ರಾಮಗಳ ಗದ್ದೆಗಳಲ್ಲಿ ಈಗ ಸೇವಂತಿಗೆ ಹೂವು ನಳನಳಿಸುತ್ತಿವೆ. ಮಾರಣಕಟ್ಟೆ ಜಾತ್ರೆ ಹಾಗೂ ಸಂಕ್ರಾಂತಿ ಹಬ್ಬಗಳಿಗೆ ಈ ಹೂವುಗಳು ಪ್ರಮುಖವಾಗಿ ಬಳಕೆಯಾಗುತ್ತವೆ. ಹೆಮ್ಮಾಡಿಯಲ್ಲಿ ಬೆಳೆದ ಸೇವಂತಿಗೆ ಹೂವುಗಳಿಲ್ಲದೇ ನಾಳೆಯಿಂದ ಪ್ರಾರಂಭಗೊಳ್ಳುವ ಮಾರಣಕಟ್ಟೆ ಜಾತ್ರೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ ಉಳಿದ ಹೂವನ್ನು ರೈತರು ಮಾರಾಟ ಮಾಡುವ ಸಂಪ್ರದಾಯವಿದೆ.

ಹೀಗೆ ಜಾತ್ರೆ, ಕೆಂಡದ ಹಬ್ಬಗಳಿಗಾಗಿ ಸೇವಂತಿಗೆ ಹೂವು ಬೆಳೆಯುವ ಹೆಮ್ಮಾಡಿಯಲ್ಲಿ ಈಗ ‘ಹೆಮ್ಮಾಡಿ ಸೇವಂತಿಗೆ’ ಯೊಂದಿಗೆ ಚಿತ್ರದುರ್ಗದಲ್ಲಿ ಪ್ರಸಿದ್ಧಿ ಪಡೆದಿರುವ ‘ಚಾಂದಿನಿ’ ಸೇವಂತಿಗೆ ಹೂವುಗಳನ್ನು ಸಹ ಬೆಳೆಯಲು ಇಲ್ಲಿನ ಕೃಷಿಕರು ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಈ ಪರಿಸರದಲ್ಲಿ ‘ಚಾಂದಿನಿ’ ಸೇವಂತಿಗೆ ಹೂವು ಬೆಳೆಯುತ್ತಿದ್ದು, ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಹಲವು ವರ್ಷಗಳಿಂದ ಹೆಮ್ಮಾಡಿ ಸೇವಂತಿಗೆ ಹೂವು ಬೆಳೆಯುತ್ತಿರುವ ಪ್ರಶಾಂತ್ ಭಂಡಾರಿಯವರು ಇದೇ ಮೊದಲ ಬಾರಿಗೆ ‘ಚಾಂದಿನಿ’ ಸೇವಂತಿಗೆ ಹೂವಿನ ತಳಿಯನ್ನು ಇಲ್ಲಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಸುಮಾರು 70 ಸೆಂಟ್ಸ್ ಜಾಗದಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳದಿದ್ದು, 10 ಸೆಂಟ್ಸ್ ಜಾಗದಲ್ಲಿ ಚಾಂದಿನಿಯನ್ನು ಬೆಳೆಯುತಿದ್ದಾರೆ.

‘ಚಾಂದಿನಿ’ ಸೇವಂತಿಗೆ ಹೆಚ್ಚು ಇಳುವರಿ ಕೊಡುತ್ತದೆ ಎನ್ನಲಾಗುತ್ತಿದ್ದು, ರೋಗ ಬಾಧೆಯೂ ತುಸು ಕಡಿಮೆ. ಇದಲ್ಲದೆ ಬಿಸಿಲಿಗೆ ಬೇಗ ಬಾಡುವುದಿಲ್ಲ. ಚಿಕ್ಕ ಗಾತ್ರವಿರುವ ಚಾಂದಿನಿಯು ಸಹ ಹೆಮ್ಮಾಡಿ ಸೇವಂತಿಗೆಯಂತೆ ಮೋಹಕ ಚೆಲುವನ್ನೆ ಹೋಲುತ್ತದೆ. ಹೂವು ಮಾರುವವರು ಸಹ ಇದನ್ನೆ ಹೆಚ್ಚು ಖರೀದಿಸುತ್ತಾರೆ. ಅದಕ್ಕಾಗಿ ಇಲ್ಲಿಯೂ ಚಾಂದಿನಿ ಯನ್ನೆ ಬೆಳೆದರೇ ಹೇಗೆ ಅಂದುಕೊಂಡು 2-3 ಮಂದಿ ಬೆಳೆಗಾರರು ಸೇರಿ ಸ್ವಲ್ಪ ಜಾಗದಲ್ಲಿ ಬೆಳೆಸಿದ್ದೇವೆ ಎಂದು ಅವರು ಹೇಳುತ್ತಾರೆ.

ಹೆಮ್ಮಾಡಿ ಸೇವಂತಿಗೆ 4 ತಿಂಗಳ (120 ದಿನ) ಬೆಳೆಯಾಗಿದ್ದರೆ, ಸೆಂಟ್ ಯೆಲ್ಲೊ ಮೂರುವರೆ ತಿಂಗಳ (100 ದಿನ) ಬೆಳೆಯಾಗಿದೆ. ಇನ್ನು ಚಾಂದಿನಿ ಸೇವಂತಿಗೆಯು ಸಹ ಹೆಮ್ಮಾಡಿ ಸೇವಂತಿಗೆಯಂತೆ 4 ತಿಂಗಳ (120ದಿನ) ಬೆಳೆಯಾಗಿದೆ.

ಪ್ರಶಾಂತ್ ಭಂಡಾರಿ ಈ ಹಿಂದೆ ಇಲ್ಲಿ ನೆಲಮಂಗಲ ಸೇವಂತಿಗೆ (ಟೆಂಟ್ ಯೆಲ್ಲೊ) ಬೆಳೆದು, ಮೊದಲ ಬಾರಿಗೆ ಬೇರೆಡೆಯ ಹೂವನ್ನು ಇಲ್ಲಿ ಬೆಳೆಯುವ ಪ್ರಯತ್ನ ಮಾಡಿದ್ದರು. ಈ ಬಾರಿ ಸ್ವಲ್ಪ ಭಾಗದಲ್ಲಿ ಬೆಳೆದಿದ್ದಾರೆ. ಆದರೆ ಇದು ಊರಿನ ಸೇವಂತಿಗೆಗಿಂತ ಇಳುವರಿ ಸ್ವಲ್ಪ ಕಡಿಮೆ ಅನ್ನುವುದು ಅವರ ಅಭಿಪ್ರಾಯ.

ಹೆಮ್ಮಾಡಿ ಸೇವಂತಿಗೆ ಹೂವು ಸೇವಂತಿಗೆ ತಳಿಗಳಲ್ಲಿಯೇ ವಿಶಿಷ್ಟವಾದುದು. ಆಕರ್ಷಕವಾದ, ಕಣ್ಮನ ಸೆಳೆಯುವ ಬಣ್ಣ, ಚಿಕ್ಕ ಗಾತ್ರ, ಘಮ-ಘಮ ಸುವಾಸನೆ, ಮೋಹಕ ಚೆಲುವು, ಹೆಚ್ಚು ಬಾಳಿಕೆಯ ಗುಣ- ಈ ರೀತಿ ತನ್ನದೇ ಆದ ವೈಶಿಷ್ಟ್ಯವನ್ನು ಇದು ಹೊಂದಿದೆ.

ಆದರೆ ಇತ್ತೀಚಿನ ವಿಪರೀತ ಬಿಸಿಲು, ಸೆಖೆಯ ಹಿನ್ನೆಲೆಯಲ್ಲಿ ಅರಳಿದ ಹೂವು ಹೆಚ್ಚು ಬಾಳಿಕೆ ಬರುತ್ತಿಲ್ಲ. ಇದಲ್ಲದೆ ಹವಾಮಾನ ದಿನಕ್ಕೊಂದು ರೀತಿ ಇರುವ ಕಾರಣಕ್ಕೆ ಹೂವಿನ ಬೆಳೆಗೂ ಸಮಸ್ಯೆಯಾಗುತ್ತಿದೆ. ಮೋಡ, ಮಳೆಯಿದ್ದರೆ ಚಳಿ, ಇಬ್ಬನಿ ಇರಲ್ಲ. ಇದರಿಂದ ಗಿಡ, ಹೂವಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದಲ್ಲದೆ ಈಗ ನುಸಿ, ಕೀಟ ಬಾಧೆಯೂ ಹೆಚ್ಚು. ಈ ಎಲ್ಲ ಕಾರಣದಿಂದ ಪರ್ಯಾಯ ತಳಿಯಾದ ಚಾಂದಿನಿಯನ್ನು ಬೆಳೆಯುವ ಪ್ರಯತ್ನವನ್ನು ಬೆಳೆಗಾರರು ಮಾಡಿದ್ದಾರೆ.

ಕೆಲ ದಿನಗಳಿಂದ ದಿನಕ್ಕೊಂದು ರೀತಿಯ ಹವಾಗುಣವಿದ್ದು, ಇದರಿಂದ ಸೇವಂತಿಗೆ ಬೆಳೆಗೆ ಸಮಸ್ಯೆಯಾಗುತ್ತಿದೆ. ಇವುಗಳಿಗೆ ಚಳಿ, ಇಬ್ಬನಿ ಬೇಕು. ಮೋಡ, ಮಳೆ, ಬಿಸಿಲು ಜಾಸ್ತಿಯಿದ್ದರೂ ಹೂವಿನ ಬೆಳವಣಿಗೆಗೆ ಕಷ್ಟ. ಕಳೆದ ಬಾರಿಗಿಂತ ಈ ಸಲ ರೋಗ ಸ್ವಲ್ಪ ಕಡಿಮೆಯಿದೆ. ಈ ಬಾರಿ ಹೊಸದಾಗಿ ಚಾಂದಿನಿ ತಳಿಯನ್ನು ಪ್ರಯತ್ನಿಸಿದ್ದೆನೆ. ಹೆಚ್ಚು ಇಳುವರಿ, ಬಾಳಿಕೆಯೂ ಹೆಚ್ಚು ಎಂದು ಕೇಳಿದ್ದೇನೆ. ಅದಕ್ಕಾಗಿ ಬೆಳೆಯುತ್ತಿದ್ದೇನೆ.

-ಪ್ರಶಾಂತ್ ಭಂಡಾರಿ, ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ.





Tags

ChitradurgaChandinimarigold
share
ವಾರ್ತಾಭಾರತಿ
ವಾರ್ತಾಭಾರತಿ
Next Story
X