ಡಿ.2ರಂದು ಉಡುಪಿಯಲ್ಲಿ ಕೃಷಿಕರ ಸಭೆ

ಉಡುಪಿ, ನ.30: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕೃಷಿಕರ ಸಭೆ ಡಿ.2ರಂದು ಸಂಜೆ 4 ಗಂಟೆಗೆ ಉಡುಪಿ ಶ್ರೀಭಗವಾನ್ ನಿತ್ಯಾನಂದ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲೆಯ ಕೃಷಿಕರ ವಿವಿಧ ಸಮಸ್ಯೆಗಳು, ಸಂಕಷ್ಟಗಳನ್ನು ಸರಕಾರ- ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರೋಪಾಯ ಮಾರ್ಗಗಳ ಕಂಡು ಕೊಳ್ಳುವ ಬಗ್ಗೆ ರೈತ ಮುಖಂಡರುಗಳು ವಿಚಾರ ನಿಮಯ ಮಾಡಿಕೊಳ್ಳಲಿದ್ದಾರೆ.
ಈ ಸಭೆಯಲ್ಲಿ ನಿತ್ಯಾನಂದ ಸ್ವಾಮಿ ಮಂದಿರದ ಟ್ರಸ್ಟಿ ಕೆ.ದಿವಾಕರ ಶೆಟ್ಟಿ ಕೊಡವೂರು, ಸಿರಿತುಳು ಚಾವಡಿಯ ಗುರಿಕಾರ ಈಶ್ವರ್ ಚಿಟ್ಪಾಡಿ ಮತ್ತು ಉಡುಪಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಕಿನ್ನಿಮುಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





