ಜಡ್ಕಲ್-ಕೊಲ್ಲೂರು: ಮೇ 30ರಂದು ಶುಭಾರಂಭಗೊಳ್ಳಲಿದೆ 'ಗ್ರೀನ್ ಲಗೂನ್ ರಿಟ್ರೀಟ್' ರೆಸಾರ್ಟ್

ಕುಂದಾಪುರ: ಸುಂದರ, ಸ್ವಚ್ಛಂದ ಪರಿಸರದ ನಡುವೆ ಕೊಲ್ಲೂರು-ಜಡ್ಕಲ್ ಕಾನ್ಕಿ ರಸ್ತೆಯಲ್ಲಿ 'ಗ್ರೀನ್ ಲಗೂನ್ ರಿಟ್ರೀಟ್' ರೆಸಾರ್ಟ್ (ಮೇ 30) ಶನಿವಾರ ಸಂಜೆ 5.30ಕ್ಕೆ ಶುಭಾರಂಭಗೊಳ್ಳಲಿದೆ.
ಕರ್ನಾಟಕ ವಿಧಾನಸಭೆಯ ಸಭಾಪತಿ ಡಾ. ಯು.ಟಿ. ಖಾದರ್ ಫರೀದ್ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಬೈಂದೂರಿನ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಜಡ್ಕಲ್ ಸೈಂಟ್ ಜಾರ್ಝ್ ಫೊರೊನಾ ಚರ್ಚ್ ಗುರುಗಳಾದ ಅತೀ ವಂದನೀಯ ಫಾ. ಜೋಸೆಫ್ ಭಾಗವಹಿಸಲಿರುವರು ಎಂದು ಯುನಿಟಿ ಗ್ರೂಫ್ ಆಡಳಿತ ನಿರ್ದೇಶಕರಾದ ಉಸ್ಮಾನ್ ಹಂಗಳೂರು ಇದಿನಬ್ಬ ತಿಳಿಸಿದ್ದಾರೆ.
ಗ್ರೀನ್ ಲಗೂನ್ ರೆಸಾರ್ಟ್ ಗ್ರಾಹಕರ ಸ್ನೇಹಿಯಾಗಿ ಅತ್ಯುತ್ತಮ ಸೇವೆಗಳನ್ನು ಒದಗಿಸಲಿದೆ. ಅಲ್ಟ್ರಾ ಡಿಲಕ್ಸ್ ರೂಮ್ಗಳು, ಉತ್ತಮ ರೀತಿಯ ಒಳಾಂಗಣ, ಹವಾನಿಯಂತ್ರಿತ ವ್ಯವಸ್ಥೆ, ವಿಶ್ರಾಂತಿಗಾಗಿ ಸ್ಥಳವಿದೆ. ಹಾಗೆಯೇ ಬರುವ ಗ್ರಾಹಕರಿಗೆ ಇನ್ನಷ್ಟು ಸೌಕರ್ಯಗಳಾದ ಸ್ವಿಮ್ಮಿಂಗ್ ಫೂಲ್, ಜಿಮ್, ಸ್ನೂಕರ್, ಫೂಸ್ಬಾಲ್, ಕೇರಮ್, ಚೆಸ್, ಬ್ಯಾಡ್ಮಿಂಟನ್ ಕೋರ್ಟ್, ಹಚ್ಚಹಸುರಿನ ವಾತಾವರಣ, ಬಾರ್ಬಿಕ್ಯೂ, ಡರ್ಟ್ ಬೈಕ್ ರೈಡ್ ಅನುಭವ ಪಡೆಯುವ ವ್ಯವಸ್ಥೆ ಸಹಿತ ಹಲವು ಸದವಕಾಶಗಳಿದೆ.
ಹಾಗೆಯೇ ಸಭೆ-ಸಮಾರಂಭಗಳ ಆಯೋಜನೆಗಾಗಿ 500 ಮಂದಿ ಅತಿಥಿಗಳು ಕೂರಬಹುದಾದ ಸ್ಥಳವಿದ್ದು ಹುಟ್ಟುಹಬ್ಬ, ಕಾರ್ಪೋರೆಟ್ ಸಭೆಗಳು, ಡಿಜೆ ನೈಟ್ಸ್, ಕುಟುಂಬ ಸಹಮಿಲನ ಕಾರ್ಯಕ್ರಮ ಮೊದಲಾದವುಗಳ ಆಯೋಜನೆಗೆ ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.






