ಕಲ್ಲಾಳ ಸರಕಾರಿ ಶಾಲೆಯ ಎಲ್ಕೆಜಿ ತರಗತಿ ಉದ್ಘಾಟನೆ

ಹಿರಿಯಡ್ಕ, ಜೂ.8: ಶೀರೂರು ಕಲ್ಲಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಕೆಜಿ, ಯುಕೆಜಿ ತರಗತಿಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿ ನಾಯ್ಕ, ಹಳೆ ವಿದ್ಯಾರ್ಥಿಗಳಾದ ಕೊಗ್ಗ ನಾಯ್ಕ, ಬೈರಂಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜೀಯಾನಂದ ಹೆಗಡೆ, ಪ್ರಸಾದ್ ಮಲ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹರ್ಷಿತ್, ಸ್ಥಳೀಯರಾದ ದೀನೇಶ್ ಪೈ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಹರೀಶ್ ಉಪಸ್ಥಿತರಿದ್ದರು.
Next Story




