ಮಲಬಾರ್ ಗೋಲ್ಡ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಉಡುಪಿ, ನ.1: ಉಡುಪಿ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಲಬಾರ್ ದಿನವನ್ನು ಕೇಕ್ ಕತ್ತರಿಸುವ ಮೂಲಕ ಉಡುಪಿ ಶೋರೂಂನಲ್ಲಿ ಆಚರಿಸಲಾಯಿತು.
ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ ಧ್ವಜಾರೋಹಣ ನೆರೆವರಿಸಿ ಕರ್ನಾಟಕ ರಾಜ್ಯೋತ್ಸದ ಶುಭಾಶಯ ತಿಳಿಸಿದರು. ಪುರಂದರ ತಿಂಗಳಾಯ ಸ್ವಾಗತಿಸಿ ವಂದಿಸಿದರು. ಶಾಖಾ ವ್ಯವಸ್ಥಾಪಕರಾದ ಮುಸ್ತಫ ಎ.ಕೆ., ಹರೀಶ್ ಎಂ.ಜಿ, ಗುರುರಾಜ್, ತಂಝೀಮ್ ಶಿರ್ವ, ಸಿಬ್ಬಂದಿ, ಗ್ರಾಹಕರು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
Next Story





