Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರ:...

ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರ: ಮನೆ, ತೋಟಗಳಿಗೆ ಹಾನಿ

ಉಡುಪಿ ಜಿಲ್ಲೆಯ 60ಕ್ಕೂ ಅಧಿಕ ಮನೆಗಳು ಧರೆಶಾಹಿ: 29ಲಕ್ಷ ರೂ.ನಷ್ಟ

ವಾರ್ತಾಭಾರತಿವಾರ್ತಾಭಾರತಿ27 July 2025 7:49 PM IST
share
ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರ: ಮನೆ, ತೋಟಗಳಿಗೆ ಹಾನಿ

ಉಡುಪಿ, ಜು.27: ಕಳೆದ ರಾತ್ರಿ ಬೀಸಿದ ಮಳೆ ಸಹಿತ ಭಾರೀ ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರಿಸಿ ಹೋಗಿದ್ದು, ಜಿಲ್ಲೆಯಾದ್ಯಂತ 60ಕ್ಕೂ ಅಧಿಕ ಮನೆಗಳು, ಕೊಟ್ಟಿಗೆ, ಕೃಷಿ ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಒಟ್ಟು 29ಲಕ್ಷ ರೂ. ನಷ್ಟ ಉಂಟಾಗಿದೆ.

ಕಾರ್ಕಳ- 55.3ಮಿ.ಮೀ., ಕುಂದಾಪುರ- 105.6ಮಿ.ಮೀ., ಉಡುಪಿ- 38.9ಮಿ.ಮೀ., ಬೈಂದೂರು- 81.0ಮಿ.ಮೀ., ಬ್ರಹ್ಮಾವರ- 66.0ಮಿ.ಮೀ., ಕಾಪು- 38.8ಮಿ.ಮೀ., ಹೆಬ್ರಿ- 89.2ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 75.0 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಕಳೆದ ರಾತ್ರಿಯಿಂದ ನಸುಕಿನ ವೇಳೆಯವರೆಗೆ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಬೀಸುತ್ತಿದ್ದು, ಬೆಳಗ್ಗೆ ಯಿಂದ ಮಳೆ ಪ್ರಮಾಣ ಇಳಿಕೆಯಾಗಿತ್ತು. ಮಧ್ಯಾಹ್ನ ವೇಳೆ ಬಿಸಿಲಿನ ವಾತಾವರಣ ಕಂಡುಬಂದಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಂಚ ವಿರಾಮ ಸಿಕ್ಕಿದಂತಾಗಿದೆ.

ಕುಂದಾಪುರ ತಾಲೂಕಿನಲ್ಲಿ ಬೀಸಿದ ಭಾರೀ ಗಾಳಿಗೆ 36 ಮನೆಗಳಿಗೆ ಹಾನಿಯಾಗಿ ಒಟ್ಟು 16.67ಲಕ್ಷ ರೂ. ಹಾಗೂ ತೋಟ ಹಾಗೂ ಕೊಟ್ಟಿಗೆಗೆ ಹಾನಿಯಾಗಿ ಒಟ್ಟು 2.86ಲಕ್ಷ ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ ಎಂಟು ಮನೆಗಳಿಗೆ ಹಾನಿಯಾಗಿ ಒಟ್ಟು 5.60ಲಕ್ಷ ರೂ., ಕಾಪು ತಾಲೂಕಿನ ಮೂರು ಮನೆಗಳಿಗೆ 60ಸಾವಿರ ರೂ., ಹೆಬ್ರಿ ತಾಲೂಕಿನ ಎಂಟು ಮನೆಗಳಿಗೆ ಹಾನಿಯಾಗಿ 3.35ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಕುಂದಾಪುರದಲ್ಲಿ ಅಪಾರ ಹಾನಿ: ವಿಪರೀತ ಗಾಳಿಯಿಂದ ಕುಂದಾಪುರ ತಾಲೂಕಿನ ರಟ್ಟಾಡಿ, ಹೆಂಗವಳ್ಳಿ, ಕುಂದಬಾರಂದಾಡಿ ಹಾಗೂ ಹೆಮ್ಮಾಡಿ ಗ್ರಾಮಗಳ ನಾಲ್ಕು ಮನೆಗಳ ಶೀಟುಗಳಿಗೆ ಗಾಳಿಗೆ ಹಾರಿ ಹೋಗಿವೆ. ನೂಜಾಡಿ ಬಗ್ವಾಡಿ ಗ್ರಾಮದ ಮನೆ ಯೊಂದರ ಹೆಂಚು ಹಾರಿ ಹೋಗಿ, ರೀಪು ಪಕ್ಕಾಸಿಗೆ ಹಾನಿಯಾಗಿವೆ. ಬೀಜಾಡಿ ಗ್ರಾಮದ ಮನೆ ಮೇಲೆ ಮರ ಮತ್ತು ವಿದ್ಯುತ್ ಕಂಬ ಬಿದ್ದು ಅಪಾರ ಹಾನಿಯಾಗಿದೆ.

ಗಾಳಿಯಿಂದ ಮರಗಳು ಬಿದ್ದು ಬಸ್ರೂರು, ಹೆಮ್ಮಾಡಿ, ತಲ್ಲೂರು ಆಲೂರು ಗ್ರಾಮದ ಎರಡು, ಕುಂಭಾಶಿ, ಕಾರ್ವಾಡಿ, ವಡೇರಹೋಬಳಿ, ಸೇನಾಪುರ, ಹೊಸಾಡು, ಯಡ್ಯಾಡಿ ಮತ್ಯಾಡಿ, ನೂಜಾಡಿ ಗ್ರಾಮದ ಎರಡು, ಹೊಸಂಗಡಿ, ಹಕ್ಲಾಡಿ, ಬಟ್ಟೆಕುದ್ರು ಗ್ರಾಮದ ಬಗ್ವಾಡಿ, ಕುಂದಾಪುರ ಫಿಶ್ ಮಾರ್ಕೆಟ್ ರಸ್ತೆ, ಕೋಣಿ, ವಂಡ್ಸೆ, ಕಾಳಾವರ, ಕುಂದಬಾರಂದಾಡಿ ಗ್ರಾಮದ ಮೂರು ಮನೆಗಳಿಗೆ, ಜಪ್ತಿ, ನೂಜಾಡಿ, ಬಗ್ವಾಡಿ, ಹೆಮ್ಮಾಡಿ, ವಂಡ್ಸೆ ಗ್ರಾಮದ ಎರಡು ಮನೆಗಳಿಗೆ ಅಪಾರ ಹಾನಿಯಾಗಿವೆ. ಅದೇ ರೀತಿ ಮಳೆಯಿಂದ ಕುಂದಾಪುರ ಚಿಕನ್ ಸಾಲ್ ರಸ್ತೆ, ಆನಗಳ್ಳಿ, ಚಿತ್ತೂರು ಮಾರಣಕಟ್ಟೆ, ಅಂಪಾರು, ಸೇನಾಪುರ, ವಂಡ್ಸೆ ಎಂಬಲ್ಲಿ ಮನೆಗಳ ಗೋಡೆ ಕುಸಿದು ಅಪಾರ ನಷ್ಟ ಉಂಟಾಗಿದೆ.

ಇತರೆಡೆ ಮನೆಗಳಿಗೆ ಹಾನಿ: ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಎರಡು, ಕಾಲ್ತೂಡು, ಹೇರೂರು ಗ್ರಾಮದ ಎರಡು, ಶಿರೂರು, ಕಿರಿಮಂಜೇಶ್ವರ, ಕಾಪು ತಾಲೂಕಿನ ಪಾದೂರು, ಹೆಜಮಾಡಿ, ಮಜೂರು ಗ್ರಾಮಗಳ ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮೂರು, ಹೆಬ್ರಿ ಗ್ರಾಮದ ಮೂರು, ಶೇಡಿಮನೆ ಗ್ರಾಮದ ಎರಡು, ಚಾರ ಗ್ರಾಮಗಳ ಮನೆಗಳಿಗೆ ಮಳೆಯಿಂದ ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಅಡಿಕೆ ತೋಟಗಳಿಗೆ ಅಪಾರ ಹಾನಿ

ಭಾರೀ ಮಳೆಗಾಳಿಯಿಂದ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಮತ್ತು ನುಜಾಡಿ ಗ್ರಾಮದ ಬಗ್ವಾಡಿ ಗ್ರಾಮದ ತಲಾ ಎರಡು ಮನೆಗಳ ಹಾಗೂ ಉಳ್ಳೂರು 74, ಗೋಪಾಡಿ, ಅಂಪಾರು ಗ್ರಾಮಗಳ ತಲಾ ಒಂದು ದನದ ಕೊಟ್ಟಿಗೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಬೀರುಗಾಳಿಯಿಂದ ಆಲೂರು ಗ್ರಾಮದ ವನಜ ಎಂಬವರ ತೋಟದಲ್ಲಿನ ಸುಮಾರು 36 ಅಡಿಕೆ ಮರಗಳು ಬಿದ್ದು ಹಾನಿಯಾಗಿ, ಒಟ್ಟು 38,000ರೂ. ಮತ್ತು ಹೆಮ್ಮಾಡಿ ಗ್ರಾಮದ ಕೃಷ್ಣ ಪೂಜಾರಿ ಎಂಬವರ ಅಡಿಕೆ ತೋಟದ ಮೇಲೆ ಮರ ಬಿದ್ದು 25 ಅಡಿಕೆ ಮರಗಳು ತುಂಡಾಗಿ 20,000ರೂ., ಹೆಂಗವಳ್ಳಿ ಗ್ರಾಮದ ಶ್ರೀಧರ ಶೆಟ್ಟಿ ಎಂಬವರ ತೋಟದ 20ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿ 20,000ರೂ., ಹೆಂಗವಳ್ಳಿ ಗ್ರಾಮದ ಮೂಕಾಂಬಿಕಾ ಶೆಟ್ಟಿ ಎಂಬವರ ತೋಟದ 30ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿ 50,000ರೂ. ನಷ್ಟ ಉಂಟಾಗಿದೆ. ಶಂಕರನಾರಾಯಣ ಹಾಗೂ ಸಿದ್ದಾಪುರ ಗ್ರಾಮದಲ್ಲಿಯೂ ಅಡಿಕೆ ತೋಟವು ಗಾಳಿ ಮಳೆಗೆ ಹಾನಿಯಾಗಿ 28,000ರೂ. ನಷ್ಟವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X