ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ವಾರ್ಷಿಕ ಮಹಾಸಭೆ

ಉಡುಪಿ, ಜ.6: ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಇದರ 22 ನೇ ವರ್ಷದ ಹಾಗೂ 2025ರ ವಾರ್ಷಿಕ ಮಹಾಸಭೆ ಸಂಘದ ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಫರ್ವಾನಿಯ ದವಾಯಿ ಪ್ಯಾಲೆಸ್ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಝುಬೈರ್ ಮೈಲಾರ್ ಸಭೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಕೆಕೆಎಂಎ ಕರ್ನಾಟಕ ಬ್ರಾಂಚ್ ಅಧ್ಯಕ್ಷ ಯೂಸುಫ್ ಮುನಿಯಾಮ್, ಕುರ್ತುಬಾ ರಿವಿವಲ್ ಇಸ್ಲಾಮಿಕ್ ಸೂಸೈಟಿ ಖತೀಬ್ ಶೈಖ್ ಮುಹಮ್ಮದ್ ಜಮಾಯಿ, ಅಲ್ ಮದೀನಾ ಕುವೈತ್ ಕಮಿಟಿ ಅಧ್ಯಕ್ಷ ಶಾಹುಲ್ ಹಮೀದ್ ಸಅದಿ, ಕುವೈತ್ ಡಿಕೆಎಸ್ಸಿ ಅಧ್ಯಕ್ಷ ಯೂಸುಫ್ ಮಂಚಕಲ್, ಕೆಸಿಎಫ್ ಅಂತಾರಾಷ್ಟ್ರೀಯ ಅಡ್ಮಿನ್ ಆಡಳಿತ ಅಧ್ಯಕ್ಷ ಹುಸೈನ್ ಎರ್ಮಾಡ್, ಕೆಕೆಎಂಎ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಬಿಎಂ ಇಕ್ಬಾಲ್, ಬದರ್ ಅಲ್ಸಮ ಚೇಯರ್ಮೆನ್ ಅಬ್ದುಲ್ ರಝಾಕ್, ಮಸ್ದರ್ ಕುವೈಟ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಬ್ದುಲ್ ರಹೀಂ ಕೃಷ್ಣಾಪುರ, ಮುಹಮ್ಮದ್ ಹನೀಫ್ ಕೋಡಿ, ಅಬ್ದುಲ್ ರಹ್ಮಾನ್ ಕೋಟ, ಬಿ.ಎಂ. ಇಕ್ಬಾಲ್ ಅವರನ್ನು ಸಂಘದ ಉಪಾಧ್ಯಕ್ಷ ಕರೀಂ ಬಿರಾಲಿ ಉಚ್ಚಿಲ ನೇತೃತ್ವದಲ್ಲಿ ಗೌರವಿಸಲಾಯಿತು.
2026ರ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು ಗೌರವಾಧ್ಯಕ್ಷರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಸಿ.ಎಚ್., ಕೋಶಾಧಿಕಾರಿ ಜಮಾಲ್ ಮಣಿಪುರ ಹಾಗೂ 18 ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಯೂಸುಫ್ ರಶೀದ್, ಲತೀಫ್ ಸೇದಿಯಾ, ಇಸ್ಮಾಯಿಲ್ ಅಯ್ಯಂಗೇರಿ, ಶರೀಫ್ ಮಾತನಾಡಿದರು. ಕೆಎಫ್ಸಿ ಕುವೈತ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ದುವಾ ನೆರವೇರಿಸಿದರು. ಕಾಸಿಂ ಉಸ್ತಾದ್ ಕಿರಾಅತ್ ಪಠಿಸಿದರು. ಮಣಿಪುರ ಸಂಘದ ಶಾರೂಖ್ ಸ್ವಾಗತಿಸಿದರು. 2025ನೆ ಸಾಲಿನ ವರದಿ ಯನ್ನು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ವಾಚಿಸಿದರು. ಲೆಕ್ಕಪತ್ರವನ್ನು ಖಜಾಂಜಿ ಜಮಾಲ್ ಮಣಿಪುರ ಮಂಡಿಸಿದರು. ಹೈದರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಸಂಘದ ಲೆಕ್ಕ ಪರಿಶೋಧಕ ಸುಲೈಮಾನ್ ಉಚ್ಚಿಲ ವಂದಿಸಿದರು.







