ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ನವಜಾತಶಿಶು ತೀವ್ರ ನಿಗಾ ಘಟಕ ಉದ್ಘಾಟನೆ

ಉಡುಪಿ, ಫೆ.14: ಉಡುಪಿ ಸಿಎಸ್ಐ ಲೊಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕದ ಉದ್ಘಾಟನೆ ಯನ್ನು ಸಿಎಸ್ಐ-ಕೆಎಸ್ಡಿಯ ಬಿಷಪ್ ರೆವ.ಹೇಮಚಂದ್ರ ಕುಮಾರ್ ಶನಿವಾರ ನೆರವೇರಿಸಿದರು.
ಬಳಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಆಸ್ಪತ್ರೆಗಳಲ್ಲಿ ಅತೀ ಅವಶ್ಯಕವಾಗಿ ರುವ ಕೇಂದ್ರಗಳು. ಇಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತವೆ. ಇವತ್ತು ನಮ್ಮ ಆಸ್ಪತ್ರೆಯು ಪೈಪೋಟಿಯಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ. ಜನ ಆಸ್ಪತ್ರೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದರಂತೆ ನಾವು ಬಡ, ಆರ್ಥಿಕವಾಗಿ ಹಿಂದು ಳಿದವರಿಗೂ ಚಿಕಿತ್ಸೆ ನೀಡಿ ಎಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಮಾತನಾಡಿ, ಹುಟ್ಟಿದ ನವಜಾತ ಶಿಶುಗೆ ಉತ್ತಮ ಆರೈಕೆ ಸಿಕ್ಕಿದರೆ ಮಾತ್ರ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಅವರ ಮೆದುಳು ಉತ್ತಮವಾಗಿ ಬೆಳೆದು ಬುದ್ದಿವಂತವಾಗಿರಲು ಸಾಧ್ಯವಾಗುತ್ತದೆ. ಆದುದರಿಂದ ಈ ಘಟಕ ಬಹಳ ಅಗತ್ಯವಾಗಿದೆ. ಅದೇ ರೀತಿ ಹುಟ್ಟಿದ ಮಗು ಸಾವನ್ನಪುವ ಸಂಖ್ಯೆಯನ್ನು ಕೂಡ ಇದರಿಂದ ಕಡಿಮೆ ಮಾಡ ಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಹೆಚ್ಚಿನ ಹೇರಿಗೆ ಆಗುತ್ತಿದೆ. ಆದುದರಿಂದ ಅತೀ ಅಗತ್ಯವಾಗಿರುವ ಶಿಶು ತೀವ್ರ ನಿಗಾ ಘಟಕವನ್ನು ಆರಂಭಿಸಲಾಗಿದೆ. ಇದು ಕೇವಲ ಘಟಕ ಅಲ್ಲ ಮಕ್ಕಳ ಭರವಸೆ ಹಾಗೂ ಭವಿಷ್ಯ ಕೂಡ ಆಗಿದೆ. ಹುಟ್ಟಿದ ಮಗುವಿಗೆ ಮೊದಲ 24ಗಂಟೆಗಳ ಕಾಲ ಉತ್ತಮ ಆರೈಕೆ ಸಿಗದೆ ಶೇ.50 ಮಗು ಸಾವನ್ನಪ್ಪುತ್ತಿವೆ. ಆದುದರಿಂದ ಈ ಅವಧಿ ಬಹಳಷ್ಟು ಮುಖ್ಯ ವಾಗಿದೆ. ಇದನ್ನು ಮನಗಂಡು ಸುಸಜ್ಜಿತ ನಿಗಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ತಜ್ಞರಾದ ಡಾ.ಗುರುಪ್ರಸಾದ್ ಶೆಟ್ಟಿ, ಡಾ.ಜನಾರ್ದನ್ ಪ್ರಭು, ಡಾ.ಮನೋಹರ ಬೋಳೂರು ಉಪಸ್ಥಿತರಿ ದ್ದರು. ಸಿಎಸ್ಐ-ಕೆಎಸ್ಡಿಯ ಏರಿಯಾ ಚೇಯರ್ಮೆನ್ ರೆ.ಕಿಶೋರ್ ಕುಮಾರ್ ಹಾಗೂ ಕೋಶಾಧಿಕಾರಿ ರೆ.ಐವನ್ ಡಿ.ಸೋನ್ಸ್ ಪ್ರಾರ್ಥನೆ ನೆರವೇರಿಸಿದರು.
ಆಸ್ಪತ್ರೆಯ ಎಚ್ಆರ್ ಮೆನೇಜರ್ ಲಿಯೋನ ಸ್ಟ್ರೇಲಿಟಾ ಸ್ವಾಗತಿಸಿದರು. ಆಸ್ಪತ್ರೆಯ ನರ್ಸಿಂಗ್ ಶಿಕ್ಷಕಿ ನೋವಿಟಾ ನೋರೋನ್ಹಾ ವಂದಿಸಿದರು. ಆಸ್ಪತ್ರೆಯ ಹಿರಿಯ ಅಕೌಂಟೆಂಟ್ ಸ್ಯಾಂಡ್ರಾ ಜಕ್ಲೀನ್ ಕಾರ್ಯಕ್ರಮ ನಿರೂಪಿಸಿದರು.






