ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ

ಉಡುಪಿ: ಬೆಳ್ವೆ ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ ವತಿಯಿಂದ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿ ತಿಯ ಸಹಕಾರ ದೊಂದಿಗೆ ಉಡುಪಿ ಜಿಲ್ಲೆ ಮಲ್ಪೆಯ ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ ಸಾಸ್ತಾನ ಸಾಗರ್ ಪ್ಲಾಜಾ ಸಭಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಹಾಗು ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ, ಎನ್ಎನ್ಓ ಜಿಲ್ಲಾ ಖಜಾಂಚಿ ನಕ್ವ ಯಾಯ್ಯ ಸಹಾಯಧನ ನೀಡಿದರು.
ಎನ್ಎ ಒ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ, ಟಿ.ಎಂ.ಎಚ್. ಟ್ರಸ್ಟೀ ಹುಸೇನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಟ್ರಸ್ಟಿಗಳಾದ ಪೀರ್ ಸಾಹೇಬ್ ಉಡುಪಿ, ಅರ್ಫಾತ್ ಅಲ್ಬಾಡಿ, ಎನ್ಎನ್ಓ ಕುವೈಟ್ ಅಧ್ಯಕ್ಷ ಆಶ್ರಫ್ ಹಂಗಾರ ಕಟ್ಟೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಶಾಕಿರ್ ಹಾವಂಜೆ, ಸಾದಿಕ್ ಉಸ್ತಾದ್, ಬ್ರಹ್ಮಾವರ ಘಟಕದ ಉಸ್ತುವಾರಿ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಹಾನ್ ಸಾಸ್ತಾನ್, ಜಿಲ್ಲಾ ಸದಸ್ಯರಾದ ಹಾರುನ್ ರಶೀದ್ ಸಾಸ್ತಾನ್, ಬ್ರಹ್ಮಾವರ ಘಟಕದ ಅಧ್ಯಕ್ಷ ತಾಜುದ್ದೀನ್, ಉಡುಪಿ ಘಟಕದ ಅಧ್ಯಕ್ಷ ನಝಿರ್ ನೇಜಾರ್, ಸಾಗರ್ ಪ್ಲಾಜ ಮಾಲಕ ಬಿಲಾಲ್ ಸಾಗರ್ ಮೊದಲಾದವರು ಉಪಸ್ಥಿತರಿದ್ದರು.







