ಬಾವಿಗೆ ಬಿದ್ದು ಮೃತ್ಯು

ಕೊಲ್ಲೂರು, ಜ.9: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.8ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕೆರಾಡಿಯ ಹಕ್ಲುಮನೆ ನಿವಾಸಿ ಅಣ್ಣಪ್ಪ(42) ಎಂದು ಗುರುತಿಸ ಲಾಗಿದೆ.
ಇವರು 3 ದಿನಗಳ ಹಿಂದೆ ಕೂಲಿ ಕೆಲಸದ ಬಗ್ಗೆ ಹೋದವರು ನಾಪತ್ತೆ ಯಾಗಿದ್ದರು. ಹುಡುಕಾಡಿದಾಗ ಇವರ ಮೃತದೇಹ ಕೆರಾಡಿಯ ತೋಟದ ಬಾವಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





